Robbery Gang: ಬೆಂಗಳೂರಿನಿಂದ ಚೆನ್ನೈಗೆ ಹೋಗುವವರೇ ಹುಷಾರ್.. ಹುಷಾರ್! ಈ ಸ್ಟೋರಿ ನೋಡಿ

ಬೆಂಗಳೂರು ಚೆನ್ನೈ ಎಕ್ಸ್ ಪ್ರೆಸ್ ಹೈ ವೇನಲ್ಲಿ ದರೋಡೆ ಗ್ಯಾಂಗ್ ಹಾವಳಿ ಹೆಚ್ಚಾಗಿದೆ. ಹೊಸಕೋಟೆಯಿಂದ ಕೆಜಿಎಫ್ ಮಾರ್ಗದಲ್ಲಿ ವೇಗವಾಗಿ ಬರೋ ಕಾರ್ ಗಳನ್ನೇ ಟಾರ್ಗೆಟ್ ಮಾಡಿ ಹೈವೇ ಮಧ್ಯೆ ಕಲ್ಲಿಟ್ಟು ಆ್ಯಕ್ಸಿಡೆಂಟ್ ಮಾಡಿಸಿ ಲೂಟಿ ಮಾಡುತ್ತಿರುವು ಬೆಳಕಿಗೆ ಬಂದಿದೆ. ಕಳೆದ 25 ನೇ ತಾರೀಖಿನಂದು ಮೂರಕ್ಕೂ ಹೆಚ್ಚು ಸಾವಾಗಿದ್ದು, ವಕೀಲ ಹುಸೇನ್ ಓವೈಸಿ ಎಂಬುವವರಿಂದ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ.
ಹೌದು ಹೈವೇದಲ್ಲಿ ಕಲ್ಲಿಟ್ಟು ಡಿವೈಡರ್ ಮೇಲೆ ಕುಳಿತು ಗ್ಯಾಂಗ್ ವಾಚ್ ಮಾಡುತ್ತೆ. ಒಂದು ಕಾರು ತಪ್ಪಿದರೆ ಕಲ್ಲು ಸ್ಥಳಾಂತರ ಮಾಡಿ ಇನ್ನೊಂದು ಕಾರಿಗೆ ಸ್ಕೆಚ್ ಹಾಕುತ್ತೆ. ಆರೋಪಿಗಳ ಚಲನವಲನ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮ್ ಅಲ್ಲಿ ಸೆರೆಯಾಗಿದೆ.
ಈ ರೀತಿ ಕೃತ್ಯಗಳು ನಡೆಯಲು ಹೈವೇಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದೇ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಹೈವೇ ಪೆಟ್ರೋಲಿಂಗ್,ಸಿಸಿಟಿವಿ ಕ್ಯಾಮೆರಾಗಳು ಸೇರಿದಂತೆ ತುರ್ತುಸಂದರ್ಭದಲ್ಲಿ ಅಗತ್ಯ ವೈದ್ಯಕೀಯ ಸೇವೆಗಳಿಲ್ಲ ಎಂದು ತಿಳಿದು ಬಂದಿದೆ. ಡಿಜಿ ಐಜಿಪಿ,ಹೈವೇ ಅಥಾರಿಟಿ, ಹೈವೇ ಚೀಫ್ ಇಂಜಿನಿಯರ್ ಗೆ ದೂರು ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






