ಅಪ್ಪಿತಪ್ಪಿಯೂ ಶುಕ್ರವಾರದಂದು ಈ ಕೆಲಸ ಮಾಡಬೇಡಿ! ಮಾಡಿದ್ರೆ ನಿಮಗೇ ಕಷ್ಟ

ನವೆಂಬರ್ 8, 2024 - 06:56
 0  12
ಅಪ್ಪಿತಪ್ಪಿಯೂ ಶುಕ್ರವಾರದಂದು ಈ ಕೆಲಸ ಮಾಡಬೇಡಿ! ಮಾಡಿದ್ರೆ ನಿಮಗೇ ಕಷ್ಟ

 

 

 

ಶುಕ್ರವಾರದ ಶುಭ ದಿನವನ್ನು ಲಕ್ಷ್ಮಿ ದೇವಿಗೆ ಅರ್ಪಿಸಿದರೆ. ಮತ್ತೊಂದೆಡೆ ಶುಕ್ರ ಗ್ರಹಕ್ಕೆ ಅರ್ಪಿಸಲಾಗಿದೆ. ಹೀಗಾಗಿ ನಾವು ದಿನ ಮಾಡುವ ಕೆಲವೊಂದು ಸಣ್ಣ ತಪ್ಪುಗಳು ಶುಕ್ರ ಮತ್ತು ಮಾತೆ ಲಕ್ಷ್ಮಿಯ ಕೋಪಕ್ಕೆ ಕಾರಣವಾಗುತ್ತದೆ. ಆಗ ಜೀವನದಲ್ಲಿ ನಷ್ಟ, ಹಣದ ಸಮಸ್ಯೆ, ದುಃಖ ಆವರಿಸುತ್ತದೆ. ಇಂದು ಶುಕ್ರವಾರ. ದಿನ ಕೆಲವು ವಿಶೇಷ ಪರಿಹಾರಗಳನ್ನು ಮಾಡುವ ಮೂಲಕ ಜಾತಕದಲ್ಲಿ ಶುಕ್ರ ಗ್ರಹವನ್ನು ಬಲಪಡಿಸಿಕೊಳ್ಳಬಹುದು. ಆದ್ರೆ ಅಪ್ಪಿತಪ್ಪಿ ದಿನ ತಪ್ಪು ಮಾಡಿದ್ರೆ, ಶುಕ್ರನನ್ನು ಕೋಪಕ್ಕೆ ಗುರಿ ಮಾಡಿದ್ರೆ ಜಾತಕದಲ್ಲಿ ಶುಕ್ರ ದುರ್ಬಲನಾಗುತ್ತಾನೆ. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ.

ಶುಕ್ರವಾರದಂದು ಮಾಡಬಾರದ ಐದು ಕೆಲಸಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಮನೆಯನ್ನು ಕೊಳಕು ಕೊಳಳಾಗಿ ಇಟ್ಟುಕೊಳ್ಳಬೇಡಿ ಮನೆಯನ್ನು ಪ್ರತಿದಿನ ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೇವಲ ಪೂಜಾ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೆ ಎಲ್ಲಾ ಸಮಯದಲ್ಲೂ ಮನೆಯಲ್ಲಿ ಶುಚಿತ್ವಕ್ಕೆ ವಿಶೇಷ ಮಹತ್ವವಿದೆ. ಲಕ್ಷ್ಮಿ ದೇವಿಗೆ ವಿಶೇಷವಾಗಿ ಸ್ವಚ್ಛತೆ ಇಷ್ಟ. ಹಾಗಾಗಿ ಅಪ್ಪಿತಪ್ಪಿಯೂ ಮನೆಯನ್ನು ಕೊಳಕು ಮಾಡಬೇಡಿ. ಶುಕ್ರವಾರದಂದು ಮನೆಯನ್ನು ಸ್ವಚ್ಛಗೊಳಿಸಲು ವಿಶೇಷ ಗಮನ ನೀಡಬೇಕು. ಆದರೆ ಸೂರ್ಯಾಸ್ತದ ನಂತರ ಮನೆಯನ್ನು ಸ್ವಚ್ಛಗೊಳಿಸಬೇಡಿ.

ಮದ್ಯ ಮತ್ತು ಮಾಂಸ ತಿನ್ನಬೇಡಿ.. ಮದ್ಯ ಮತ್ತು ಮಾಂಸಾಹಾರವನ್ನು ಪೂಜೆಯ ಸಮಯದಲ್ಲಿ ಮಾತ್ರವಲ್ಲದೆ ವಿಶೇಷ ರಜಾ ದಿನಗಳಲ್ಲಿಯೂ ನಿಷೇಧಿಸಲಾಗಿದೆ. ವಿಶೇಷವಾಗಿ ಶುಕ್ರವಾರದಂದು ಮದ್ಯ ಮತ್ತು ಮಾಂಸವನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಮನೆಯ ವೈಭವ ಕ್ರಮೇಣ ಕಳೆದು ಹೋಗುತ್ತದೆ.

ಯಾರಿಗೂ ಸಕ್ಕರೆ ಸಾಲ ಕೊಡಬೇಡಿ ಹಿಂದೂ ನಂಬಿಕೆಗಳ ಪ್ರಕಾರ ಶುಕ್ರವಾರ ಸಕ್ಕರೆಯನ್ನು ದಾನ ಮಾಡಬಾರದು ಅಥವಾ ಎರವಲು ಪಡೆಯಬಾರದು. ಹೀಗೆ ಮಾಡುವುದರಿಂದ ಶುಕ್ರನು ದುರ್ಬಲನಾಗುತ್ತಾನೆ. ಸಂತೋಷ ಮತ್ತು ಖ್ಯಾತಿಯು ಶುಕ್ರನ ಅಂಶಗಳಾಗಿವೆ ಎಂದು ನಂಬಲಾಗಿದೆ. ಶುಕ್ರನು ದುರ್ಬಲನಾಗಿದ್ದರೆ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯ ಕೊರತೆ ಇರುತ್ತದೆ.

ಹಣ ಕೊಡಬೇಡಿ.. ತೆಗೆದು ಕೊಳ್ಳಬೇಡಿ ಶುಕ್ರವಾರ ಹಣದ ವ್ಯವಹಾರ ಮಾಡಬಾರದು. ಒಬ್ಬರಿಂದ ಹಣವನ್ನು ತೆಗೆದುಕೊಳ್ಳಬಾರದು ಅಥವಾ ಕೊಡಬಾರದು. ಅದೇ ರೀತಿ ಯಾರ ಬಳಿಯೂ ಸಾಲ ಮಾಡಬಾರದು, ಯಾರಿಗೂ ಸಾಲ ಕೊಡಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಬಡತನದಿಂದ ಮನೆಯಲ್ಲಿ ತೊಂದರೆ ಉಂಟಾಗುತ್ತದೆ.. ಮನೆಯಲ್ಲಿ ಅಶಾಂತಿ ಇರುತ್ತದೆ ಎಂಬ ನಂಬಿಕೆ ಇದೆ.

ಇತರರನ್ನು ಅವಮಾನ ಮಾಡಬೇಡಿ ಶುಕ್ರವಾರ ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸಿ. ದಿನ ಎಲ್ಲಾ ರೀತಿಯ ಜಗಳಗಳನ್ನು ತಪ್ಪಿಸಿ. ಅದೇ ರೀತಿ ಮಾತಿನ ವಿಚಾರದಲ್ಲೂ ಹಿಡಿತ ಸಾಧಿಸಬೇಕು. ಯಾರನ್ನೂ ನಿಂದಿಸಬೇಡಿ ಅಥವಾ ಅನುಚಿತವಾಗಿ ವರ್ತಿಸಬೇಡಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow