ಇದಪ್ಪಾ ಛಲ ಅಂದ್ರೆ: ಆ್ಯಕ್ಸಿಡೆಂಟ್ ನಲ್ಲಿ ಬಹುಮಾನ ಗೆದ್ದ ನಟ ಅಜಿತ್!

ಸ್ಟಾರ್ ನಟ ಅಜಿತ್ ಕುಮಾರ್ ದುಬೈನಲ್ಲಿ ನಡೆದ ಕಾರ್ ರೇಸ್ನಲ್ಲಿ ಗೆದ್ದು ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ಕಾರು ಅಪಘಾತವಾಗಿತ್ತು. ಆದರೂ ತಮ್ಮ ಛಲ ಬಿಡದೇ ಬಹುಮಾನ ಗೆದ್ದಿದ್ದಾರೆ.
ದುಬೈನಲ್ಲಿ ನಡೆದ 23 4 ಗಂಟೆಗಳ ಕಾರ್ ರೇಸ್ನಲ್ಲಿ ಭಾಗವಹಿಸಿದ್ದ ಅಜಿತ್ಗೆ ನಟ ಮಾಧವನ್ ಖುದ್ದು ಅಭಿನಂದನೆ ಸಲ್ಲಿಸಿದ್ದಾರೆ. ಇಬ್ಬರೂ ಬಹಳ ಉತ್ಸಾಹದಿಂದ ಒಬ್ಬರನ್ನೊಬ್ಬರು ಅಪ್ಪಿಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದುಬೈ 24ಹವರ್ಸ್ ಕಾರ್ ರೇಸ್ನ 911 ಜಿಟಿ3R ವಿಭಾಗದಲ್ಲಿ ತಮಿಳು ನಟ ಅಜಿತ್ ಕುಮಾರ್ ರೇಸಿಂಗ್ ತಂಡ 3ನೇ ಸ್ಥಾನ ಗಿಟ್ಟಿಸಿಕೊಂಡಿದೆ. 24H ಸರಣಿ ರೇಸ್ ಅಂದ್ರೆ ನಿರಂತರವಾಗಿ 24 ಗಂಟೆಗಳ ಕಾಲ ಕಾರನ್ನ ಓಡಿಸಬೇಕು. ಒಂದು ತಂಡವು 3 ರಿಂದ 4 ಚಾಲಕರನ್ನ ಒಳಗೊಂಡಿರುತ್ತೆ. ತಲಾ 6 ಗಂಟೆಯಂತೆ 24 ಗಂಟೆಗಳ ಕಾಲ ವಾಹನ ಚಲಾಯಿಸಬೇಕು. ಇದೀಗ ಈ ರೇಸ್ನಲ್ಲಿ ಅಜಿತ್ ಕುಮಾರ್ ತಂಡ ಮೂರನೇ ಸ್ಥಾನ ಪಡೆದಿದೆ.
ರೇಸ್ನಲ್ಲಿ ಭಾಗಿಯಾಗೋದಕ್ಕೂ ಮುಂಚೆ ಪತ್ನಿ ಶಾಲಿನಿ.. ಮಗಳು ಅನೌಷ್ಕ ಜೊತೆ ಕೆಲ ಹೊತ್ತು ಮನಸ್ಸು ಬಿಚ್ಚಿ ಮಾತನಾಡಿದ್ರು.. ಬಳಿಕ ರೇಸ್ನಲ್ಲಿ ಪಾಲ್ಗೊಂಡು 991 ಕೆಟಗರಿಯಲ್ಲಿ 3ನೇ ಸ್ಥಾನ ಅಲಂಕರಿಸಿದ್ರು.. ಜಿಟಿ4 ಕೆಟಗರಿಯಲ್ಲಿ ಸ್ಪಿರಿಟ್ ಆಫ್ ದಿ ರೇಸ್ ಪ್ರಶಸ್ತಿ ಪಡೆದ ವೇಳೆ ಪತ್ನಿ ಶಾಲಿನಿಗೆ ಅಜಿತ್ ಮುತ್ತು ಕೊಟ್ಟರು. ಅಜಿತ್ ಗೆಲುವನ್ನ ನಟ ಮಾಧವನ್ ಕೂಡ ಜೊತೆ ಸೇರಿ ಸಂಭ್ರಮಿಸಿದ್ರು.
ಈ ಕಾರ್ ರೇಸ್ನಲ್ಲಿ ನಟ ಅಜಿತ್ ಸಾಧನೆ ಕಂಡು ಅಭಿಮಾನಿಗಳು ಕೂಡ ಸಂಭ್ರಮಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






