ರೀ ನಾನು ಎಜುಕೇಟೆಡ್, ನನಗೂ ಕಾಮನ್ ಸೆನ್ಸ್ ಇದೆ: ಕನ್ನಡ ಬರಲ್ಲ ಎಂಬ ವದಂತಿಗೆ ತಂಗಡಗಿ ಗರಂ!

ಕೊಪ್ಪಳ:- ರೀ ನಾನು ಎಜುಕೇಟೆಡ್, ನನಗೂ ಕಾಮನ್ ಸೆನ್ಸ್ ಇದೆ ಎಂದು ಕನ್ನಡ ಬರಲ್ಲ ಎಂಬ ವದಂತಿಗೆ ಶಿವರಾಜ್ ತಂಗಡಗಿ ಗರಂ ಆಗಿದ್ದಾರೆ.
ಜಿಲ್ಲೆಯ ಕಾರಟಗಿಯಲ್ಲಿ ಅಂಗನವಾಡಿ ಕೇಂದ್ರದ ಉದ್ಘಾಟನೆಗೆ ತೆರಳಿದ್ದ ಸಚಿವ ಹೋದ ಕೆಲಸ ಮಾಡೋದನ್ನು ಬಿಟ್ಟು ಕನ್ನಡ ಪ್ರದರ್ಶಿಸುವ ಭರದಲ್ಲಿ ಕಪ್ಪು ಹಲಗೆಯ ಮೇಲೆ ಶುಭವಾಗಲಿ ಎಂದು ಬರೆಯುವ ಬದಲ ಶುಬವಾಗಲಿ ಅಂತ ಬರೆದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅಲ್ಲದೇ ಸಾಕಷ್ಟು ಟೀಕೆ ಕೂಡ ವ್ಯಕ್ತವಾಗಿತ್ತು.
ಇದಕ್ಕೆ ಇದೀಗ ಸಚಿವರು ಸಮರ್ಥನೆಗೆ ಇಳಿದಿದ್ದಾರೆ. ಕೊಪ್ಪಳದಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಾನು ಬಿಎಸ್ಸಿ ಪದವೀಧರ, ಕನ್ನಡ ಬರೆಯಲು ಬಾರದಷ್ಟು ದಡ್ಡನಲ್ಲ. ಪೂರ್ತಿ ಬರೆಯುವವರೆಗೆ ಕಾಯುವ ತಾಳ್ಮೆ ಇಲ್ಲದವರು ವಿಡಿಯೋ ಮಾಡಿದ್ದಾರೆ. ನಾನು ಬೇರೆ ಏನೋ ಬರೆಯಲು ಮುಂದಾಗಿದ್ದೇ,
ಆದರೆ ಅಲ್ಲಿದ್ದವರು ಶುಭವಾಗಲಿ ಎಂದು ಬರೆಯಲು ಹೇಳಿದ್ದರು ಆಗ ಭ ಅಕ್ಷರದಲ್ಲಿ ಸ್ವಲ್ಪ ತಪ್ಪಾಗಿತ್ತು ಎಂದಿದ್ದಾರೆ. ಆದರೆ ಅಕ್ಷರ ಬರೆಯಲಾರದ ಸ್ಥಿತಿಯಲ್ಲಿ ನಾನಿಲ್ಲ, ನನ್ನ ಬಗ್ಗೆ ಮಾತಾಡುವವರು ತಾಳ್ಮೆ ಪರೀಕ್ಷೆ ಮಾಡಬೇಡಿ. ಕಳೆದ ಹನ್ನೆರಡು ವರ್ಷಗಳಿಂದ ನಾನು ರಾಜಕೀಯದಲ್ಲಿ ಇದ್ದೇನೆ ಯಾವತ್ತಾದ್ರೂ ತಪ್ಪಾಗಿ ಕನ್ನಡ ಮಾತಾಡಿದ್ದೇನಾ..?, 2 ವರ್ಷ ಇಲಾಖೆ ಹೇಗೆ ನಿಭಾಯಿಸಿದ್ದೇನೆ ಎಂಬುದನ್ನು ನೋಡಿ ನನ್ನ ಕಾರ್ಯನಿರ್ವಹಣೆಗೆ ಸಾಹಿತಿಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ನಿಮ್ಮ ಪ್ರತಿಕ್ರಿಯೆ ಏನು?






