Friday Tips: ಶುಕ್ರವಾರ ಈ ಕೆಲಸ ಮಾಡಿದರೆ ದುರಾದೃಷ್ಟವೂ ಅದೃಷ್ಟವಾಗುತ್ತೆ ನೋಡಿ..!

ಮೇ 30, 2025 - 07:00
 0  7
Friday Tips: ಶುಕ್ರವಾರ ಈ ಕೆಲಸ ಮಾಡಿದರೆ ದುರಾದೃಷ್ಟವೂ ಅದೃಷ್ಟವಾಗುತ್ತೆ ನೋಡಿ..!

ಹಿಂದೂ ಧರ್ಮದಲ್ಲಿ ಪ್ರತಿ ದಿನವನ್ನೂ ಒಂದೊಂದು ದೇವ-ದೇವತೆಗೆ ಅರ್ಪಿಸಲಾಗಿದೆ. ಅಂತೆಯೇ ಶುಕ್ರವಾರವನ್ನು ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿಗೆ ಸಮರ್ಪಿಸಲಾಗಿದೆ. ಈ ದಿನ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಮನೆಯಲ್ಲಿ ಆರ್ಥಿಕ ತೊಂದರೆಗಳು ನಿವಾರಣೆಯಾಗಿ ಸುಖ-ಸಂಪತ್ತು ವೃದ್ಧಿಯಾಗಲಿದೆ ಎಂದು ಹೇಳಲಾಗುತ್ತದೆ. 

ಶುಕ್ರವಾರದ ದಿನದಂದು ಶುದ್ಧ ಮನಸ್ಸು ಮತ್ತು ಹೃದಯದಿಂದ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಆ ಪೂಜೆಯು ನಿಮಗೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. ಹಣಕಾಸಿನ ಸಮಸ್ಯೆಗಳಿಂದ ಸುತ್ತುವರಿದಿರುವವರು, ನಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕೆಂದು ಬಯಸುವವರು ಶುಕ್ರವಾರದ ದಿನದಂದು ಲಕ್ಷ್ಮಿ ದೇವಿಯ ಆರಾಧನೆಯನ್ನು ಮಾಡಬೇಕು. ಶುಕ್ರವಾರದ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರ ಜೊತೆಗೆ ಈ 3 ಕೆಲಸಗಳನ್ನು ಮಾಡುವುದರಿಂದ ನಾವು ಹಣಕಾಸಿನ ಲಾಭವನ್ನು ಪಡೆದುಕೊಳ್ಳಬಹುದು. ಆ 3 ಕೆಲಸಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ..

1. ಮನೆಯ ಮುಖ್ಯ ದ್ವಾರದಲ್ಲಿ ದೀಪ ಹಚ್ಚಿಡಿ:
ಶುಕ್ರವಾರದ ದಿನದಂದು ನೀವು ನಿಮ್ಮ ಮನೆಯ ಮುಖ್ಯ ದ್ವಾರದ ಎರಡೂ ಬದಿಗಳಲ್ಲಿ ದೀಪವನ್ನು ಹಚ್ಚಿಡಬೇಕು. ಈ ಕೆಲಸ ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಶೀಘ್ರದಲ್ಲೇ ಪ್ರಸನ್ನಳಾಗುತ್ತಾಳೆ ಎನ್ನುವ ನಂಬಿಕೆಯಿದೆ. ಇದಲ್ಲದೇ ನೀವು ಶುಕ್ರವಾರದ ದಿನದಂದು ಲಕ್ಷ್ಮಿ ದೇವಿಗೆ ಹಣ್ಣುಗಳನ್ನು ಮತ್ತು ಸಿಹಿತಿಂಡಿಗಳನ್ನು ಕೂಡ ಅರ್ಪಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

2. ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಿ:
ಬಿಳಿ ಬಣ್ಣವನ್ನು ಶುಕ್ರವಾರದ ಬಣ್ಣವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಶುಕ್ರವಾರದ ದಿನದಂದು ಬಿಳಿ ಬಣ್ಣದ ಬಟ್ಟೆಗಳನ್ನು ಹೆಚ್ಚಾಗಿ ಧರಿಸಬೇಕು ಮತ್ತು ಬಿಳಿ ಬಣ್ಣದ ಆಹಾರ ಪದಾರ್ಥಗಳನ್ನು ದಾನವಾಗಿ ನೀಡಬೇಕು. ಹಾಗೂ ಈ ದಿನದಂದು ಹಸುಗಳ ಸೇವೆಯನ್ನು ಮಾಡುವುದು ನಿಮಗೆ ವಿಶೇಷ ಪ್ರಯೋಜನವನ್ನು ನೀಡುತ್ತದೆ. ಹಸುಗಳಿಗೆ ಸಿಹಿ ಪದಾರ್ಥಗಳನ್ನು ತಿನ್ನಲು ನೀಡಬೇಕು. ಈ ಪುಟ್ಟ ಕೆಲಸವನ್ನು ನೀವು ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದವೂ ಸದಾಕಾಲ ನಿಮ್ಮ ಮೇಲೆ ಇರುತ್ತದೆ.

3. ದೈಹಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ:
ಶುಕ್ರವಾರದ ದಿನದಂದು ದೈಹಿಕ ಸ್ವಚ್ಛತೆಯ ಕಡೆಗೆ ವಿಶೇಷವಾದ ಕಾಳಜಿ ವಹಿಸಬೇಕು. ತಮ್ಮನ್ನು ತಾವು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಈ ದಿನ ಮನೆಯನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದು ನೀವಿರುವ ಸ್ಥಳದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಶುಕ್ರವಾರದ ದಿನದಂದು ಮನೆಯನ್ನು ಶುದ್ಧವಾಗಿಟ್ಟುಕೊಳ್ಳುವುದರ ಬಗ್ಗೆ ವಿಶೇಷವಾದ ಕಾಳಜಿ ತೆಗೆದುಕೊಳ್ಳಬೇಕು. ಯಾಕೆಂದರೆ ಲಕ್ಷ್ಮಿ ದೇವಿ ಎಂದಿಗೂ ಅಶುದ್ಧವಾದ ಸ್ಥಳದಲ್ಲಿ ನೆಲೆಸುವುದಿಲ್ಲ ಎನ್ನುವ ನಂಬಿಕೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಶುಕ್ರವಾರದಂದು ಯಾವುದೇ ರೀತಿಯಾದ ಕೊಳಕನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಸ್ನಾನ ಮಾಡಿ ಲಕ್ಷ್ಮಿ ದೇವಿಯನ್ನು ಪೂಜಿಸಿ.

4. ಶುಕ್ರವಾರದ ಮಂತ್ರ:
ಲಕ್ಷ್ಮಿ ದೇವಿಯನ್ನು ಸಂಜೆ ಅಂದರೆ ಮುಸ್ಸಂಜೆ ಸಮಯದಲ್ಲಿ ಪೂಜಿಸುವುದು ತುಂಬಾನೇ ಪ್ರಯೋಜನಕಾರಿಯಾಗಿದೆ. ಶುಕ್ರವಾರದ ದಿನದಂದು ಸ್ನಾನ ಮಾಡಿ ಶುದ್ಧರಾದ ಬಳಿಕ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಲಾಭದಾಯಕವಾಗಿರುತ್ತದೆ. ಈ ದಿನ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಿ. ಇದಲ್ಲದೆ ಈ ದಿನ ಮೊಸರು ತಿನ್ನುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ, ನೀವು ಮನೆಯಿಂದ ಹೊರಡುವ ಮೊದಲು ಮೊಸರನ್ನು ತಿಂದು ಹೊರಡಬೇಕು. ಈ ದಿನ ಉಪ್ಪನ್ನು ದಾನ ಮಾಡುವುದು ಮಂಗಳಕರ. ಶುಕ್ರವಾರದಂದು 'ಓಂ ಶುಂ ಶುಕ್ರಾಯ ನಮಃ' ಎನ್ನುವ ಮಂತ್ರವನ್ನು ಪಠಿಸುವುದ ಮಂಗಳಕರವಾಗಿರುತ್ತದೆ.

ಶುಕ್ರವಾರದ ದಿನದಂದು ನೀವು ಈ ಮೇಲಿನ ಮೂರು ಕೆಲಸಗಳನ್ನು ಮಾಡುವುದರಿಂದ ಹಣಕಾಸಿನ ಲಾಭವನ್ನು ಪಡೆದುಕೊಳ್ಳುತ್ತೀರಿ. ಹಾಗೂ ಇದರೊಂದಿಗೆ ನೀವು ಲಕ್ಷ್ಮಿ ದೇವಿಯ ವಿಶೇಷ ಕೃಪೆ ಪಾತ್ರರಾಗುತ್ತೀರಿ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow