BBK 11: ಧನರಾಜ್ʼಗೆ ಕೈ ಕೊಟ್ಟ ಹನುಮಂತ: ಫಿನಾಲೆ ವಾರಕ್ಕೆ ಕಾಲಿಟ್ಟ ಮೋಕ್ಷಿತಾ

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಇನ್ನು ಒಂದೇ ವಾರ ಬಾಕಿ ಉಳಿದಿದ್ರೆ, ಫಿನಾಲೆ ವೀಕ್ಗೆ ಯಾರು ಉಳಿಯುತ್ತಾರೆ ಅನ್ನೋ ಡಬಲ್ ಎಲಿಮಿನೇಷನ್ಗೆ ಇನ್ನು ಒಂದೇ ದಿನ ಬಾಕಿ. ಇದರ ನಡುವೆ ಎಲಿಮಿನೇಷನ್ನಿಂದ ಪಾರಾಗಲು ಎಲ್ಲರೂ ಕಷ್ಟಪಟ್ಟು ಟಾಸ್ಕ್ ಆಡಿದರು. ಆದರೆ ಧನರಾಜ್ ಮಾಡಿದ ಒಂದು ತಪ್ಪಿನಿಂದ ಎಲ್ಲವೂ ಹಾಳಾಯಿತು.
ಹೊಸದಾಗಿ ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ಆದೇಶಿಸಿದ್ದರು. ಎರಡನೇ ಬಾರಿ ನಾಮಿನೇಟ್ ಮಾಡಿದಾಗ ಉಗ್ರಂ ಮಂಜು, ಭವ್ಯಾ ಗೌಡ, ಗೌತಮಿ ಜಾದವ್, ರಜತ್, ಧನರಾಜ್ ಆಚಾರ್ ಹಾಗೂ ಮೋಕ್ಷಿತಾ ಪೈ ಹೆಸರುಗಳನ್ನು ತೆಗೆದುಕೊಳ್ಳಲಾಯಿತು.
ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಿಕ್ಕಾಪಟ್ಟೆ ಜಗಳ ನಡೆಯಿತು. ಹೆಚ್ಚಿನ ಜನರು ಯಾರೂ ನಾಮಿನೇಟ್ ಮಾಡಿಲ್ಲ ಎಂಬ ಕಾರಣದಿಂದ ತ್ರಿವಿಕ್ರಮ್ ಅವರು ಸೇಫ್ ಆದರು. ಹಾಗಾಗಿ ಅವರು ಫಿನಾಲೆ ವಾರಕ್ಕೆ ಎಂಟ್ರಿ ಪಡೆದರು. ಇದರ ಹೊರತಾಗಿ ಕ್ಯಾಪ್ಟನ್ ಹನುಮಂತನಿಗೆ ಒಂದು ವಿಶೇಷ ಅಧಿಕಾರ ನೀಡಲಾಯಿತು. ನಾಮಿನೇಟ್ ಆದ ಒಬ್ಬರನ್ನು ಸೇಫ್ ಮಾಡಲು ಅವರಿಗೆ ಅವಕಾಶ ನೀಡಲಾಯಿತು.
ಹನುಮಂತ ಅವರು ಗೆಳಯ ಧನರಾಜ್ ಹೆಸರು ಹೇಳಬಹುದು ಎಂದು ಅನೇಕರು ಊಹಿಸಿರಬಹುದು. ಆದರೆ ಆಗಿದ್ದೇ ಬೇರೆ. ಹನುಮಂತ ಅವರು ಮೋಕ್ಷಿತಾ ಪರವಾಗಿ ಬ್ಯಾಟ್ ಬೀಸಿದರು. ‘ಮೋಕ್ಷಿತಾ ಚೆನ್ನಾಗಿ ಆಡುತ್ತಿದ್ದಾರೆ. ಹಾಡು ಹೇಳಿ ಮನರಂಜನೆ ನೀಡುತ್ತಾರೆ. ಒಳ್ಳೆಯ ಮನಸ್ಸಿನ ವ್ಯಕ್ತಿ. ಕಲ್ಮಶ ಇಲ್ಲ. ತಪ್ಪನ್ನು ಒಪ್ಪಿಕೊಳ್ಳುತ್ತಾರೆ’ ಎಂಬ ಕಾರಣವನ್ನು ನೀಡಿ ಮೋಕ್ಷಿತಾನ ನಾಮಿನೇಷನ್ನಿಂದ ಹನುಮಂತ ಬಚಾವ್ ಮಾಡಿದರು. ಒಟ್ಟಾರೆಯಾಗಿ ಮೋಕ್ಷಿತಾ ಅವರಿಗೆ ಈ ಚಾನ್ಸ್ ಸಿಕ್ಕಿದ್ದು ಹನುಮಂತನ ಕೃಪೆಯಿಂದಲೇ ಎಂಬುದು ನಿಜ. ಹನುಮಂತ ತೆಗೆದುಕೊಂಡ ಈ ನಿರ್ಧಾರವನ್ನು ಬಹುತೇಕ ಎಲ್ಲರೂ ಒಪ್ಪಿಕೊಂಡರು. ಮೋಕ್ಷಿತಾ ಅವರಿಗೆ ತುಂಬ ಖುಷಿ ಆಯಿತು.
ನಿಮ್ಮ ಪ್ರತಿಕ್ರಿಯೆ ಏನು?






