ಕಾಂತಾರ 2’ಗಾಗಿ ಪುರಾತನ ಸಮರ ಕಲೆಯ ಅಭ್ಯಾಸದಲ್ಲಿ ತೊಡಗಿದ ರಿಷಬ್ ಶೆಟ್ಟಿ.

ಕಾಂತಾರ 2’ಗಾಗಿ ಪುರಾತನ ಸಮರ ಕಲೆಯ ಅಭ್ಯಾಸದಲ್ಲಿ ತೊಡಗಿದ ರಿಷಬ್ ಶೆಟ್ಟಿ.
ಸದ್ಯಕ್ಕೆ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ‘ಕಾಂತಾರ 2’ ಒಂದು. ‘ಕಾಂತಾರ’ ಸಿನಿಮಾ ಭಾರಿ ದೊಡ್ಡ ಹಿಟ್ ಆದ ಬೆನ್ನಲ್ಲೆ ಘೋಷಣೆಯಾದ ‘ಕಾಂತಾರ 2’ ಸಿನಿಮಾವನ್ನು, ರಿಷಬ್ ಶೆಟ್ಟಿ ಅವರೇ ನಿರ್ದೇಶಿಸಿ, ನಟಿಸುತ್ತಿದ್ದು, ಈ ಸಿನಿಮಾವನ್ನು ಭಾರಿ ಬಜೆಟ್ನೊಂದಿಗೆ ಬಲು ಜಾಗರೂಕತೆಯಿಂದ ಕಟ್ಟುತ್ತಿದ್ದಾರೆ. ಸಿನಿಮಾಕ್ಕಾಗಿ ಬಲು ದೊಡ್ಡ ಸೆಟ್ಗಳನ್ನು ನಿರ್ಮಿಸಿರುವುದು ಮಾತ್ರವೇ ಅಲ್ಲದೆ, ಸಿನಿಮಾದ ಪಾತ್ರಕ್ಕಾಗಿ ಹೆಚ್ಚುವರಿ ಶ್ರಮ ಹಾಕುತ್ತಿದ್ದಾರೆ. ಇದೀಗ ‘ಕಾಂತಾರ 2’ ಸಿನಿಮಾಕ್ಕಾಗಿ ಪುರಾತನ ಸಮರ ಕಲೆಯೊಂದನ್ನು ಕಲಿಯುತ್ತಿದ್ದಾರೆ ರಿಷಬ್ ಶೆಟ್ಟಿ.
ಕೇರಳದ ಪುರಾತನ ಸಮರ ಕಲೆ ‘ಕಲರಿಪಯಟ್ಟು’ ಅನ್ನು ರಿಷಬ್ ಶೆಟ್ಟಿ ಕಲಿಯುತ್ತಿದ್ದಾರೆ. ಸಿನಿಮಾದ ಆಕ್ಷನ್ ದೃಶ್ಯಗಳಲ್ಲಿ ‘ಕಲರಿಪಯಟ್ಟು’ ಸಮರ ಕಲೆಯನ್ನು ಬಳಸಲಾಗುತ್ತಿದೆ. ಸಿನಿಮಾದ ನಾಯಕ ಕಲರಿಪಯಟ್ಟು ಸಮರ ಕಲೆಯ ಪರಿಣಿತನಾಗಿರುತ್ತಾನೆ, ಹಾಗಾಗಿ ನಾಯಕ ಪಾತ್ರಧಾರಿ ರಿಷಬ್ ಶೆಟ್ಟಿ ಇದೀಗ ಕಲರಿಪಯಟ್ಟು ಸಮರ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.
ತುಳುನಾಡಿನ ಸೃಷ್ಟಿಕರ್ತ ಎಂದೇ ನಂಬಲಾಗಿರುವ ಪರಶುರಾಮ, ಕಳರಿಪಯಟ್ಟು ಸಮರ ಕಲೆಯನ್ನು ಶಿವನಿಂದ ಕಲಿತನು ಎಂಬ ಪ್ರತೀತಿ ಇದೆ. ಇದೀಗ ರಿಷಬ್ ಶೆಟ್ಟಿ ನಿರ್ದೇಶಿಸುತ್ತಿರುವ ‘ಕಾಂತಾರ 2’ ಸಿನಿಮಾ ತುಳುನಾಡಿನ ಪೌರಾಣಿಕ ಕತೆಯನ್ನು ಆಧರಿಸಿದ್ದು, ಸಿನಿಮಾದಲ್ಲಿ ಕಳರಿಪಯಟ್ಟುವಿಗೆ ವಿಶೇಷ ಸ್ಥಾನವಿದೆಯಂತೆ. ಹಾಗಾಗಿಯೇ ರಿಷಬ್ ಶೆಟ್ಟಿ ಕಳರಿಪಯಟ್ಟು ಸಮರ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಈ ಕಲೆ ಕೇರಳದ ಅತ್ಯಂತ ಪುರಾತನ ಸಮರ ಕಲೆಯೆಂದು ಕರೆಯಲಾಗುತ್ತದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






