ಬಿಗ್ ಮನೆಗೆ ಬಂದ ಅದಿತಿ, ಶರಣ್: ಫಿನಾಲೆ ಟಿಕೆಟ್ ಕೊಟ್ಟಿರುವುದು ಯಾರಿಗೆ ಗೊತ್ತಾ!?

ಜನವರಿ 10, 2025 - 20:03
 0  35
ಬಿಗ್ ಮನೆಗೆ ಬಂದ ಅದಿತಿ, ಶರಣ್: ಫಿನಾಲೆ ಟಿಕೆಟ್ ಕೊಟ್ಟಿರುವುದು ಯಾರಿಗೆ ಗೊತ್ತಾ!?

ವಿಭಿನ್ನ ವ್ಯಕ್ತಿತ್ವಗಳ ಜೊತೆ ಬದುಕುವುದು ಅಷ್ಟು ಸುಲಭವಲ್ಲ. ಇದು ಬಿಗ್​​ಬಾಸ್​ ಮನೆಯಲ್ಲಿ ಮತ್ತೆ, ಮತ್ತೆ ಪ್ರೂವ್​ ಆಗ್ತಾನೆ ಇರುತ್ತೆ. ಫಿನಾಲೆ ಟಿಕೆಟ್​ ಪಡೆಯೋದಕ್ಕೆ ಹೋರಾಟ ನಡೀತಿದೆ. ಹಲವು ವಾಗ್ವಾದಗಳಿಗೆ ಬಿಗ್​ಬಾಸ್​ ಮನೆ ಸಾಕ್ಷಿಯಾಗಿದೆ. 

ಬಿಗ್​ ಬಾಸ್​ ಕನ್ನಡ ಸೀಸನ್​ 11 ರೋಚಕ ಘಟ್ಟವನ್ನು ತಲುಪಿದೆ. ಈ ವಾರ ಟಿಕೆಟ್‌ ಟು ಫಿನಾಲೆಗಾಗಿ ಜಿದ್ದಾಜಿದ್ದಿಯ ಹೋರಾಟ ಬಿಗ್ ಬಾಸ್ ಮನೆಯಲ್ಲಿ ಜೋರಾಗಿದ್ದು, ಇರುವ ಒಂಬತ್ತು ಜನರ ಪೈಕಿ ಒಬ್ಬರು ಈ ವಾರವೇ ಫಿನಾಲೆಗೆ ಹೋಗುವುದು ಖಚಿತವಾಗಿದೆ. ಹೀಗಾಗಿ ಬಿಗ್‌ ಬಾಸ್ ಮನೆಯೊಳಗೆ ಟಾಸ್ಕ್‌ ಕಾವು ಹೆಚ್ಚಾಗಿದ್ದು, ಆಟದ ಜೊತೆಗೆ ಹೊಡೆದಾಟ ಬಡಿದಾಟಗಳು ಕೂಡ ಜೋರಾಗಿ ನಡೆಯುತ್ತಿದೆ. 

ಬಿಗ್ ಬಾಸ್ ಸೀಸನ್ 11 ಇನ್ನೇನು ಕೆಲವು ದಿನಗಳು ಮಾತ್ರ ಈ ಶೋ ನಡೆಯಲಿದ್ದು ಅಷ್ಟರಲ್ಲೇ ಅದೃಷ್ಟಶಾಲಿ ಯಾರೆಂದು ಆಯ್ಕೆ ಮಾಡಬೇಕಿದೆ. ಈ ಸಂಬಂಧ ಈ ವಾರದ ಫಿನಾಲೆಗೆ ಹೋಗುವ ಒಬ್ಬ ಆಟಗಾರರ ಹೆಸರು ಹೇಳಲು ನಟ ಶರಣ್ ಹಾಗೂ ಅದಿತಿ ಪ್ರಭುದೇವ ಅವರು ಬಿಗ್​ಬಾಸ್ ಮನೆಗೆ ಆಗಮಿಸಿದ್ದಾರೆ.

ಬಿಗ್​ಬಾಸ್ ಕೊಟ್ಟಿರುವ ಟಾಸ್ಕ್ ಅನ್ನು ರಜತ್ ಕಿಶನ್, ಹನುಮಂತು, ಭವ್ಯ ಹಾಗೂ ತ್ರಿವಿಕ್ರಮ್ ಈ ನಾಲ್ವರು ಸರದಿಯಲ್ಲಿ ಆಡಬೇಕಾಗಿದೆ. ಟ್ರಂಕ್​ನಲ್ಲಿರುವ ಬಾವುಟ ಇರುವ ಸ್ಟಿಕ್ ತೆಗೆದುಕೊಂಡು ಹಗ್ಗಗಳಿಂದ ಮಾಡಿದ ಬಲೆಯನ್ನು ಹಿಡಿದು ಮೇಲಕ್ಕೆ ಏರಬೇಕಿದೆ. ಬಳಿಕ ಅಲ್ಲಿ ಹೋಗಿ ಬಾವುಟದ ಸ್ಟಿಕ್ ಇಟ್ಟು ಬಿಗ್​ಬಾಸ್ ಎಂದು ಕೂಗಿ ಹೇಳಬೇಕು. ಈ ಟಾಸ್ಕ್ ಅನ್ನು ಸ್ಪರ್ಧಿಗಳು ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕು. 

ಸದ್ಯ ಈ ಟಾಸ್ಕ್​ಗೆ ಅಣಿಯಾಗಿರುವ ತ್ರಿವಿಕ್ರಮ್, ರಜತ್ ಕಿಶನ್, ಭವ್ಯ ಹಾಗೂ ಹನುಮಂತು ಇವರಲ್ಲಿ ಯಾರು ಅತ್ಯಂತ ಕಡಿಮೆ ಅವಧಿಯಲ್ಲಿ ಆಟ ಮುಗಿಸುತ್ತಾರೋ ಅವರು ಫಿನಾಲೆಗೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಡಲಿದ್ದಾರೆ. ಮನೆಗೆ ಅತಿಥಿಯಾಗಿ ಆಗಮಿಸಿರುವ ಅದಿತಿ ಹಾಗೂ ಚರಣ್ ಅವರು ಸ್ಪರ್ಧಿಯನ್ನು ಗುರುತಿಸಿದ್ದಾರೆ. ನೇರವಾಗಿ ಫಿನಾಲೆಗೆ ಹೋಗುವಂತ ಒಬ್ಬ ಸ್ಪರ್ಧಿ ಎಂದು ಶರಣ್ ಹೇಳಿದ್ದಾರೆ. ಆದರೆ ಸ್ಪರ್ಧಿ ಯಾರು ಎಂದು ಹೆಸರನ್ನು ಬಹಿರಂಗ ಪಡಿಸಿಲ್ಲ.

ಇನ್ನು ಗೇಮ್​ನಲ್ಲಿ ಭವ್ಯ, ಹನುಮಂತು, ತ್ರಿವಿಕ್ರಮ್, ಕ್ಯಾಪ್ಟನ್ ರಜತ್ ಎಲ್ಲರೂ ಮೇಲೆ ಏರಿ ಟಾಸ್ಕ್ ಪೂರ್ಣಗೊಳಿಸಿ, ಬಾವುಟವನ್ನಿಟ್ಟು ಬಿಗ್​ಬಾಸ್ ಎಂದು ಕೂಗಿದ್ದಾರೆ. ಆದರೆ ಯಾರು ಕಡಿಮೆ ಅವಧಿಯಲ್ಲಿ ಟಾಸ್ಕ್ ಪೂರ್ಣಗೊಳಸಿದ್ದಾರೆ, ಯಾರು ಗೆಲುವು ಪಡೆದಿದ್ದಾರೆ ಎನ್ನುವುದು ಮಾತ್ರ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow