Sri Krishna: ಶ್ರೀ ಕೃಷ್ಣನ ಅಂತ್ಯ ಆಗಿದ್ದು ಹೇಗೆ!? ಕೃಷ್ಣನಿಗಿತ್ತ ಗಾಂಧಾರಿಯ ಶಾಪ..?

ಕೃಷ್ಣನೆಡೆಗೆ ಭಕ್ತಿಗಿಂತಲೂ ಸದರವೇ ಹೆಚ್ಚು ಸದರಕ್ಕೆ ಒಗ್ಗುವ ವೈವಿದ್ಯತೆಯುಳ್ಳ ದೇವರು ಆತ. ಹದಿಯರಿಗೆ ಇನಿಯ, ಕಿರಿಯರಿಗೆ ಸಖ, ಮಕ್ಕಳಿಗೆ ಆಪ್ತ, ತಾಯಂದಿರಿಗೆ ತುಂಟ ಮಗ, ಶ್ರಮಿಕರಿಗೆ ಕರ್ಮಪಾಠ ಹೇಳುವ ವೇದಾಂತಿ, ಹಿರಿಯರಿಗೆ ಜಗದ್ಗುರು. ಎಳವೆಯವರಿಂದ ಹಿರಿಯರ ವರೆಗೂ ಅವರಿವರಿಗೆ ಮನಸ್ಥಿತಿಗೆ, ಭಕ್ತಿಯ ರೂಪಕ್ಕೆ ತಕ್ಕಂತೆ ಒಗ್ಗುವ ವೈವಿದ್ಯಮಯ ದೇವ ಶ್ರೀಕೃಷ್ಣ.
ವಿಷ್ಣು ದೇವನು ಭೂಮಿಯ ಮೇಲೆ ಕೃಷ್ಣ ರೂಪವಾಗಿ ಸಾಮಾನ್ಯ ಮನುಷ್ಯನಾಗಿ ಕಾಣಿಸಿಕೊಳ್ಳುತ್ತಾನೆ. ಭೂಮಿಯ ಮೇಲೆ ಯಾವ ಜೀವಿ ಜನಿಸುತ್ತದೆಯೋ ಆ ಜೀವಿ ಒಂದಲ್ಲ ಒಂದು ದಿನ ಈ ಭೂಮಿಯನ್ನು ತೊರೆದು ಹೋಗಬೇಕು. ಭೂಮಿಯ ಮೇಲೆ ಜನನ ಹೇಗೆ ನಿಶ್ಚಿತವೋ ಹಾಗೇ ಸಾವೂ ಖಚಿತ. ಈ ನಿಯಮ ಕೃಷ್ಣನಾಗಿ ಮಾನವ ರೂಪದಲ್ಲಿ ಭೂಮಿಗೆ ಬಂದ ವಿಷ್ಣುವಿಗೂ ಇದೇ ನಿಯಮ ಅನ್ವಯವಾಗುವುದು. ಭೂಮಿಯ ಮೇಲೆ ಶ್ರೀಕೃಷ್ಣನ ಮರಣದ ಕುರಿತು ಒಂದಿಷ್ಟು ಮಾಹಿತಿ ಹೀಗಿದೆ.
ಮಹಾಭಾರತದಲ್ಲಿ ಶ್ರೀಕೃಷ್ಣ:
ಶ್ರೀಕೃಷ್ಣನಾಗಿ ಭೂಮಿಯಲ್ಲಿ ಜನಿಸಿದ ವಿಷ್ಣು ದೇವನು ಪಾಂಡವರು ಮತ್ತು ಕೌರವರ ನಡುವೆ ನಡೆದ ಮಹಾಭಾರತ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ಮಹಾಭಾರತ ಯುದ್ಧದಲ್ಲಿ ಶ್ರೀಕೃಷ್ಣನು ಅರ್ಜುನನ ಸಾರಥಿಯಾಗಿ ನಿಂತು ಪಾಂಡವರ ವಿಜಯಕ್ಕೆ ಮೂಲ ಕಾರಣೀಭೂತನಾದನು.
2. ಕಲಿಯುಗದ ಆರಂಭ:
ಮಹಾಭಾರತ ಯುದ್ಧ ನಡೆದು 36 ವರ್ಷಗಳ ಬಳಿಕ ಶ್ರೀಕೃಷ್ಣನು ತನ್ನ ದೇಹವನ್ನು ತೊರೆದನು ಎಂದು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಶ್ರೀಕೃಷ್ಣನು ತನ್ನ ದೇಹವನ್ನು ಭೂಮಿಯಲ್ಲಿ ತೊರೆದ ನಂತರ ಭೂಲೋಕದಲ್ಲಿ ಕಲಿಯುಗ ಎನ್ನುವಂತಹುದ್ದು ಆರಂಭವಾಯಿತು.
3. ದೇಹವನ್ನು ತೊರೆದ ಶ್ರೀಕೃಷ್ಣ:
ಮಹಾಭಾರತ ಯುದ್ಧದ ನಂತರ ಶ್ರೀಕೃಷ್ಣನು ಎಲ್ಲವನ್ನು ತೊರದು ಕಾಡಿನಲ್ಲಿ ವಾಸವಾಗಲು ಹೋಗುತ್ತಾನೆ. ಆ ಸಮಯದಲ್ಲಿ ಶ್ರೀಕೃಷ್ಣ ಒಂದು ಮರದ ಕೆಳಗೆ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿರುತ್ತಾನೆ. ಶ್ರೀಕೃಷ್ಣನ ಕಾಲುಗಳನ್ನು ಕಂಡು ಜಿಂಕೆಯೆಂದು ತಿಳಿದ ಭೇಟೆಗಾರನು ಶ್ರೀಕೃಷ್ಣನಿಗೆ ಬಾಣವನ್ನು ಹೂಡುತ್ತಾನೆ. ಇದರಿಂದಾಗಿ ಶ್ರೀಕೃಷ್ಣನು ಕಾಡಿನಲ್ಲೇ ತನ್ನ ಪ್ರಾಣವನ್ನು ತ್ಯಜಿಸುತ್ತಾನೆ. ಶ್ರೀಕೃಷ್ಣನಿಗೆ ಬಾಣ ಬಿದ್ದಿರುವುದು ಕಂಡು ಭೇಟೆಗಾರನು ನನ್ನನ್ನು ಕ್ಷಮಿಸಿ ನನಗೆ ತಿಳಿಯದೇ ಬಾಣವನ್ನು ಹೂಡಿದ್ದೇನೆ ಎಂದು ಹೇಳುತ್ತಾನೆ. ಆಗ ಶ್ರೀಕೃಷ್ಣನು, ಇದರಲ್ಲಿ ನಿನ್ನದೇನೂ ತಪ್ಪಿಲ್ಲ. ನಾನು ಭೂಮಿಯನ್ನು ತೊರೆಯುವ ಸಮಯ ಬಂದಿದೆ. ಹಾಗಾಗಿ ನಿನ್ನ ಬಾಣ ನನಗೆ ಬಂದು ತಗುಲಿತು ಎಂದು ಹೇಳುತ್ತಾನೆ.
4. ಶ್ರೀಕೃಷ್ಣನ ಅಂತಿಮ ಸಂಸ್ಕಾರ:
ಶ್ರೀಕೃಷ್ಣನು ಮರಣ ಹೊಂದಿರುವ ಸುದ್ದಿಯನ್ನು ತಿಳಿದ ತಕ್ಷಣ ಪಾಂಡವರು ಶ್ರೀಕೃಷ್ಣನು ಮರಣ ಹೊಂದಿದ ಸ್ಥಳಕ್ಕೆ ಆಗಮಿಸುತ್ತಾರೆ. ಹಾಗು ಪಾಂಡವರಲ್ಲಿ ಅರ್ಜುನನು ಶ್ರೀಕೃಷ್ಣನಿಗೆ ಪ್ರಿಯವಾದವನಾದ್ದರಿಂದ ಸ್ವತಃ ಅರ್ಜುನನೇ ಶ್ರೀಕೃಷ್ಣನ ಅಂತಿಮ ವಿಧಿಗಳನ್ನು ಪೂರ್ಣಗೊಳಿಸುತ್ತಾನೆ.
5. ಶ್ರೀಕೃಷ್ಣನ ಅಂತ್ಯಕ್ರಿಯೆ ನಡೆದ ಸ್ಥಳ:
ಗುಜರಾತಿನ ಸೋಮನಾಥ ದೇವಾಲಯದ ಬಳಿ ಇರುವ ಹಿರಣ್ಯ, ಸರಸ್ವತಿ ಮತ್ತು ಕಪಿಲಾ ನದಿಗಳ ಸಂಗಮದಲ್ಲಿ ಶ್ರೀಕೃಷ್ಣನ ಅಂತ್ಯ ಸಂಸ್ಕಾರ ಅಥವಾ ಅಂತಿಮ ಸಂಸ್ಕಾರ ನಡೆಯಿತು ಎಂದು ಹೇಳಲಾಗುತ್ತದೆ.
ಶ್ರೀಕೃಷ್ಣನು ಮರಣ ಹೊಂದಿದ ನಂತರ ಆತನ ಅಂತ್ಯಕ್ರಿಯೆಯನ್ನು ಪಾಂಡವರೇ ಮಾಡುತ್ತಾರೆ. ಪಾಂಡವರಲ್ಲೂ ಅರ್ಜುನ ಶ್ರೀಕೃಷ್ಣನಿಗೆ ತುಂಬಾ ಆಪ್ತನಾಗಿದ್ದ ಕಾರಣ ಅವನೇ ಶ್ರೀಕೃಷ್ಣನ ಅಂತ್ಯಕ್ರಿಯೆಯನ್ನು ಮಾಡುತ್ತಾನೆ.
5. ಶ್ರೀಕೃಷ್ಣನ ಅಂತ್ಯಕ್ರಿಯೆ ನಡೆದ ಸ್ಥಳ:
ಗುಜರಾತಿನ ಸೋಮನಾಥ ದೇವಾಲಯದ ಬಳಿ ಇರುವ ಹಿರಣ್ಯ, ಸರಸ್ವತಿ ಮತ್ತು ಕಪಿಲಾ ನದಿಗಳ ಸಂಗಮದಲ್ಲಿ ಶ್ರೀಕೃಷ್ಣನ ಅಂತ್ಯ ಸಂಸ್ಕಾರ ಅಥವಾ ಅಂತಿಮ ಸಂಸ್ಕಾರ ನಡೆಯಿತು ಎಂದು ಹೇಳಲಾಗುತ್ತದೆ.
ಶ್ರೀಕೃಷ್ಣನು ಮರಣ ಹೊಂದಿದ ನಂತರ ಆತನ ಅಂತ್ಯಕ್ರಿಯೆಯನ್ನು ಪಾಂಡವರೇ ಮಾಡುತ್ತಾರೆ. ಪಾಂಡವರಲ್ಲೂ ಅರ್ಜುನ ಶ್ರೀಕೃಷ್ಣನಿಗೆ ತುಂಬಾ ಆಪ್ತನಾಗಿದ್ದ ಕಾರಣ ಅವನೇ ಶ್ರೀಕೃಷ್ಣನ ಅಂತ್ಯಕ್ರಿಯೆಯನ್ನು ಮಾಡುತ್ತಾನೆ.
ನಿಮ್ಮ ಪ್ರತಿಕ್ರಿಯೆ ಏನು?






