BBK11: ರೀಲ್ಸ್ ಸ್ಟಾರ್ & ವಕೀಲರ ನಡುವೆ ಕಿತ್ತಾಟ: ಜಗದೀಶ್​​-ಧನ್​ರಾಜ್​ ಜಗಳಕ್ಕೆ ದೊಡ್ಮನೆ ಮಂದಿ ಸುಸ್ತು!

ಅಕ್ಟೋಬರ್ 2, 2024 - 16:08
 0  15
BBK11: ರೀಲ್ಸ್ ಸ್ಟಾರ್ & ವಕೀಲರ ನಡುವೆ ಕಿತ್ತಾಟ: ಜಗದೀಶ್​​-ಧನ್​ರಾಜ್​ ಜಗಳಕ್ಕೆ ದೊಡ್ಮನೆ ಮಂದಿ ಸುಸ್ತು!

ಬಿಗ್​ ಬಾಸ್​ನಲ್ಲಿ ಮೊದಲ ವಾರದ ನಾಮಿನೇಶನ್​ ಬಿಸಿ ಜೋರಾಗಿದೆ.ಚೈತ್ರಾ ಕುಂದಾಪುರ, ಗೌತಮಿ, ಭವ್ಯಾ, ಹಂಸ, ಶಿಶಿರ್, ಯಮುನಾ, ಜಗದೀಶ್, ಮಾನಸ, ಮೋಕ್ಷಿತಾ ಅವರು ಮೊದಲ ವಾರ ನಾಮಿನೇಟ್​ ಆಗಿದ್ದಾರೆ. ಆದರೆ ನಾಮಿನೇಟ್​ ಆದ ಸ್ಪರ್ಧಿಗಳಿಗೆ ಬಿಗ್​ ಬಾಸ್​​ ಟಾಸ್ಕ್​ವೊಂದನ್ನು ಕೊಟ್ಟಿದ್ದು, ಪಾರಾಗಲು ಮೊದಲ ಅವಕಾಶ ನೀಡಿದ್ದಾರೆ.

ಧನ್​ರಾಜ್ ಆಚಾರ್​ ಟಾಸ್ಕ್​ ರೆಫ್ರಿಯಾಗಿದ್ದು, ನಾಮಿನೇಟ್​​ ಆಗಿರುವ ಸ್ಪರ್ಧಿಗಳಿಗೆ ಟಾಸ್ಕ್​ ಸಂಯೋಜನೆ ಮಾಡಿದ್ದಾರೆ. ಆದರೆ ಈ ವೇಳೆ ಜಗದೀಶ್​ ಮತ್ತು ಯಮುನಾ ಟಾಸ್ಕ್​ ವೇಳೆ ಡಿಕ್ಕಿ ಹೊಡೆದಿದ್ದು, ಯಮುನಾ ನೆಲಕ್ಕೆ ಬಿದ್ದಿದ್ದಾರೆ. ಇಲ್ಲಿಂದ ಟಾಸ್ಕ್​​ ರೆಫ್ರಿ ಮತ್ತು ಜಗದೀಶ್​ ನಡುವೆ ಜಗಳ ಶುರುವಾಗಿದೆ.

ಧನ್​ರಾಜ್​ ಮತ್ತು ಜಗದೀಶ್​ ಮಾತು ಮಾತು ಬೆಳೆಸಿದ್ದಾರೆ. ಈ ವೇಳೆ ಜಗದೀಶ್​​ ಅರ್ಹವಾದ ರೆಫ್ರಿ ಇವನಲ್ಲ ಎಂದು ಧನ್​ರಾಜ್​ಗೆ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಧನ್​ರಾಜ್​ ಸುಮ್ಮೆ ಕೂತ್ಕೊತೀಯಾ.. ನೀನು ಯಾರು ಹೇಳೋಕೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಇಂದಿನ ಎಪಿಸೋಡ್​ ಮಜವಾಗಿದ್ದು, ನಾಮಿನೇಶನ್​ನಿಂದ ಪಾರಾಗಲು ಟಾಸ್ಕ್​ನಲ್ಲಿ ಗೆಲ್ಲೋದು ಯಾರು ಎಂಬ ಕುತೂಹಲ ವೀಕ್ಷಕರನ್ನು ಕೆರಳಿಸಿದೆ

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow