IPL 2025: ರಾಜಸ್ಥಾನಕ್ಕೆ ಮತ್ತೆ ಕೈ ಕೊಟ್ಟ ಅದೃಷ್ಟ: ರೋಚಕ ಹಣಾಹಣಿಯಲ್ಲಿ RR ವಿರುದ್ಧ ಕೋಲ್ಕತ್ತಾಗೆ ಗೆಲುವು

ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ 2025 ರ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ರಾಜಸ್ಥಾನ್ ರಾಯಲ್ಸ್ (ಆರ್ಆರ್) ತಂಡವನ್ನು ಕೇವಲ ಒಂದು ರನ್ನಿಂದ ಸೋಲಿಸಿತು. ಪಂದ್ಯದ ಬಹುಪಾಲು ಸಮಯ ಕೆಕೆಆರ್ ಕ್ರೂಸ್ ನಿಯಂತ್ರಣದಲ್ಲಿತ್ತು, ಆದರೆ ಆರ್ಆರ್ನ ತಾತ್ಕಾಲಿಕ ನಾಯಕ ರಿಯಾನ್ ಪರಾಗ್ ಅವರ 95 ರನ್ಗಳ ಅದ್ಭುತ ಬ್ಯಾಟಿಂಗ್ 207 ರನ್ಗಳನ್ನು ಬೆನ್ನಟ್ಟಿ ಅವರಿಗೆ ಗೆಲುವಿನ ಭರವಸೆ ನೀಡಿತು.
ಹೌದು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡವು 13 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ, ನಾಯಕ ಅಜಿಂಕ್ಯ ರಹಾನೆ ಮತ್ತು ರಹಮಾನುಲ್ಲಾ ಗುರ್ಬಾಜ್ ಎರಡನೇ ವಿಕೆಟ್ಗೆ 50+ ರನ್ಗಳನ್ನು ಸೇರಿಸಿ ಕೆಕೆಆರ್ ತಂಡವನ್ನು ಸ್ಥಿರಗೊಳಿಸಿದರು. ಗುರ್ಬಾಜ್ ಉತ್ತಮ ಫಾರ್ಮ್ನಲ್ಲಿ ಕಾಣುತ್ತಿದ್ದರು ಆದರೆ ಮಹೇಶ್ ತೀಕ್ಷಣ ಅವರನ್ನು ಔಟ್ ಮಾಡುವ ಮೂಲಕ ಈ ಜೋಡಿಯ ಜೊತೆಯಾಟವನ್ನು ಮುರಿದರು.
ನಂತರ ಜೊತೆಯಾದ ರಹಾನೆ ಮತ್ತು ಅಂಗ್ಕ್ರಿಶ್ ರಘುವಂಶಿ ಉತ್ತಮ ಜೊತೆಯಾಟ ಕಟ್ಟಿದರು. ರಹಾನೆ 44 ರನ್ ಗಳಿಸಿ ಔಟಾದರು ಆ ಬಳಿಕ ಬಂದ ರಸೆಲ್ ಸ್ಫೋಟಕ ಬ್ಯಾಟಿಂಗ್ ಮಾಡಿ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕೊನೆಯ ಓವರ್ನಲ್ಲಿ ರಿಂಕು ಸ್ಫೋಟಕ ಬ್ಯಾಟಿಂಗ್ ಮಾಡಿ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್ಗಳನ್ನು ಬಾರಿಸಿ ತಂಡದ ಸ್ಕೋರ್ ಅನ್ನು 200 ರನ್ಗಳ ಗಡಿ ದಾಟಿಸಿದರು. ರಾಜಸ್ಥಾನ ಪರ ಜೋಫ್ರಾ ಆರ್ಚರ್, ಯುಧ್ವೀರ್, ತೀಕ್ಷ್ಣ ಮತ್ತು ರಯಾನ್ ತಲಾ ಒಂದು ವಿಕೆಟ್ ಪಡೆದರು.
207 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ 71 ರನ್ಗಳಿಗೆ ಐದು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದಾದ ನಂತರ, ರಿಯಾನ್ ಪರಾಗ್ ಮತ್ತು ಶಿಮ್ರಾನ್ ಹೆಟ್ಮೆಯರ್ ಆರನೇ ವಿಕೆಟ್ಗೆ 92 ರನ್ಗಳ ಜೊತೆಯಾಟ ಹಂಚಿಕೊಂಡು ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಈ ವೇಳೆ ರಿಯಾನ್ ಪರಾಗ್, ಮೊಯಿನ್ ಅಲಿ ಎಸೆದ 13ನೇ ಓವರ್ನಲ್ಲಿ ಸತತ ಐದು ಸಿಕ್ಸರ್ಗಳನ್ನು ಬಾರಿಸಿ ಪಂದ್ಯವನ್ನು ಇನ್ನಷ್ಟು ರೋಮಾಂನಚನಕಾರಿ ಮಾಡಿದರು.
ಈ ಜೊತೆಯಾಟವನ್ನು ಹರ್ಷಿತ್ ರಾಣಾ 29 ರನ್ ಗಳಿಸಿ ಔಟಾದ ಹೆಟ್ಮೆಯರ್ ಅವರನ್ನು ಔಟ್ ಮಾಡುವ ಮೂಲಕ ಮುರಿದರು. ಇದಾದ ಸ್ವಲ್ಪ ಸಮಯದ ನಂತರ, ಪರಾಗ್ರನ್ನು ಔಟ್ ಮಾಡುವ ಮೂಲಕ ಹರ್ಷಿತ್ ಮತ್ತೊಂದು ಆಘಾತ ನೀಡಿದರು. ಅಂತಿಮವಾಗಿ ಪರಾಗ್ ತಮ್ಮ ಶತಕವನ್ನು ಪೂರ್ಣಗೊಳಿಸಲು ಸಾಧ್ಯವಾಗದೆ 95 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಕೊನೆಯ ಓವರ್ನಲ್ಲಿ ರಾಜಸ್ಥಾನ ಗೆಲ್ಲಲು 22 ರನ್ಗಳ ಅಗತ್ಯವಿತ್ತು. ರಾಜಸ್ಥಾನ್ ಪರ ಶುಭಂ ದುಬೆ ಮತ್ತು ಜೋಫ್ರಾ ಆರ್ಚರ್ ಕ್ರೀಸ್ನಲ್ಲಿದ್ದರೆ, ಕೆಕೆಆರ್ ಪರ ವೈಭವ್ ಅರೋರಾ ಕೊನೆಯ ಓವರ್ ಬೌಲ್ ಮಾಡಿದರು. ಆರ್ಚರ್ ಮೊದಲ ಎಸೆತದಲ್ಲಿ ಎರಡು ರನ್ ಮತ್ತು ಎರಡನೇ ಎಸೆತದಲ್ಲಿ ಒಂದು ರನ್ ಗಳಿಸಿದರು.
ಈ ವೇಳೆ ಸ್ಟ್ರೈಕ್ಗೆ ಬಂದ ಶುಭಂ ಮೂರನೇ ಎಸೆತದಲ್ಲಿ ಒಂದು ಸಿಕ್ಸರ್ ಮತ್ತು ನಾಲ್ಕನೇ ಎಸೆತದಲ್ಲಿ ಒಂದು ಬೌಂಡರಿ ಬಾರಿಸಿದರು. ಇದಾದ ನಂತರ ಅವರು ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಈಗ ರಾಜಸ್ಥಾನಕ್ಕೆ ಒಂದು ಎಸೆತದಲ್ಲಿ ಮೂರು ರನ್ಗಳು ಬೇಕಾಗಿದ್ದವು. ವೈಭವ್ ಚೆಂಡಿನಲ್ಲಿ ಒಂದು ರನ್ ಕದ್ದ ಶುಭಮ್ ಎರಡನೇ ರನ್ ತೆಗೆದುಕೊಳ್ಳಲು ಓಡಿದರು, ಆದರೆ ರಿಂಕು ಸಿಂಗ್ ಎಸೆತದಲ್ಲಿ ರನೌಟ್ ಆದರು. ಈ ಮೂಲಕ ಕೆಕೆಆರ್ ರೋಮಾಂಚಕ ಗೆಲುವು ದಾಖಲಿಸಿತು.
ನಿಮ್ಮ ಪ್ರತಿಕ್ರಿಯೆ ಏನು?






