ಅಯೋಗ್ಯರ ರೀತಿ ಮಾತಾಡ್ಬೇಡಿ: ಮೊದಲು ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ- ವಿಜಯೇಂದ್ರ ಕಿಡಿ!

ಎಪ್ರಿಲ್ 7, 2025 - 14:13
 0  18
ಅಯೋಗ್ಯರ ರೀತಿ ಮಾತಾಡ್ಬೇಡಿ: ಮೊದಲು ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ- ವಿಜಯೇಂದ್ರ ಕಿಡಿ!

ಬೆಂಗಳೂರು:- ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಜನಾಕ್ರೋಶ ಯಾತ್ರೆ ಮಾಡ್ತಿದೆ ಎಂದು ಹೇಳಿದ ಅಯೋಗ್ಯರು ಯಾರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣ ಕಿಡಿಕಾರಿದರು

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಸುಭದ್ರ ಹಾಗೂ ಶಕ್ತಿಯುತವಾಗಿದೆ. ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಜನಾಕ್ರೋಶ ಯಾತ್ರೆ ಮಾಡ್ತಿದೆ. ಯಾವ ಅಯೋಗ್ಯ ಇದನ್ನು ಹೇಳಿರೋದು? ನಮಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿಲ್ಲ. ಕಾಂಗ್ರೆಸ್‌ನವರಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ ನಮಗಲ್ಲ ಎಂದು ಪರೋಕ್ಷವಾಗಿ ಡಿಕೆಶಿ ಗೆ ತಿರುಗೇಟು ನೀಡಿದರು. 

ಭಾನುವಾರವಷ್ಟೇ ನಮ್ಮ ಪಕ್ಷದ ಸಂಸ್ಥಾಪನಾ ದಿನ ಮಾಡಿದ್ದೇವೆ. ವಿಶ್ವದ ಅತೀ ದೊಡ್ಡ ಪಕ್ಷ ಬಿಜೆಪಿ. ಕಾಂಗ್ರೆಸ್‌ಗೆ ಇವತ್ತು ಯಾವ ಪರಿಸ್ಥಿತಿ ಬಂದಿದೆ ಎಂದು ಎಲ್ಲರಿಗೂ ಗೊತ್ತಿದೆ. ನಾವು ಅಸ್ತಿತ್ವಕ್ಕೆ ಹೋರಾಟ ಮಾಡುತ್ತಿಲ್ಲ. ಚುನಾವಣೆಗಳು ಇಲ್ಲದಿದ್ದರೂ ಜನಹಿತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮದೇ ಆದ ಕೆಲ ತಪ್ಪುಗಳಿಂದ ನಾವು ಈ ಬಾರಿ ಅಧಿಕಾರಕ್ಕೆ ಬರದಿರಬಹುದು ಅಷ್ಟೇ. ಕಾಂಗ್ರೆಸ್‌ನವರ ಅನೇಕ ಹೋರಾಟ ಮಾಡಿದ್ದೇ ಚುನಾವಣೆಗಳು ಹತ್ತಿರ ಬಂದಾಗ. ಡಿಕೆಶಿ ಮೇಕೆದಾಟು ಪಾದಯಾತ್ರೆ ಮಾಡಿದ್ದು ಚುನಾವಣೆಗಾಗಿಯೇ ಎಂದು ಟಾಂಗ್ ನೀಡಿದರು

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow