ಮೊಬೈಲ್ ಟವರನ್ನೇ ಹೊತ್ತೊಯ್ದ ಕಳ್ಳರು..! ದೂರು ದಾಖಲಿಸಿದ ಕಂಪನಿ

ಅಕ್ಟೋಬರ್ 25, 2024 - 21:56
 0  11
ಮೊಬೈಲ್ ಟವರನ್ನೇ ಹೊತ್ತೊಯ್ದ ಕಳ್ಳರು..! ದೂರು ದಾಖಲಿಸಿದ ಕಂಪನಿ

ಖದೀಮರು ಮನೆಗೆಕನ್ನ ಹಾಕುವುದನ್ನು ನೀವು ಕೇಳಿರಬಹುದು. ದರೋಡೆ ಮಾಡಿದ್ದು, ಸುಲಿಗೆ, ವಿವಿಧ ವೇಷಗಳಲ್ಲಿ ಬಂದು ಚಿನ್ನಾಭರಣ ಕದ್ದಿದ್ದು ನೋಡಿರಬಹುದು. ಒಂಟಿ ಮಹಿಳೆಯರ ಸರ ಕದಿಯುವುದು, ಚಿನ್ನದ ಅಂಗಡಿಗೆ ನುಗ್ಗಿ ಕಳ್ಳತನ ಮಾಡುವುದು , ಮೊಬೈಲ್ ಅಂಗಡಿಗಳಲ್ಲಿ ವಸ್ತುಗಳನ್ನು, ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ಕದ್ದು, ದುಡ್ಡು ಎಗರಿಸಿದ್ದು ಗೊತ್ತಿರುತ್ತದೆ. ಅಷ್ಟೇ ಯಾಕೆ ದೇವಸ್ಥಾನದ ಹುಂಡಿ, ಮೂರ್ತಿ, ಚಿನ್ನ ಮತ್ತು ಬೆಳ್ಳಿಯ ಮೂರ್ತಿಗಳ ಕದ್ದು ಪರಾರಿಯಾಗಿದ್ದು ನೋಡಿರಬಹುದು.

ಆದ್ರೆ ಈಗ ಶಿವಮೊಗ್ಗದಲ್ಲಿ ಮೊಬೈಲ್ ಟವರ್‌ ಅನ್ನೇ ಕದ್ದ ಘಟನೆ ನಡೆದಿದೆ. ಹೌದು ಖಾಸಗಿ ಸಂಸ್ಥೆಯೊಂದು 2008ರಲ್ಲಿ ಶಿವಮೊಗ್ಗದ ಟಿಪ್ಪು ನಗರದಲ್ಲಿನ ಖಾಲಿ ಜಾಗದಲ್ಲಿ ಮೊಬೈಲ್ ಟವರ್ ಅಳವಡಿಸಿತ್ತು. ಸುತ್ತಮುತ್ತಲಿನ ನೆಟ್ವರ್ಕ್ ಅದೇ ಸಂಸ್ಥೆ ಟವರ್ ನಿರ್ವಹಣೆ ಮಾಡುತ್ತಿತ್ತು. ಆದರೆ ಕೊರೊನಾ ಸಂದರ್ಭ ಸಿಬ್ಬಂದಿ ಇಲ್ಲದೆ ನಿರ್ವಹಣೆ ಮಾಡಲು ಸಾಧ್ಯವಾಗಿರಲಿಲ್ಲ.

  ಕೊರೊನಾ ಬಳಿಕ ಸಂಸ್ಥೆ ಸಿಬ್ಬಂದಿ ಸ್ಥಳಕ್ಕೆ ಬಂದು ನೋಡಿದಾಗ ಮೊಬೈಲ್ ಟವರ್ ಮತ್ತು ಅದಕ್ಕೆ ಅಳವಡಿಸಿದ್ದ ಬಿಡಿ ಭಾಗಗಳೇ ನಾಪತ್ತೆಯಾಗಿದ್ದವು. ಸುಮಾರು ₹46.30 ಲಕ್ಷ ಮೌಲ್ಯದ ಟವ‌ರ್ ಮತ್ತು ಬಿಡಿ ಭಾಗಗಳು ಕಳ್ಳತನವಾಗಿದೆ. ಈ ಸಂಬಂಧ ಖಾಸಗಿ ಸಂಸ್ಥೆ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟವರ್ ಕದ್ದ ಖದೀಮರ ಪತ್ತೆಗೆ ಮುಂದಾಗಿರುವ ಪೊಲೀಸರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow