ಕೆಂಡಸಂಪಿಗೆ ಬ್ಯೂಟಿಗೆ ಯಶ್ ತಾಯಿ ಕೊಟ್ಟಿದ್ರಂತೆ ಬಿಗ್ ಆಫರ್... ಕಾವ್ಯ ಹೇಳಿದ್ದೇನು?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಕೆಂಡಸಂಪಿಗೆ’ ಕೂಡ ಒಂದು. ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ಕಥಾನಾಯಕಿ ಸುಮನಾ ಪಾತ್ರಕ್ಕೆ ಮೊದಲು ಬಣ್ಣ ಹಚ್ಚಿದವರು ನಟಿ ಕಾವ್ಯ ಶೈವ. ‘ಕೆಂಡಸಂಪಿಗೆ’ ಸೀರಿಯಲ್ ಮುಖಾಂತರ ನಟಿ ಕಾವ್ಯ ಶೈವ ಕನ್ನಡಿಗರ ಮನೆ ಮಾತಾದರು. ಕರ್ನಾಟಕದಾದ್ಯಂತ ಜನಪ್ರಿಯತೆ ಪಡೆದರು.
ಕೆಂಡಸಂಪಿಗೆ ಸೀರಿಯಲ್ ಪರಿಣಿತ ಪ್ರೊಡಕ್ಷನ್ಸ್ನಡಿ ಉದಯ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿತ್ತು. ಈ ಸೀರಿಯಲ್ನಲ್ಲಿ ಸುಮನಾ ಪಾತ್ರದಲ್ಲಿ ಮೂಲಕವೇ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು ನಟಿ ಕಾವ್ಯ ಶೈವ. ಸೀರಿಯಲ್ ಮುಗಿಯುತ್ತಿದ್ದಂತೆ ಡಿಕೆಡಿಯಲ್ಲೂ ಡ್ಯಾನ್ಸ್ ಮಾಡಿ ಸೈ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಡಿಕೆಡಿ ವಿನ್ನರ್ ಆಗಿ ಕೂಡ ಹೊರ ಹೊಮ್ಮಿದ್ದರು. ಈಗ ನಟ ಪೃಥ್ವಿ ಅಂಬರ್ ಜೊತೆಗೆ ನಟಿಯಾಗಿ ಕಾವ್ಯಾ ಶೈವ ಅಭಿನಯಿಸುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಹಾಗೂ ತಂದೆಯವರು ಪಿಎ ಪ್ರೊಡಕ್ಷನ್ಸ್ ಶುರು ಮಾಡಿದ್ದಾರೆ. ಆ ಚಿತ್ರಕ್ಕೆ ಕೊತ್ತಲವಾಡಿ ಎಂದು ಹೆಸರನ್ನು ಇಟ್ಟಿದ್ದಾರೆ. ಈಗಾಗಲೇ ನಿನ್ನೆ ಕೊತ್ತಲವಾಡಿ ಸಿನಿಮಾದ ಟೀಸರ್ ಲಾಂಚ್ ಕೂಡ ಮಾಡಲಾಗಿತ್ತು. ಇನ್ನೂ ಇದೇ ವೇಳೆ ತನಗೆ ಸಿಕ್ಕ ಆಫರ್ ಬಗ್ಗೆ ಮಾತಾಡಿದ್ದಾರೆ ನಟಿ ಕಾವ್ಯಾ, ಮೊದಲು ನನಗೆ ಈ ಅವಕಾಶ ಕೊಟ್ಟಿರು ಡೈರೆಕ್ಟರ್ ಸರ್ಗೆ ಥ್ಯಾಂಕ್ಸು.. ಈ ಸಿನಿಮಾ ನಾನು ಮಾಡಬಹುದು ಅಂತ ನನಗೆ ಭರವಸೆ ಇರಲಿಲ್ಲ. ಆದ್ರೆ ಕಥೆ ಬರೆಯುವಾಗ ಒಂದು ಇಮ್ಯಾಜಿನೇಷನ್ನಲ್ಲಿ ಬರೆದಿದ್ದೀನಿ. ಈ ಕ್ಯಾರೆಕ್ಟರ್ಗೆ ಸೂಟ್ ಆಗ್ತೀರಾ ಅಂತ ಅವರು ಹೇಳಿದ್ರು. ಆದ್ರೆ ನಾನು ಮಿಸ್ ಆಗಿ ನನಗೆ ಆಗೋದಿಲ್ಲ ಸರ್ ಅಂತ ಹೇಳಿದ್ದರೇ ನಾನು ಇಲ್ಲಿ ಇರ್ತಾ ಇರಲಿಲ್ಲ ಎಂದರು
ಇದೇ ಮೊದಲ ಬಾರಿಗೆ ಕಿರುತೆರೆಯಿಂದ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ದಾರೆ ಕೆಂಡಸಂಪಿಗೆ ಸೀರಿಯಲ್ ನಟಿ ಕಾವ್ಯ ಶೈವ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಹಾಗೂ ಅರುಣ್ ಕುಮಾರ್ ಅವರು ನಿರ್ಮಿಸಿರೋ ಪಿಎ ಪ್ರೊಡಕ್ಷನ್ಸ್ ಅಡಿಯಲ್ಲಿ ಹೀರೋಯಿನ್ ಆಗಿ ಲಾಂಚ್ ಆಗಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






