ಪೂಜೆ ವೇಳೆ ಇವುಗಳನ್ನು ಹಾಕಿ ದೀಪ ಬೆಳಗಿಸಿದರೆ ಹಣದ ರಾಶಿಯೇ ಹರಿದು ಬರುತ್ತಂತೆ!

ಜನವರಿ 10, 2025 - 07:01
 0  11
ಪೂಜೆ ವೇಳೆ ಇವುಗಳನ್ನು ಹಾಕಿ ದೀಪ ಬೆಳಗಿಸಿದರೆ ಹಣದ ರಾಶಿಯೇ ಹರಿದು ಬರುತ್ತಂತೆ!

ಸನಾತನ ಸಂಪ್ರದಾಯದಲ್ಲಿ ಪ್ರತಿನಿತ್ಯವೂ ದೇವರನ್ನು ಪೂಜಿಸುವ ವಾಡಿಕೆ, ಆಚರಣೆ ಇದೆ. ಹೀಗೆ ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ ಎಂಬ ನಂಬಿಕೆ ಇದೆ. ಅದಕ್ಕಾಗಿಯೇ ದೈನಂದಿನ ದೇವರ ಪೂಜೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ, ದೇವರುಗಳನ್ನು ಪೂಜಿಸಲು ವಿವಿಧ ದೇವತೆಗಳು ಮತ್ತು ಆಚರಣೆಗಳನ್ನು ಸೂಚಿಸಲಾಗುತ್ತದೆ. ಅದರಲ್ಲೊಂದು ದೇವರನ್ನು ಪೂಜಿಸುವಾಗ ದೀಪವನ್ನು ಹಚ್ಚುವ ಸಂಪ್ರದಾಯವಿದೆ. 

ಹಿಂದೂ ಧರ್ಮದಲ್ಲಿ ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ದೀಪವನ್ನು ಹಚ್ಚಿಡುವ ಸಂಪ್ರದಾಯವಿದೆ. ಅದರಲ್ಲೂ ನಾವು ಸಂಜೆ ಸಮಯದಲ್ಲಿ ದೀಪಗಳನ್ನು ಬೆಳಗುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಸಂಜೆ ಸಮಯದಲ್ಲಿ ನೀವು ಬೆಳಗುವ ದೀಪಕ್ಕೆ ಇವುಗಳನ್ನು ಬೆರೆಸಿ ದೀಪವನ್ನು ಬೆಳಗಿದರೆ ಸಾಕಷ್ಟು ಲಾಭವನ್ನು ಪಡೆದುಕೊಳ್ಳುತ್ತೀರಿ. ಆ ವಸ್ತುಗಳು ಹೀಗಿವೆ

ಎಳ್ಳು:- 

ಎಳ್ಳು ಪಿತೃಗಳೊಂದಿಗೆ ಮತ್ತು ಶನಿ ದೇವನೊಂದಿಗೆ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇಂತಹ ಸಂದರ್ಭದಲ್ಲಿ ಸಂಜೆ ವೇಳೆ ನೀವು ದೀಪವನ್ನು ಬೆಳಗುವಾಗ ಅದಕ್ಕೆ ಎಳ್ಳುಗಳನ್ನು ಸೇರಿಸಿ ದೀಪವನ್ನು ಬೆಳಗಬೇಕು. ಇದು ನಿಮಗೆ ಶುಭ ಫಲಗಳನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ. ಸಂಜೆ ಸಮಯದಲ್ಲಿ ದೀಪಕ್ಕೆ ಎಳ್ಳನ್ನು ಹಾಕಿ ದೀಪವನ್ನು ಬೆಳಗುವುದರಿಂದ ಪಿತೃಗಳ ಆಶೀರ್ವಾದದೊಂದಿಗೆ ಶನಿ ದೇವನ ಆಶೀರ್ವಾದವನ್ನು ಕೂಡ ನೀವು ಪಡೆದುಕೊಳ್ಳುತ್ತೀರಿ. ಈ ದೀಪವನ್ನು ಹಚ್ಚುವುದರಿಂದ ನಿಮಗೆ ಶನಿ ದೋಷ ಹಾಗೂ ಪಿತೃ ದೋಷದಿಂದ ಮುಕ್ತಿ ದೊರೆಯುವುದು

ಕರ್ಪೂರ ಸೇರಿಸಿ:

ಕರ್ಪೂರವು ಶುಕ್ರ ಗ್ರಹದೊಂದಿಗೆ ಸಂಬಂಧವನ್ನು ಹೊಂದಿರುವ ಪೂಜೆ ಸಾಮಾಗ್ರಿಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಜೆ ಸಮಯದಲ್ಲಿ ದೀಪಕ್ಕೆ ಕರ್ಪೂರವನ್ನು ಹಾಕಿ ದೀಪವನ್ನು ಬೆಳಗುವುದರಿಂದ ನಿಮ್ಮ ಜಾತಕದಲ್ಲಿ ಶುಕ್ರನ ಸ್ಥಾನವು ಬಲಗೊಳ್ಳುವುದು. ಶುಕ್ರನ ಮಂಗಳಕರ ಪ್ರಭಾವದಿಂದಾಗಿ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ಅದೃಷ್ಟ, ಸೌಂದರ್ಯ ಮತ್ತು ಸಮೃದ್ಧಿಯನ್ನು ಪಡೆದುಕೊಳ್ಳುತ್ತಾನೆ ಎನ್ನುವ ನಂಬಿಕೆಯಿದೆ

ಲವಂಗವನ್ನು ಸೇರಿಸಿ

ಲವಂಗವನ್ನು ರಾಹು ಮತ್ತು ಕೇತುಗಳಿಗೆ ಸಂಬಂಧಿಸಿದ ವಸ್ತುಗಳೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ನಾವು ದೀಪವನ್ನು ಬೆಳಗುವಾಗ ಅದರಲ್ಲಿ ಲವಂಗವನ್ನು ಹಾಕಿ ಬೆಳಗುವುದರಿಂದ ರಾಹು - ಕೇತುಗಳ ದುಷ್ಪರಿಣಾಮಗಳು ನಾಶವಾಗುವುದು. ಲವಂಗವು ಸಕಾರಾತ್ಮಕ ಶಕ್ತಿ ಮತ್ತು ಆರ್ಥಿಕ ಸಮೃದ್ಧಿಯನ್ನು ಆಕರ್ಷಿಸುವ ಶಕ್ತಿಯುತ ವಸ್ತುವಾಗಿದೆ. ನಿಯಮಿತವಾಗಿ ಮನೆಯಲ್ಲಿ ಲವಂಗವನ್ನು ಹಾಕಿ ದೀಪವನ್ನು ಬೆಳಗುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಆಕರ್ಷಣೆ ಹೆಚ್ಚಾಗುವುದು

ದಾಲ್ಚಿನ್ನಿ ಎಲೆಯನ್ನು ಸೇರಿಸಿ

ದಾಲ್ಚಿನ್ನಿ ಎಲೆಯನ್ನು ಪಲಾವ್‌ ಎಲೆಯೆಂದೂ ಕರೆಯಲಾಗುತ್ತದೆ. ಈ ಪಲಾವ್‌ ಎಲೆಗಳನ್ನು ದೀಪದಲ್ಲಿ ಹಾಕಿ ದೀಪವನ್ನು ಬೆಳಗುವುದರಿಂದ ಲಕ್ಷ್ಮಿ ಮತ್ತು ಕುಬೇರನ ಅನುಗ್ರಹ ಪ್ರಾಪ್ತವಾಗುವುದು. ಇದಕ್ಕಾಗಿ ನೀವು ದಾಲ್ಚಿನ್ನಿ ಎಲೆಗಳನ್ನು ಪುಡಿ ಮಾಡಿ ಆ ಪುಡಿಯನ್ನು ದೀಪದ ಎಣ್ಣೆಯಲ್ಲಿ ಹಾಕಿ ದೀಪವನ್ನು ಬೆಳಗಿಸಬೇಕು.

ಏಲಕ್ಕಿ ಸೇರಿಸಿ

ಏಲಕ್ಕಿಯನ್ನು ಸೇರಿಸಿ ದೀಪವನ್ನು ಬೆಳಗುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ಪ್ರಾಪ್ತವಾಗುವುದು. ದೀಪದಲ್ಲಿ ಏಲಕ್ಕಿಯನ್ನು ಹಾಕಿ ದೀಪವನ್ನು ಬೆಳಗುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗುವುದು. ನಿಯಮಿತವಾಗಿ ನೀವು ಈ ದೀಪವನ್ನು ಬೆಳಗುವುದರಿಂದ ಮನೆಯಲ್ಲಿ ಲಕ್ಷ್ಮಿ ದೇವಿಯ ನೆಲೆಯಾಗುವುದು

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow