ಇವರಿಗೆಲ್ಲಾ ಹಿಂದಿ ಭಾಷೆ ತೆಗಳುವುದೇ ಕೆಲಸ: ಚರ್ಚೆ ಹುಟ್ಟು ಹಾಕಿದ ಪವನ್ ಕಲ್ಯಾಣ್ ಹೇಳಿಕೆ!

ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರು ಹಿಂದಿ ಸೇರಿ ಬಹುಭಾಷಾ ಸಂಸ್ಕೃತಿ ಪ್ರತಿಪಾದಿಸಿ ತಮಿಳುನಾಡುಗೆ ಟಾಂಗ್ ಕೊಟ್ಟಿದ್ದಾರೆ. ಹಿಂದಿ ಹೇರಿಕೆಯ ಕುರಿತು ದಕ್ಷಿಣ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಹಿಂದಿ ಭಾಷೆಯನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ಇದರ ಬೆನ್ನಲ್ಲೇ ಆಂಧ್ರ ಪ್ರದೇಶದ ಡಿಸಿಎಂ ಹೇಳಿಕೆ ಚರ್ಚೆ ಹುಟ್ಟು ಹಾಕಿದೆ.
ಮಾತನಾಡಿದ್ರೆ ಸಂಸ್ಕೃತ, ಹಿಂದಿ ಭಾಷೆಯನ್ನು ಬೈಯ್ಯುತ್ತಾರೆ. ಇವೆಲ್ಲಾ ನಮ್ಮ ದೇಶದ ಭಾಷೆಗಳು ಅಲ್ಲವೇ?. ಇಸ್ಲಾಂ, ಕ್ರೈಸ್ತರಿಗೆ ಅಪವಿತ್ರ ಆದರೆ ಸೆಕ್ಯೂಲರಿಸಂ, ಆದ್ರೆ ಅದೇ ಹಿಂದೂಗಳ ಪಾರ್ವತಿ, ಶಿವ, ರಾಮ, ಅಯ್ಯಪ್ಪ ದೇವರಗಳ ಬಗ್ಗೆ ಅಪವಿತ್ರವಾಗಿ ಮಾತಾಡಿದ್ರೆ ನಮಗೆ ಏನಾಗಬಾರದು?. ಬಾಯಿ ಮುಚ್ಚುಕೊಂಡು ಕುಳಿತುಕೊಳ್ಳಬೇಕು ಎಂದು ಹೇಳಿದ್ದಾರೆ.
ತಮಿಳು ನಾಡಿನಲ್ಲಿ ಹಿಂದಿ ಬರಬಾರದು ಎಂದು ಹೇಳುತ್ತಿದ್ದಾರೆ. ಅವಾಗ ನನಗೆ ಅನಿಸಿದ್ದು ಏನೆಂದರೆ, ತಮಿಳು ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬೇಡಿ. ಹಣ ಆದರೆ ಹಿಂದಿಯಿಂದ ಬೇಕು. ಉತ್ತರ ಪ್ರದೇಶ, ಬಿಹಾರ್, ಛತ್ತೀಸ್ಘಡ ಇಲ್ಲಿಂದ ಸಿನಿಮಾ ಮೂಲಕ ಹಣ ಬೇಕು ಎನ್ನುತ್ತೀರಿ. ಆದರೆ ಹಿಂದಿ ನಮಗೆ ಬೇಡ ಎಂದರೆ ಅದು ಹೇಗೆ ನ್ಯಾಯ ಆಗುತ್ತದೆ ಎಂದು ಪವನ್ ಕಲ್ಯಾಣ್ ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






