98% ಜನರಿಗೆ ಶಾಂತಿ ಸುವ್ಯವಸ್ಥೆ ಬೇಕು, 2% ಜನರಿಗೆ ಅದು ಬೇಡವಾಗಿದೆ: ದಿನೇಶ್ ಗುಂಡೂರಾವ್

ಮೇ 31, 2025 - 18:00
 0  9
98% ಜನರಿಗೆ ಶಾಂತಿ ಸುವ್ಯವಸ್ಥೆ ಬೇಕು, 2% ಜನರಿಗೆ ಅದು ಬೇಡವಾಗಿದೆ: ದಿನೇಶ್ ಗುಂಡೂರಾವ್

ಮಂಗಳೂರು: 98% ಜನರಿಗೆ ಶಾಂತಿ ಸುವ್ಯವಸ್ಥೆ ಬೇಕು, 2% ಜನರಿಗೆ ಅದು ಬೇಡವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗಳೂರು ಕಮಿಷನರ್ ಕಚೇರಿಯಲ್ಲಿ ಅಧಿಕಾರಿಗಳ ಜತೆ ದಿನೇಶ್ ಗುಂಡೂರಾವ್ ಸಭೆ ನಡೆಸಿದ್ರು.

ಬಳಿಕ ಮಾತಾಡಿದ ಸಚಿವರುಸರ್ಕಾರದ ಗಮನ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದೇ ಆಗಿದೆ. 98% ಜನರಿಗೆ ಶಾಂತಿ ಸುವ್ಯವಸ್ಥೆ ಬೇಕು, 2% ಜನರಿಗೆ ಅದು ಬೇಡವಾಗಿದೆ. ಗಲಾಟೆ, ಘರ್ಷಣೆಯಿಂದ ಲಾಭ ಪಡೆಯುವ ಉದ್ದೇಶ ಅವರದ್ದಾಗಿದೆ.

 98% ಜನರ ಅಪೇಕ್ಷೆಯಂತೆ ಇಲ್ಲಿ ಸಾಮರಸ್ಯ ಬೆಳೆಯಬೇಕು. ಪ್ರಚೋದನಕಾರಿ ಭಾಷಣ ಶಾಸಕರು, ಹಿರಿಯ ಮುಖಂಡರಿಂದ ಹೆಚ್ಚಾಗ್ತಿದೆಇದು ಸಮಾಜದ ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರ ಬಗ್ಗೆ ಕಾನೂನು ಸಚಿವರ ಜೊತೆ ಮಾತನಾಡ್ತೇನೆ. ಈಗ ಇರೋ ಕಾಯಿದೆ ಬದಲಾವಣೆ ಅಥವಾ ಗಟ್ಟಿ ಮಾಡುವ ಕೆಲಸ ಮಾಡ್ತೇವೆ ಎಂದು ಹೇಳಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow