ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಈ 5 ಮಂತ್ರ ಪಠಿಸಿ: ನಿಮ್ಮ ಅದೃಷ್ಟವೇ ಬದಲಾಗುತ್ತೆ!

ನವೆಂಬರ್ 2, 2024 - 07:09
ಅಕ್ಟೋಬರ್ 31, 2024 - 15:18
 0  16
ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಈ 5 ಮಂತ್ರ ಪಠಿಸಿ: ನಿಮ್ಮ ಅದೃಷ್ಟವೇ ಬದಲಾಗುತ್ತೆ!

ಧರ್ಮಗ್ರಂಥಗಳಲ್ಲಿ, ದಿನವನ್ನು ಒಳ್ಳೆ ಕೆಲಸದೊಂದಿಗೆ ಪ್ರಾರಂಭಿಸಲು ಸೂಚಿಸಲಾಗುತ್ತೆ. ನೀವು ಬೆಳಿಗ್ಗೆ ಎದ್ದು ಉತ್ತಮ ಕೆಲಸ ಮಾಡಿದರೆ, ಮನಸ್ಸು ಮತ್ತು ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗುತ್ತೆ. ಇದು ದಿನವಿಡೀ ಕೆಲಸ ಮಾಡಲು ಶಕ್ತಿ ನೀಡುತ್ತೆ

ಬೆಳಗ್ಗೆ ಶುಭವಾಗಿಸಲು ಧರ್ಮಗ್ರಂಥಗಳಲ್ಲಿ ಕೆಲವೊಂದು ಮಾರ್ಗಗಳನ್ನು ಸೂಚಿಸಲಾಗಿದೆ. ಈ ಮಾರ್ಗಗಳಲ್ಲಿ ಪ್ರಮುಖವಾದುದ್ದು ಮುಂಜಾನೆಯಲ್ಲಿ ಪಠಿಸಬೇಕಾದ ಮಂತ್ರ. ನಿದ್ರೆಯಿಂದ ಎಚ್ಚರವಾದ ತಕ್ಷಣ ಈ ಮಂತ್ರಗಳನ್ನು ಪಠಿಸುವುದರಿಂದ ನಮ್ಮ ಸಂಪೂರ್ಣ ದಿನವು ಶುಭವಾಗಲಿದೆ. ಇದರಿಂದ ನಮ್ಮ ಜೀವನದ ಎಲ್ಲಾ ಸಮಸ್ಯೆಗಳು ದೂರಾಗುತ್ತದೆ. ಮುಂಜಾನೆ ಮಂತ್ರದಿಂದ ಅದೃಷ್ಟ ಬರುವುದು ಮತ್ತು ಆರ್ಥಿಕ ಸಮಸ್ಯೆಗಳು ದೂರಾಗುವುದು. ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಆ ಮಂತ್ರಗಳಾವುವು ತಿಳಿದುಕೊಳ್ಳಿ

ಮಂತ್ರ: ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ

ಕರಮೂಲೇತು ಗೋವಿಂದ ಪ್ರಭಾತೇ ಕರದರ್ಶನಂ ||

ವಿಧಾನ: ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಎರಡೂ ಅಂಗೈಯನ್ನು ಜೋಡಿಸಿ ನೋಡಿ. ನಂತರ ನೀವು ಹಾಸಿಗೆಯ ಮೇಲೆ ಕುಳಿತು ಈ ಮೇಲಿನ ಮಂತ್ರವನ್ನು ಹೇಳಬೇಕು.

ಅರ್ಥ ಅಥವಾ ಪ್ರಯೋಜನ: ನಮ್ಮ ಕೈಯ ಅಗ್ರಭಾಗ ಅಂದರೆ ಮುಂದಿನ ಭಾಗದಲ್ಲಿ ವಾಸವಾಗಿರುವ ಲಕ್ಷ್ಮಿಗೆ, ಕೈ ಮಧ್ಯದಲ್ಲಿ ವಾಸವಾಗಿರುವ ಸರಸ್ವತಿ ದೇವಿಗೆ ಮತ್ತು ಮೂಲಭಾಗದಲ್ಲಿ ವಾಸವಾಗಿರುವ ಗೋವಿಂದನಿಗೆ ನಮಸ್ಕಾರವನ್ನು ಸಲ್ಲಿಸುವಿಕೆ. ಮುಂಜಾನೆ ಎದ್ದಾಕ್ಷಣ ಈ ಮೂರು ದೇವರ ಆಶೀರ್ವಾದವನ್ನು ಪಡೆಯುವ ವಿಧಾನವಿದು.

ಉತ್ತಮ ಆರೋಗ್ಯಕ್ಕಾಗಿ ಮುಂಜಾನೆ ಈ ಮಂತ್ರ ಪಠಿಸಿ

ಮನುಷ್ಯೋ ಮತ್ಪ್ರಸಾದೇನ್‌ ಭವಿಶ್ಯತಿ ನ ಸಂಶಯ ||

ಅರ್ಥ ಅಥವಾ ಪ್ರಯೋಜನ: ಓ ದೇವಿಯ ನೀನು ನನಗೆ ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸು. ಹಾಗೂ ಪರಮ ಸುಖವನ್ನು, ಸುಂದರ ರೂಪವನ್ನು, ಜೀವನದಲ್ಲಿ ಜಯವನ್ನು, ಯಶಸ್ಸನ್ನು ನೀಡಿ, ಕಾಮ - ಕ್ರೋದದಂತಹ ದುಷ್ಚಟಗಳನ್ನು ದೂರಾಗಿಸು ಎಂದು ಪ್ರಾರ್ಥಿಸುವುದು.

ಸಮಾಜದಲ್ಲಿ ಗೌರವ ಮತ್ತು ಸನ್ಮಾನಕ್ಕಾಗಿ ಮುಂಜಾನೆ ಈ ಮಂತ್ರ ಪಠಿಸಿ

ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ ||

ಅರ್ಥ ಅಥವಾ ಪ್ರಯೋಜನ: ಓ ತಾಯಿ ಭಗವತಿ ನಾರಾಯಣೀ ನೀವು ಎಲ್ಲಾ ಸಮಯಗಳಲ್ಲೂ, ಸಂದರ್ಭದಲ್ಲೂ ಮಂಗಳವನ್ನೇ ನೀಡುವುದರಿಂದ ನೀವು ಮಂಗಳಮಯಿಯಾಗಿದ್ದೀರಿ. ನೀವು ಕಲ್ಯಾಣ ದಾಯಿನಿ. ನಿರಾಶ್ರಿತರಿಗೆ ವಾತ್ಸಲ್ಯವನ್ನು ತೋರುವ, ಮೂರು ಕಣ್ಣುಗಳನ್ನು ಗೌರಿ ದೇವಿಯೇ ನಿಮಗೆ ನಮಸ್ಕಾರಗಳು

ಶತ್ರು ನಾಶಕ್ಕಾಗಿ ಮುಂಜಾನೆ ಈ ಮಂತ್ರ ಪಠಿಸಿ

ಮಂತ್ರ: ಓಂ ಹ್ರೀಂ ಲ್ರೀ ಬಗಲಾಖಿ ಮಮ ಸರ್ವದುಷ್ಟಾನಾಂ ವಾಚಂ ಮುಖಂ ಪದಂ|

ಸ್ತಂಭಯ ಜೀವ್ಹಾಂ ಕೀಳಯ ಬುದ್ಧೀಂ ವಿನಾಶಾಯ ಹ್ರೀಂ ಲ್ರೀ ಓಂ ಸ್ವಾಹಾ ||

ಅರ್ಥ ಅಥವಾ ಪ್ರಯೋಜನ: ಒಂದು ವೇಳೆ ನೀವು ಶತ್ರುಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಈ ಮಂತ್ರವನ್ನು ಕನಿಷ್ಟ 10,000 ಬಾರಿಯಾದರೂ ಜಪಿಸಬೇಕು. ಜೀವನ ಮತ್ತು ಮರಣದಂತಹ ಸಮಸ್ಯೆಗಳನ್ನು ಶತ್ರುಗಳಿಂದ ಎದುರಿಸುತ್ತಿದ್ದರೆ ಕನಿಷ್ಟ 1ಲಕ್ಷ ಬಾರಿಯಾದರೂ ಈ ಮಂತ್ರವನ್ನು ಪಠಿಸಿ. ಇದರಿಂದ ನಿಮ್ಮ ಸಮಸ್ಯೆಗಳು ದೂರಾಗುತ್ತದೆ ಮತ್ತು ಶತ್ರುಗಳೊಡನೆ ಹೋರಾಡುವಾಗ ಯಶಸ್ಸು ನಿಮ್ಮದಾಗಲಿದೆ.

ಸಾಲದಿಂದ ಮುಕ್ತಿಹೊಂದಲು ಮುಂಜಾನೆ ಈ ಮಂತ್ರ ಪಠಿಸಿ

ಮಂತ್ರ: ಓಂ ಗಂ ಋಣಹರ್ತಾಯೈ ನಮಃ ಅಥವಾ

ಓಂ ಚಿಂದಿ ಚಿಂದಿ ವರೈಣ್ಯಂ ಸ್ವಾಹಾ

ಅರ್ಥ ಅಥವಾ ಪ್ರಯೋಜನ: ಸಾಲದಿಂದ ನನ್ನನ್ನು ಮುಕ್ತಿಗೊಳಿಸುವ ಭಗವಾನ್‌ ಗಣೇಶನಿಗೆ ನನ್ನ ನಮಸ್ಕಾರಗಳು. ಈ ಮಂತ್ರವನ್ನು ಜಪಿಸುವುದರಿಂದ ವಿಘ್ನನಿವಾರಕನಾದ ಗಣೇಶನನ್ನು ಸಾಲ ಬಾಧೆಯನ್ನು ದೂರಾಗಿಸುತ್ತಾನೆ ಹಾಗೂ ಮುಂದಿನ ದಿನಗಳಲ್ಲಿ ನೀವು ಸಾಲದ ಬಾಧೆಯನ್ನು ಅನುಭವಿಸದಂತೆ ಕಾಪಾಡುತ್ತಾನೆ

ವಿದ್ಯೆ ಪಡೆಯಲು ಮುಂಜಾನೆ ಈ ಮಂತ್ರ ಪಠಿಸಿ

ಮಂತ್ರ: ವಿದ್ಯಾಃ ಸಮಸ್ತಾಸ್ತವ ದೇವಿ ಭೇದಾಃ|

ಸ್ತ್ರೀಯಃ ಸಮಸ್ತಾಃ ಸಕಲಾ ಜಗತ್ಸು|

ತ್ವಯೈಕಯಾ ಪೂರಿತಮಂಬಯೈತತ್

ಕಾತೇ ಸ್ತುತಿಃ ಸ್ತವ್ಯಪರಾ ಪರೋಕ್ತಿಃ ||

ಅರ್ಥ ಅಥವಾ ಪ್ರಯೋಜನ: ದೇವಿ ಪ್ರಪಂಚದ ಎಲ್ಲಾ ವಿದ್ಯೆಯು ನಿಮ್ಮ ಭಿನ್ನ ಭಿನ್ನ ರೂಪವಾಗಿದೆ. ಜಗತ್ತಿನಾದ್ಯಂತ ಇರುವ ಸ್ತ್ರೀಯರೆಲ್ಲರೂ ನಿಮ್ಮ ಮೂರ್ತಿಗೆ ಸಮಾನರು. ಜಗದಂಬಾ ಸಂಪೂರ್ಣ ಜಗವನ್ನೇ ವಿಸ್ತರಿಸಿಕೊಂಡವರು ನೀವು. ನಿಮ್ಮನ್ನು ಎಷ್ಟು ಹೊಗಳಿದರೂ ಸಾಲದು. ನೀವು ಹೊಗಳಿಕೆಗೂ ಮೀರಿದವರಾಗಿದ್ದೀರಿ. ಈ ಮಂತ್ರದಿಂದ ತಾಯಿ ಸರಸ್ವತಿ ಸಂತೋಷಗೊಂಡು ವಿದ್ಯೆಯನ್ನು ಆಶೀರ್ವದಿಸುತ್ತಾಳೆ

ಮಂತ್ರ: ಓಂ ಸರ್ವಬಾಧಾ ವಿನಿರ್ಮುಕ್ತೋ ಧನಧಾನ್ಯ ಸುತಾನ್ವಿತಃ|

ಮನುಷ್ಯೋ ಮತ್ಪ್ರಸಾದೇನ್‌ ಭವಿಶ್ಯತಿ ನ ಸಂಶಯ ||

ಅರ್ಥ ಅಥವಾ ಪ್ರಯೋಜನ: ನಿರಂತರ ಆರ್ಥಿಕ ಅಭಿವೃದ್ಧಿಗಾಗಿ ಕೂಡ ನೀವು ಮುಂಜಾನೆ ಎದ್ದಾಕ್ಷಣ ಇದೇ ಮಂತ್ರವನ್ನು ಪಠಿಸಬೇಕು. ತಾಯಿ ನನ್ನೆಲ್ಲಾ ಸಮಸ್ಯೆಗಳನ್ನು ಅಥವಾ ಕಷ್ಟಗಳನ್ನು ದೂರಾಗಿಸಿ, ಧನ ಮತ್ತು ಧಾನ್ಯವನ್ನು ವೃದ್ಧಿಸು ಎಂದು ದೇವಿಯನ್ನು ಪ್ರಾರ್ಥಿಸಬೇಕು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow