IPL 2025: ಲಕ್ನೋ ತಂಡ ಟ್ರೋಫಿ ಗೆಲ್ಲಲೆಂದು ತಿಮ್ಮಪ್ಪನಿಗೆ ಬಂಗಾರ, ವಜ್ರ ಅರ್ಪಿಸಿದ ಮಾಲೀಕ!

ಲಕ್ನೋ ಸೂಪರ್ ಜೈಂಟ್ಸ್ನ ಮಾಲೀಕ ಸಂಜೀವ್ ಗೋಯೆಂಕಾ ಅವರು ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಕ್ಕೆ 3 ಕೋಟಿ 36 ಲಕ್ಷ ರೂಪಾಯಿ ಮೌಲ್ಯದ ಬಂಗಾರ, ವಜ್ರ ಖಚಿತ ಆಭರಣಗಳುಗಳನ್ನು ದಾನ ಮಾಡಿದರು. ಇವರು ಆಧ್ಯಾತ್ಮಿಕತೆ ಹಾಗೂ ಸಂಪ್ರದಾಯಗಳ ಮೇಲೆ ಅಪಾರ ನಂಬಿಕೆ ಹೊಂದಿರುವ ಹಿನ್ನೆಲೆಯಲ್ಲಿ ಈ ಕಾರ್ಯ ಮಾಡಿದ್ದಾರೆ.
ಐಪಿಎಲ್ನ ಎಲ್ಎಸ್ಜಿ ತಂಡದ ಓನರ್ ಸಂಜೀವ್ ಗೋಯೆಂಕಾ ದಾನ ಮಾಡಿರುವ ಚಿನ್ನಾಭರಣ ಒಟ್ಟು 5.267 ಕೆ.ಜಿ ಇದೆ. ಈ ಚಿನ್ನಾಭರಣಗಳಲ್ಲಿ ವಜ್ರಗಳದ ಹರಳುಗಳು ಕೂಡ ಸೇರಿವೆ. ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ವಿಶ್ವದ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿಗೆ ಅಮೂಲ್ಯ ಕಾಣಿಕೆಗಳನ್ನು ಸಂಜೀವ್ ಗೋಯೆಂಕಾ ಅವರು ಅರ್ಪಿಸಿದರು.
ಸಂಜೀವ್ ಗೋಯೆಂಕಾ ಅವರು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿದ್ದರು. ಈ ವೇಳೆ ಗೋವಿಂದನಿಗೆ ವಿಶೇಷ ಪೂಜೆ ಮಾಡಿ, ದರ್ಶನ ಪಡೆದುಕೊಂಡರು. ಇನ್ನು ಸಂಜೀವ್ ಗೋಯೆಂಕಾ ಬಂಗಾರದ ಆಭರಣಗಳನ್ನು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಚ. ವೆಂಕಯ್ಯ ಚೌಧರಿ ಅವರಿಗೆ ನೀಡಿದರು.
ನಿಮ್ಮ ಪ್ರತಿಕ್ರಿಯೆ ಏನು?






