BBK 11: ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್ ಹೊರ ಬಂದಿಲ್ವಾ!? ಪತ್ನಿ ಕೊಟ್ರೂ ಸ್ಪಷ್ಟನೆ!

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಲಾಯರ್ ಜಗದೀಶ್ ವಿರುದ್ಧ ಇಡೀ ಮನೆಮಂದಿ ಎಲ್ಲ ತಿರುಗಿ ಬಿದ್ದಿದ್ದಾರೆ. ಜಗದೀಶ್ ಹಾಗೂ ರಂಜಿತ್ ಜಗಳ ತಾರಕಕ್ಕೇರಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಇವರಿಬ್ಬರನ್ನು ಹೊರಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಜಗದೀಶ್ ಅವರು. ಆದರೆ, ಅವರು ಕಿರಿಕ್ ಮಾಡಿಕೊಂಡಿದ್ದಾರೆ. ಮಹಿಳೆಯರ ಬಗ್ಗೆ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಇದರಿಂದಲೇ ಅವರನ್ನು ಮನೆಯಿಂದ ಹೊರಕ್ಕೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕಿರಿಕ್ ಮಿತಿಮೀರಿದ್ದು, ಫೈಟ್ ನಡೆದಿದೆ ಎನ್ನಲಾಗಿದೆ. ಬಿಗ್ ಬಾಸ್ ಮನೆಯಲ್ಲಿರೋ ಕನ್ನಡಿ ಹಾಗೂ ಕ್ಯಾಮೆರಾಗಳಿಗೆ ರಂಜಿತ್ ಹಾಗೂ ಜಗದೀಶ್ ಹಾನಿ ಮಾಡಿದ್ದಾರಂತೆ. ಇದರಿಂದ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.
ಜಗದೀಶ್ ಹೊರಕ್ಕೆ ಬಂದಿದ್ದು ಗೊತ್ತೇ ಇಲ್ಲ’ ಎಂದು ಜಗದೀಶ್ ಪತ್ನಿ ಹೇಳಿದ್ದಾರೆ. ಅಲ್ಲದೆ, ತಮ್ಮ ಪತಿಯನ್ನು ಬಿಗ್ ಬಾಸ್ನಲ್ಲಿರುವ ಉಳಿದ ಸ್ಪರ್ಧಿಗಳೆಲ್ಲ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಮಗೆ ಕರೆ ಮಾಡಿಲ್ಲ ಎಂದು ಕೂಡ ಅವರು ಹೇಳಿದ್ದಾರೆ. ಆದರೆ, ಜಗದೀಶ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ, ಅವರು ಎಲಿಮಿನೇಟ್ ಆಗಿದ್ದು ಖಚಿತ ಎನ್ನಲಾಗುತ್ತಿದೆ.
ಬಿಗ್ ಬಾಸ್ನಲ್ಲಿ ಈ ಎಪಿಸೋಡ್ ಪ್ರಸಾರ ಕಂಡಿಲ್ಲ. ಹೀಗಾಗಿ, ಇದನ್ನು ಮನೆಯ ಸದಸ್ಯರು ಓಪನ್ ಆಗಿ ಹೇಳಿಕೊಳ್ಳೋಕೆ ಬರಲ್ಲ. ಹೀಗಾಗಿ, ಜಗದೀಶ್ ಪತ್ನಿ ಈ ರೀತಿಯ ಹಾರಿಕೆ ಉತ್ತರ ಕೊಟ್ಟಿರಬಹುದು
ನಿಮ್ಮ ಪ್ರತಿಕ್ರಿಯೆ ಏನು?






