5 ಗ್ಯಾರಂಟಿ ಅಂತಾ ಘೋಷಣೆ ಮಾಡಿದ್ರು, ಎರಡು ಗ್ಯಾರಂಟಿ ಠುಸ್ ಆಗಿದೆ: ಆರ್.ಅಶೋಕ್

ಅಕ್ಟೋಬರ್ 31, 2024 - 15:59
 0  18
5 ಗ್ಯಾರಂಟಿ ಅಂತಾ ಘೋಷಣೆ ಮಾಡಿದ್ರು, ಎರಡು ಗ್ಯಾರಂಟಿ ಠುಸ್ ಆಗಿದೆ: ಆರ್.ಅಶೋಕ್

ಬೆಂಗಳೂರು: ಬಿಜೆಪಿ ಹೋರಾಟದಿಂದ ಮುಡಾ ಕೇಸ್ ತಾರ್ಕಿಕ ಅಂತ್ಯ ಕಾಣಸಿದ್ದೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಹೋರಾಟದಿಂದ ಮುಡಾ ಕೇಸ್ ತಾರ್ಕಿಕ ಅಂತ್ಯ ಕಾಣಸಿದ್ದೇವೆ. ವಾಲ್ಮೀಕಿ ಹಗರಣದಲ್ಲೂ ಸರ್ಕಾರಿ ಅಧಿಕಾರಿ ಸಾವಿಗೆ ನ್ಯಾಯ ಒದಗಿಸಿ ಕೊಟ್ಟಿದ್ದೇವೆ. ಇದು ಬಿಜೆಪಿ ಹೋರಾಟ ಮಾಡಿ ಆಗಿರೋದು. ಬಿಜೆಪಿ ರಾಷ್ಟ್ರೀಯ ಪಾರ್ಟಿ. 17 ರಾಜ್ಯದಲ್ಲಿ ಬಿಜೆಪಿ ಅಧಿಕಾದಲ್ಲಿ ಇದ್ದೇವೆ. ನಿಮ್ಮತರ 4 ರಾಜ್ಯದಲ್ಲಿ ಅಧಿಕಾರದಲ್ಲಿ ಇಲ್ಲ.

ನಾವು ಹಿಟ್ ಅಂಡ್ ರನ್ ಅಲ್ಲ. ನಾವು ಹಿಟ್ ಮಾಡಿದ ಕೂಡಲೇ ಕಾಂಗ್ರೆಸ್‌ನವರು ರನ್ ಮಾಡಿದ್ದಾರೆ. ಈ ಸರ್ಕಾರ ತುಘಲಕ್ ಸರ್ಕಾರ. 5 ಗ್ಯಾರಂಟಿ ಅಂತ ಘೋಷಣೆ ಮಾಡಿದ್ರು. ಎರಡು ಗ್ಯಾರಂಟಿ ಠುಸ್ ಆಗಿದೆ. ಡಿಸಿಎಂಗೆ ಮಹಿಳೆಯರು ಮೇಲ್, ಮೆಸೇಜ್ ಮಾಡಿದ್ದಾರೆ. ಸಿಎಂ, ರಾಮಲಿಂಗಾರೆಡ್ಡಿಗೆ ಬಿಟ್ಟು ಡಿಸಿಎಂಗೆ ಮಾಡಿದ್ದಾರೆ ಅಂತಾ. ಯೋಜನೆ ರದ್ದು ಮಾಡೋಕೆ ಇದು. ಕಳ್ಳನಿಗೆ ಪಿಳ್ಳೆನೆವ ಎಂಬಂತೆ ಯೋಜನೆ ಕ್ಯಾನ್ಸಲ್ ಮಾಡೋಕೆ ಹೊರಟಿದ್ದಾರೆ.

ಸರ್ಕಾರದ ಬಳಿ ಹಣ ಇಲ್ಲ ಅಂತಾ ಗೊತ್ತಾಗ್ತಿದೆ. ಹೀಗಾಗಿ ಡಿಸಿಎಂ ಹೀಗೆ ಹೇಳ್ತಿದ್ದಾರೆ. ರೇಷನ್ ಕಾರ್ಡ್ ಕೂಡಾ ರದ್ದು ಮಾಡಲು ಹೊರಟಿದ್ದಾರೆ. ಈ ಸರ್ಕಾರ ಬಡವರ ಶಾಪಕ್ಕೆ ಗುರಿ ಆಗಿದ್ದಾರೆ. ಲೋಕಸಭೆ ಚುನಾವಣೆ ಆದ ಮೇಲೆ ಗ್ಯಾರಂಟಿ ಯೋಜನೆ ಇರೊಲ್ಲ ಅಂತ ಹೇಳಿದ್ವಿ. ಅದರಂತೆ ಈಗ ಶಕ್ತಿ ಯೋಜನೆ ಪರಿಷ್ಕರಣೆ ಅಂತಿದ್ದಾರೆ. ಸಾರಿಗೆ ಇಲಾಖೆಗೆ ಸಂಬಳ ಕೊಡಲು ಹಣ ಇಲ್ಲದ ಸ್ಥಿತಿ ಬಂದಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow