ಸಣ್ಣ ಸಣ್ಣ ವಿಷಯಕ್ಕೆ ಫ್ರೆಂಡ್ ಶಿಪ್ ಕಟ್ ಮಾಡ್ಕೊಳ್ಳೋವನು ನಾನಲ್ಲ: ವಿನಯ್ ಗೌಡ

ಮಚ್ಚು ಬಳಸಿ ರೀಲ್ಸ್ ಮಾಡಿದ ಕಾರಣಕ್ಕೆ ಮಾಜಿ ಬಿಗ್ಬಾಸ್ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಅವರುಗಳು ಜೈಲು ವಾಸ ಅನುಭವಿಸಿ ಹೊರಬಂದಿದ್ದಾರೆ. ಆದರೆ ಈ ವಿವಾದ ಈ ಇಬ್ಬರ 10 ವರ್ಷದ ಗೆಳೆತನಕ್ಕೆ ಕೊಳ್ಳಿ ಇಟ್ಟಂತಿದೆ. ರೀಲ್ಸ್ ವಿವಾದದ ಬಳಿಕ ರಜತ್ ಹಾಗೂ ವಿನಯ್ ನಡುವೆ ಎಲ್ಲವೂ ಸರಿಯಿದ್ದಂತಿಲ್ಲ. ಈ ಬಗ್ಗೆ ಸ್ವತಃ ರಜತ್ ಮಾತನಾಡಿದ್ದರು. ಇದೀಗ ರಜತ್ ನೀಡಿರುವ ಹೇಳಿಕೆ ಬಗ್ಗೆ ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ರಜತ್ ಜೊತೆ ನನ್ನ ಫ್ರೆಂಡ್ ಶಿಪ್ ಕಟ್ ಆಗಿಲ್ಲ. ಸಣ್ಣ ಸಣ್ಣ ವಿಷಯಕ್ಕೆ ಫ್ರೆಂಡ್ ಶಿಪ್ ಕಟ್ ಮಾಡ್ಕೊಳ್ಳೋವನು ನಾನಲ್ಲ. ಅವನು ನನ್ನನ್ನ ಎಲ್ಲೂ ಬಿಟ್ಟುಕೊಟ್ಟಿಲ್ಲ. ನಾನೂ ಬಿಟ್ಟು ಕೊಡಲ್ಲ, ಸ್ನೇಹಿತರ ಸಂಬಂಧ ಗಂಡ ಹೆಂಡತಿ ಜಗಳ ಇದ್ದಂತೆ, ಎರಡ್ಮೂರು ದಿನ ಇರುಸು-ಮುರುಸು ಇರುತ್ತೆ, ಹಾಗೇ ಬಿಟ್ರೆ ಅದಾಗೇ ಸರಿ ಹೋಗುತ್ತೆ ಅಂತ ಹೇಳಿದ್ದಾರೆ.
ನಮ್ಮಿಬ್ಬರ ಮಧ್ಯೆ ಬ್ರೇಕಪ್ ಏನಿಲ್ಲ, ಅವನಿಗಿಂತ ನಾನು ವಯಸ್ಸಿನಲ್ಲಿ ದೊಡ್ಡವನು. ಅವನು ಬ್ಲೇಮ್ ಮಾಡ್ದ ಅಂತ ನಾನ್ ಮಾಡಲ್ಲ. ಅವನು ಕರೆದ ಅಂತ ನಾನ್ ಒಪ್ಕೊಂಡೆ ಅದು ತಪ್ಪಾಯ್ತು ಅಂದೆ ಅಷ್ಟೇ. ನಾನು ಕೂಡ ಅವನು ಬಲವಂತವಾಗಿ ಕರೆದ ಅಂತ ಹೇಳಿಲ್ಲ. ಜೈಲಿಂದ ಬಂದ ಬಳಿಕ ನಾವ್ ಒಟ್ಟಿಗೆ ಕಾಣಿಸ್ಕೊಂಡಿಲ್ಲ ನಿಜ, ಅನಿವಾರ್ಯತೆಯಿಂದ ಹೋಗಿಲ್ಲ. ರಜತ್ ಬಂದ್ರೆ ನಾನ್ ಬರಲ್ಲ ಅಂತ ಸುದ್ದಿಯಾಗೋದು ಬೇಡ ಎಂದು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






