ಹಿಂದುತ್ವಕ್ಕಾಗಿ ಪ್ರಾಣ ಕೊಡ್ತೀನಿ ಅಂತಿದ್ದ, ಆದ್ರೆ ಅವನನ್ನೇ ಕೊಂದು ಬಿಟ್ರೂ- ಸುಹಾಸ್ ತಾಯಿ ಕಣ್ಣೀರು!

ಮೇ 2, 2025 - 16:15
 0  21
ಹಿಂದುತ್ವಕ್ಕಾಗಿ ಪ್ರಾಣ ಕೊಡ್ತೀನಿ ಅಂತಿದ್ದ, ಆದ್ರೆ ಅವನನ್ನೇ ಕೊಂದು ಬಿಟ್ರೂ- ಸುಹಾಸ್ ತಾಯಿ ಕಣ್ಣೀರು!

ಮಂಗಳೂರು:- ಹಿಂದುತ್ವಕ್ಕಾಗಿ ಪ್ರಾಣ ಕೊಡ್ತೀನಿ ಅಂತಿದ್ದ, ಆದ್ರೆ ಅವನನ್ನೇ ಕೊಂದು ಬಿಟ್ರೂ ಎಂದು ಮಂಗಳೂರಿನಲ್ಲಿ ಬರ್ಬರವಾಗಿ ಕೊಲೆಯಾದ ಸುಹಾಸ್ ಅವರ ತಾಯಿ ಕಣ್ಣೀರು ಹಾಕಿದ್ದಾರೆ. 

ನಾವು ನಿನ್ನೆ ಬೆಳಗ್ಗೆ ಮದುವೆಯ ಬ್ಯುಸಿಯಲ್ಲಿದ್ದೆವು. ಹಾಗಾಗಿ ಮಗನಿಗೆ ಫೋನ್ ಮಾಡಲು ಆಗಲಿಲ್ಲ. ರಾತ್ರಿ ಕಾಲ್ ಮಾಡಿದಾಗ ಕಾಲ್ ಸಿಗುತ್ತಿರಲಿಲ್ಲ. ಹಿಂದುತ್ವಕ್ಕಾಗಿ ನನ್ನ ಪ್ರಾಣವನ್ನೇ ಕೊಡುತ್ತೇನೆ ಅಂತಿದ್ದ. ಈಗ ಅವನ ಪ್ರಾಣವನ್ನೇ ತೆಗೆದರು ಎಂದು ದುಃಖಿಸಿದರು

ಹಿಂದೂಗಳು ಹೆದರಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. 85% ಹಿಂದೂಗಳಿದ್ದರೂ ಅವರಿಗೆ ಹೆದರಿ ಬದುಕಬೇಕಾಗಿದೆ. ಹತ್ಯೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow