Muddu Sose Serial: ತಾಳಿ ಕಟ್ಟುವ ಶುಭ ವೇಳೆ ಪೊಲೀಸರ ಎಂಟ್ರಿ: ಶಿವರಾಮೇಗೌಡ ಅರೆಸ್ಟ್! ಮುರಿದುಬಿದ್ದ ವಿದ್ಯಾ - ಭದ್ರ ಮದುವೆ

ಕಲರ್ಸ್ ಕನ್ನಡದಲ್ಲಿ ‘ಮುದ್ದು ಸೊಸೆ’ ಹೆಸರಿನ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಮೊದಲ ದಿನದಿಂದ ಇಲ್ಲಿವರೆಗೂ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ. ‘ಬಿಗ್ ಬಾಸ್’ ಮೂಲಕ ಫೇಮಸ್ ಆದ ತ್ರಿವಿಕ್ರಂ ಅವರು ಈ ಚಿತ್ರಕ್ಕೆ ಹೀರೋ ಆದರೆ, ಪ್ರತಿಮಾ ಠಾಕೂರ್ ಅವರು ಚಿತ್ರಕ್ಕೆ ನಾಯಕಿ. ಮುದ್ದು ಸೊಸೆ’ ಧಾರಾವಾಹಿಯಲ್ಲಿ ತ್ರಿವಿಕ್ರಂ ಅವರು ಹೀರೋ ಆಗಿ ನಟಿಸಿದರೆ, ಪ್ರತಿಮಾ ಠಾಕೂರ್ ಅವರು ನಾಯಕಿ. ಈ ಚಿತ್ರದಲ್ಲಿ ತ್ರಿವಿಕ್ರಂ ಅವರು ಊರಿನ ಚಿಕ್ಕ ಗೌಡ ಭದ್ರೇ ಗೌಡನಾಗಿ ಕಾಣಿಸಿಕೊಂಡಿದ್ದಾರೆ.
ಮದುವೆ ಸಲುವಾಗಿ ದೇವರಿಗೆ ಹರಕೆ ತೀರಿಸಲು ಬೇರೆ ಊರಿಗೆ ಬಂದಿದ್ದ ಭದ್ರಗೆ ವಿದ್ಯಾ ಮೇಲೆ ಲವ್ ಅಟ್ ಫಸ್ಟ್ ಸೈಟ್ ಆಗೋಯ್ತು. ತನ್ನ ಪ್ರೀತಿಯನ್ನ ವಿದ್ಯಾ ಬಳಿ ಭದ್ರ ಹೇಳಲೇ ಇಲ್ಲ. ವಿದ್ಯಾಳ ಕನಸುಗಳೇನು ಅಂತ ಭದ್ರ ಕೇಳಲೇ ಇಲ್ಲ. ತನ್ನ ಪ್ರೀತಿಯ ಬಗ್ಗೆ ವಿದ್ಯಾ ಬಳಿ ಮೊದಲು ಹೇಳದೆ, ಮನೆಯಲ್ಲಿ ಮೊದಲು ಚರ್ಚೆ ಮಾಡಿದ ಪರಿಣಾಮ ಈಗ ದೊಡ್ಡ ಅನಾಹುತ ಸಂಭವಿಸಿದೆ. ಭದ್ರ - ವಿದ್ಯಾ ಮದುವೆ ನಿಂತು ಹೋಗಿದೆ. ಎಂಎಲ್ಎ ಆಕಾಂಕ್ಷಿ ಶಿವರಾಮೇಗೌಡ ಅರೆಸ್ಟ್ ಆಗಿದ್ದಾರೆ.
ಅಪ್ಪ ಮಾಡಿದ್ದು ನಾಟಕ ಅಂತ ಗೊತ್ತಾದ್ಮೇಲೆ, ಪತ್ರ ಭದ್ರನ ಕೈಸೇರಿಲ್ಲ ಅಂತ ತಿಳಿದ್ಮೇಲೆ, ವಿದ್ಯಾ ದೃಢ ಮಾಡಿದ್ದಾಳೆ. ನೇರವಾಗಿ ಪೊಲೀಸ್ ಸ್ಟೇಷನ್ಗೆ ವಿದ್ಯಾ ಫೋನ್ ಮಾಡಿದ್ದಾಳೆ. ‘’ನಾನಿನ್ನೂ ಮೈನರ್. ನನಗೆ ಇನ್ನೂ ಓದಬೇಕು ಎನ್ನುವ ಆಸೆ ಇದೆ. ಡಾಕ್ಟರ್ ಆಗಬೇಕು ಎಂಬ ಕನಸು ಇದೆ. ನನಗೆ ಬಲವಂತವಾಗಿ ಮದುವೆ ಮಾಡುತ್ತಿದ್ದಾರೆ. ಮದುವೆ ನನಗೆ ಇಷ್ಟವಿಲ್ಲ’’ ಅಂತ್ಹೇಳಿ ಪೊಲೀಸ್ ಸ್ಟೇಷನ್ಗೆ ಫೋನ್ ಮಾಡಿ ವಿದ್ಯಾ ಹೇಳಿದ್ದಾಳೆ. ಸಾಲದಕ್ಕೆ, ‘’ಈ ವಿಚಾರವನ್ನ ನಾನೇ ಹೇಳಿದ್ದು ಅಂತ ದಯವಿಟ್ಟು ಯಾರಿಗೂ ಹೇಳಬೇಡಿ’’ ಅಂತ ವಿದ್ಯಾ ಮನವಿಯನ್ನೂ ಮಾಡಿದ್ದಾಳೆ.
ವಿದ್ಯಾ ಕೊರಳಿಗೆ ಇನ್ನೇನು ಭದ್ರ ತಾಳಿ ಕಟ್ಟಬೇಕು.. ಅಷ್ಟರಲ್ಲಿ ಪೊಲೀಸರು ಧಾವಿಸಿಯೇಬಿಟ್ಟಿದ್ದಾರೆ. ‘ವಿದ್ಯಾ ಮೈನರ್’ ಅಂತ ಹೇಳುತ್ತಿದ್ದಂತೆಯೇ, ಪೊಲೀಸ್ ಕೆನ್ನೆಗೆ ಶಿವರಾಮೇಗೌಡ ಬಾರಿಸಿದ್ದಾರೆ. ಪೊಲೀಸರ ಮೇಲೆ ಕೈ ಮಾಡಿದ ಕಾರಣಕ್ಕೆ, ಶಿವರಾಮೇಗೌಡನನ್ನ ಅರೆಸ್ಟ್ ಮಾಡಿಕೊಂಡು ಕರೆದುಕೊಂಡು ಹೋಗಲಾಗಿದೆ. ಭದ್ರನಿಗೆ ದೊಡ್ಡ ಶಾಕ್ ಆಗಿದೆ. ‘ಅಪ್ಪನ ಈ ಸ್ಥಿತಿಗೆ ಕಾರಣರಾದವರನ್ನ ಸುಮ್ಮನೆ ಬಿಡಲ್ಲ’ ಅಂತ ಭದ್ರ ಘರ್ಜಿಸಿದ್ದಾನೆ.
ತ್ರಿವಿಕ್ರಮ್ಗೆ ಈಗ 33 ವರ್ಷ ಎನ್ನಲಾಗಿದೆ. ಅವರು ಜನಿಸಿದ್ದು 1992ರಲ್ಲಿ. ಅದೇ ಕಥಾ ನಾಯಕಿ ಪ್ರತಿಮಾಗೆ ಈಗ 20 ವರ್ಷ. ಅಂದರೆ ಇಬ್ಬರ ಮಧ್ಯೆ 13 ವರ್ಷಗಳ ಅಂತರ ಇದೆ. ಧಾರಾವಾಹಿಯ ಕಥೆಯೂ ಇದೇ ರೀತಿ ಇರುವುದರಿಂದ ಈ ರೀತಿ ವಯಸ್ಸಿನ ಅಂತರ ಇಡಲಾಗಿದೆ ಎಂದು ಹೇಳಲಾಗುತ್ತಿದೆ.
ತ್ರಿವಿಕ್ರಂ ಅವರು ಈ ಮೊದಲು ಕೆಲವು ಧಾರಾವಾಹಿಗಳನ್ನು ಮಾಡಿದ್ದರು. ಆ ಬಳಿಕ ಬಿಗ್ ಬಾಸ್ ಆಫರ್ ಬಂತು. ಅವರು ರನ್ನರ್ ಅಪ್ ಆದರು. ಆದರೆ, ಅವರಿಗೆ ಸಿಕ್ಕ ಖ್ಯಾತಿ ಅಪಾರ. ಈ ಧಾರಾವಾಹಿಯಿಂದ ಅವರ ಅದೃಷ್ಟ ಬದಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ನಿಮ್ಮ ಪ್ರತಿಕ್ರಿಯೆ ಏನು?






