80 ರ ವೃದ್ದೆ ಮೇಲೆ ಅತ್ಯಾಚಾರವೆಸಗಿ ಕೊಲೆ.. ಹಣಕ್ಕಾಗಿ ಕೃತ್ಯ!

ಕೋಲಾರ:- ಕೋಲಾರದಲ್ಲಿ ಹೇಯ ಕೃತ್ಯ ನಡೆದಿದ್ದು,ಹಣಕ್ಕಾಗಿ 80ರ ವೃದ್ದೆ ಮೇಲೆ ಅತ್ಯಾಚಾರವೆಸಗಿ ಕೊಲೆ ನಡೆದಿರುವ ಘಟನೆ ಜರುಗಿದೆ. ದುರುಳನೊಬ್ಬ ಆಕೆಯ ಬಳಿ ಇದ್ದ ಹಣ, ಒಡವೆಗಳನ್ನು ದೋಚಿ, ವೃದ್ದೆಯನ್ನ ಅತ್ಯಾಚಾರ ಮಾಡಿ ಪೈಶಾಚಿಕ ಕೃತ್ಯವೆಸಗಿ ಕೊಲೆ ಮಾಡಿರುವಂತಹ ಘಟನೆ ನಡೆದಿದೆ.
ಸೋಮವಾರ ಸಂಜೆ ಶ್ರೀನಿವಾಸಪುರ ಪಟ್ಟಣದ ಮುಳಬಾಗಿಲು ರಸ್ತೆಯ ಸಂತೆ ಮೈದಾನದ ಬಳಿಯ ಗ್ಯಾರೇಜ್ ಬಳಿ ವೃದ್ದೆ ಯೊಬ್ಬಳ ಶವ ಪತ್ತೆಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಶ್ರೀನಿವಾಸಪುರ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ವೃದ್ದೆಯನ್ನು ಯಾರ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ವಿಷಯ ಮೇಲ್ನೋಟಕ್ಕೆ ತಿಳಿದು ಬಂದಿತ್ತು
ಇನ್ನು ಕೊಲೆಯಾದ ಮಹಿಳೆ ಯಾರೆಂದು ನೋಡಲಾಗಿ ಆಕೆ ಶ್ರೀನಿವಾಸಪುರ ತಾಲ್ಲೂಕು ಹೆಚ್.ಜಿ.ಹೊಸೂರು ಗ್ರಾಮದ ಲಕ್ಷ್ಮೀದೇವಮ್ಮ(80) ಅನ್ನೋದು ತಿಳಿದು ಬಂದಿದೆ. ಲಕ್ಷ್ಮೀದೇವಮ್ಮ ಶನಿವಾರ ಶ್ರೀನಿವಾಸಪುರದಲ್ಲಿನ ಚರ್ಚ್ಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ಎರಡು ದಿನ ಶ್ರೀನಿವಾಸಪುರದಲ್ಲೇ ಇದ್ದು,
ಸೋಮವಾರ ಸಂಜೆ ಹೆಚ್.ಜಿ.ಹೊಸೂರು ಗ್ರಾಮಕ್ಕೆ ವಾಪಸ್ಸಾಗಲು ಬಸ್ಗಾಗಿ ಕಾದು ಕುಳಿತಿದ್ದ ವೇಳೆ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಹೊತ್ತೂಯ್ದು ಮೃಗದಂತೆ ವರ್ತಿಸಿ ಅತ್ಯಾಚಾರ ಮಾಡಿ ನಂತರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಬ್ಯಾಗ್ನಲ್ಲಿದ್ದ ಹದಿನೈದು ಸಾವಿರ ರೂ ಹಣ ದೋಚಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬಂದಿದ್ದ ಪೊಲೀಸರು ಅಲ್ಲೇ ಇದ್ದ ಅಂಗಡಿಯೊಂದರ ಸಿಸಿಟಿವಿ ಪರಿಶೀಲನೆ ಮಾಡಿದ್ದು, ದುರುಳನ ಕೃತ್ಯ ಬಯಲಾಗಿತ್ತು.
ಸದ್ಯ ಆರೋಪಿ ಮಾಡಿರುವ ಕೃತ್ಯ ಇಡೀ ಮಾನವ ಸಮಾಜವೇ ತಲೆ ತಗ್ಗಿಸುವಂತದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






