ವಡ್ಡ ಎಂಬ ಪದ ಬಳಕೆ: ಕ್ಷಮೆ ಕೇಳಿದ ಹಾಸ್ಯ ನಟ ಹುಲಿ ಕಾರ್ತೀಕ್!

ಖ್ಯಾತ ಹಾಸ್ಯ ನಟ ಹುಲಿ ಕಾರ್ತೀಕ್ ಅವರು ಕಲರ್ಸ್ ಕನ್ನಡದ ರಿಯಾಲಿಟಿ ಶೋ ಪ್ರಸಾರದಲ್ಲಿ "ವಡ್ಡ" ಪದವನ್ನು ಬೈಗುಳ ಪದವಾಗಿ ಬಳಸಿದ್ದಾರೆಂದು ಇತ್ತೀಚಿಗೆ ಭೋವಿ ಸಮಾಜದ ಮುಖಂಡರು ಕೆಲವು ಕಡೆ ಜಾತಿ ನಿಂದನೆ ಕೇಸ್ ದಾಖಲಾಗಿತ್ತು.
ಇದನ್ನರಿತು ನಟ ಹುಲಿ ಕಾರ್ತೀಕ್ ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಮಹಾಸಂಸ್ಥಾನದ ಭೋವಿ ಗುರುಪೀಠಕ್ಕೆ ಆಗಮಿಸಿ ಜಗದ್ಗುರು ಶ್ರೀ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ದರ್ಶನಾಶೀರ್ವಾದ ಪಡೆದು, ಸಂಬಂಧಿಸಿದ ವೈರಲ್ ವೀಡಿಯೋ ಕುರಿತು ಸ್ಪಷ್ಟಕರಿಸಿದರು.
ಶೋ ಉದ್ದೇಶ ಕೇವಲ ಹಾಸ್ಯಕ್ಕೆ ಸೀಮಿತವಾಗಿದ್ದು ಯಾವುದೇ ಜಾತಿ ಧರ್ಮ ಮತೀಯ ನಿಂದನೇ ಅವಹೇಳನಕ್ಕೆ ಅವಕಾಶವಿಲ್ಲ ಅದ್ದರಿಂದ ಎಲ್ಲಾ ಜಾತಿ ಧರ್ಮ ಮತೀಯರು ಹಾಸ್ಯವನ್ನು ಆಸ್ವಾದಿಸಬೇಕೆಂಬ ಭಾವನೆಯಿಂದ ಸ್ಕ್ರಿಪ್ಟ್ ತಯಾರಗಿದೆ. ಸಂಭಾಷಣೆಯಲ್ಲಿ ಗುಂಡ ಹೊಂಡ ಪ್ರಾಸ ಪದವಿದೆ. ಕೆಲವರಿಗೆ ಅದು ಬೇರೆ ರೀತಿಯಾಗಿ ಕೇಳುತ್ತಿದೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಭೋವಿ ಸಮಾಜದ ಬಂಧುಗಳ ಭಾವನೆಗಳಿಗೆ ನೋವ್ವುಂಟಾಗಿದ್ದರಿಂದ ಹುಲಿಕಾರ್ತಿಕ್ ಅವರು ವಿಷಾಧ ವನ್ನು ವ್ಯಕ್ತಪಡಿಸಿ, ಭೋವಿಗುರುಪೀಠದ ಜಗದ್ಗುರುಗಳ ಸಾನಿಧ್ಯದಲ್ಲಿ ಕ್ಷಮಾಪಣೆ ಯನ್ನು ಕೇಳಿದ್ದಾರೆ.
ಪರಸ್ಪರ ಭಾವನೆಗಳನ್ನು ಗೌರವಿಸುವ ಸದ್ಬಾದಿಂದ ಹುಲಿ ಕಾರ್ತಿಕ್ ಅವರು ಕ್ಷಮೆ ಕೇಳಿದ್ದಾರೆ. ಬೆಳೆಯುವ ಹಾಸ್ಯನಟನಿಗೆ ಸಮುದಾಯದಿಂದ ತೊಂದರೆಯಾಗಬಾರದು. ಹಾಸ್ಯನಟನನ್ನು ಎಲ್ಲರು ಕ್ಷಮಿಸಿ ದೊಡ್ಡಗುಣ ಮೆರೆಯಬೇಕು. ಹಾಗೂ ರಾಜ್ಯಾದ್ಯಂತ ಹಾಕಿರುವ ಎಲ್ಲಾ FIR ಗಳನ್ನು ವಾಪಸ್ಸು ಪಡೆಯಲು ಭಕ್ತವೃಂದಕ್ಕೆ ನಿರ್ದೇಶನ ನೀಡಿದ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






