BBK 11: ರಣರಂಗವಾದ ಮನ: ಬಿಗ್ ಬಾಸ್ ಮನೆಯಿಂದ ರಂಜಿತ್, ಜಗದೀಶ್ ಔಟ್!

ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. ನಿನ್ನೆ ಸಂಚಿಕೆಯಲ್ಲಿ ಬಿಗ್ ಬಾಸ್ ಜಗದೀಶ್ ಮನೆಯಿಂದ ಹೊರಟು ನಿಂತಿದ್ದರು. ಮನೆಯ ಕ್ಯಾಮರಾ ಮುಂದೆ ಬಿಗ್ ಬಾಸ್ಗೇನೆ ಬೈಯುತ್ತಿದ್ದರು. ಇದರಿಂದ ಇಡೀ ಮನೆಯ ಸದಸ್ಯರು ಗರಂ ಆಗಿದ್ದರು. ಉಗ್ರಂ ಮಂಜು ಹಾಗೂ ರಂಜಿತ್ ಕುಮಾರ್ ಮುಖಾ-ಮುಖಿಯಾಗಿಯೇ ಜಗದೀಶ್ ಗೆ ಟಕ್ಕರ್ ಕೊಟ್ಟಿದ್ದರು. ಇದರಿಂದ ರೊಚ್ಚಿಗೆದ್ದ ಜಗದೀಶ್, ಜೋರು ಜೋರಾಗಿ ಮಾತಾಡಿದ್ದರು.
ಅಲ್ಲದೇ ಲಾಯರ್ ಜಗದೀಶ್ ಹಾಗು ಶನಿ ಧಾರವಾಹಿಯ ನಟ ರಂಜಿತ್ನ ಆಚೆ ಕಳಿಸಲಾಗಿದೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ನಿನ್ನೆ ಎಪಿಸೋಡ್ ನಲ್ಲಿ ಜಗದೀಶ್ನ ಕನ್ ಫೇಶನ್ ರೂಮ್ ನಿಂದ ಆಚೆ ಬರಬೇಡ ಅಂತ ಹೇಳು ಬೆಳಗ್ಗೆ ವರೆಗು, ಬಂದ್ರೆ ಯಾರಾದ್ರು ಒಬ್ರಿಂದ ಒದೆ ತಿಂತಾನೆ ಅಂತ ರಂಜಿತ್ ಹೇಳಿದ್ದ. ಇಬ್ರ ನಡುವೆ ಏನಾದರೂ ಜಗಳ ಆಗಿ ಆಚೆ ಕಳಿಸಿದ್ರಾ ಅನ್ನೋದು ಗೊತ್ತಾಗಬೇಕಿದೆ. ಲಾಯರ್ ಜಗದೀಶ್ ಆಚೆ ಬಂದಿದ್ದಾರೆ ಅಂತ ಹೇಳಲಾಗ್ತಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






