ಬುದ್ಧಿವಂತರ ಆಟದಲ್ಲಿ ಸ್ನೇಹಿತರೇ ದೂರ-ದೂರ: ಬಿಗ್ ಬಾಸ್ ಕೊಟ್ಟ ಟಾಸ್ಕ್ʼನಿಂದ ಕುಚಿಕುಗಳಲ್ಲಿ ಮುನಿಸು!

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಐದನೇ ವಾರಕ್ಕೆ ಕಾಲಿಟ್ಟಿದೆ.
ಇದೀಗ ಬಿಗ್ಬಾಸ್ ಮನೆಯಲ್ಲಿ ತುಂಬಾ ಕ್ಲೋಸ್ ಆಗಿದ್ದ ಗೌತಮಿ, ಮೋಕ್ಷಿತಾ ಹಾಗೂ ಉ್ರಗಂ ಮಂಜು ಅವರ ನಡುವೆ ಬಿರುಕು ಮೂಡಿಬಿಡ್ತಾ ಅಂತ ಅನುಮಾನ ಶುರುವಾಗಿದೆ.
ಬಿಗ್ಬಾಸ್ ಶುರುವಾದಾಗಿನಿಂದ ಈ ಮೂವರು ಸ್ನೇಹಿತರಾಗಿದ್ದರು. ಏನೇ ಆದರೂ ಈ ಇಬ್ಬರು ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದರೆ ಇದೀಗ ಬಿಗ್ಬಾಸ್ ಕೊಟ್ಟ ಒಂದೇ ಒಂದು ಟಾಸ್ಕ್ನಿಂದ ಈ ಮೂವರು ದಿಕ್ಕಾಪಾಲು ಆಗಿದ್ದಾರೆ. ಬಿಗ್ಬಾಸ್ ಕೊಟ್ಟಿದ್ದ ಬುದ್ಧಿವಂತರ ಆಟದಿಂದ ಫ್ರೆಂಡ್ಶಿಪ್ಗೆ ಪೂರ್ಣವಿರಾಮ ಬಿತ್ತಾ ಅಂತ ವೀಕ್ಷಕರಲ್ಲಿ ಗೊಂದಲ ಮನೆ ಮಾಡಿದೆ.
ಟಾಸ್ಕ್ ಆಡುತ್ತಿದ್ದ ಉಗ್ರಂ ಮಂಜು ಅವರು ಬುದ್ಧಿವಂತಿಕೆಯಿಂದ ಆಡಿದ್ದರು. ಆಗ ಗೌತಮಿ ಹಾಗೂ ಮೋಕ್ಷಿತಾ ಅವರ ಆಟವನ್ನು ನೋಡಿ ಬೇಸರ ಹೊರ ಹಾಕಿದ್ದಾರೆ. ಈ ಮೂವರ ಜಗಳ ಶುರುವಾಗಿದ್ದು ಹೇಗೆ? ಈ ಜಗಳಕ್ಕೆ ಮುಖ್ಯ ಕಾರಣವೇನು? ಇದಾದ ಬಳಿಕ ಏನೆಲ್ಲಾ ಆಯ್ತು? ಎಂಬುವುದರ ಬಗ್ಗೆ ಇಂದಿನ ಎಪಿಸೋಡ್ ಮೂಲಕ ತಿಳಿದು ಬರಲಿದೆ
ನಿಮ್ಮ ಪ್ರತಿಕ್ರಿಯೆ ಏನು?






