ಕೆಪಿಸಿಸಿ ಅಧ್ಯಕ್ಷ ರೇಸ್: ಸತೀಶ್ ಜಾರಕಿಹೊಳಿಗೆ ಒಲಿಯುತ್ತಾ KPCC ಅಧ್ಯಕ್ಷ ಸ್ಥಾನ!?

ನವೆಂಬರ್ 29, 2024 - 12:01
 0  13
ಕೆಪಿಸಿಸಿ ಅಧ್ಯಕ್ಷ ರೇಸ್: ಸತೀಶ್ ಜಾರಕಿಹೊಳಿಗೆ ಒಲಿಯುತ್ತಾ KPCC ಅಧ್ಯಕ್ಷ ಸ್ಥಾನ!?

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರ ದೊಡ್ಡ ಮಟ್ಟದಲ್ಲೇ ಸದ್ದುಮಾಡ್ತಿದೆ. ಡಿಸೆಂಬರ್ ಇಲ್ಲವೇ ಜನವರಿಯಲ್ಲಿ ಸಂಪುಟ ಪುನಾರಚನೆ ಮಾಡೋಕೆ ವರಿಷ್ಠರು ಆಸಕ್ತಿವಹಿಸಿದ್ದಾರೆ. ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಚರ್ಚೆಯಾಗಲಿದೆ. ಡಿಸಿಎಂ,ಎರಡು ಸಚಿವ ಖಾತೆಗಳ ಜೊತೆಗೆ ಅಧ್ಯಕ್ಷ ಸ್ಥಾನ ನಿಭಾಯಿಸೋದು ಕಷ್ಟ ವೆಂದು ನೋವು‌ ತೋಡಿಕೊಂಡಿದ್ದರು. ಹೀಗಾಗಿ ಅಧ್ಯಕ್ಷ ಸ್ಥಾನವನ್ನ ಬೇರೆಯವರಿಗೆ ಕೊಡುವ ಬಗ್ಗೆ ಹೈಕಮಾಂಡ್ ಆಲೋಚನೆ ಮಾಡಿದೆ. ಈ ಬಾರಿ ವಾಲ್ಮೀಕಿ ಸಮುದಾಯಕ್ಕೆ ಈ ಸ್ಥಾನ ನೀಡಬೇಕು ಎಂಬ ಒತ್ತಾಯ ಪ್ರಬಲವಾಗಿದೆ.

ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಕೆ.ಎನ್. ರಾಜಣ್ಣ, ವಾಲ್ಮೀಕಿ ಸಮುದಾಯದ ಪ್ರಭಾವಿ ಮುಖಂಡರಾಗಿದ್ದು, ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಈ ವಿಷಯವನ್ನು ಮಂಡನೆ ಮಾಡಿದ್ದಾರೆ. ಇತ್ತೀಚೆಗೆ ವರಿಷ್ಠರನ್ನು ಭೇಟಿಯಾಗಿರುವ ಸಚಿವ ಕೆ.ಎನ್. ರಾಜಣ್ಣ, ಸಮುದಾಯದ ಮಹತ್ವವನ್ನು ನೆನಪಿಸಿ, ಈ ಬಾರಿಯಾದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸತೀಶ್ ಜಾರಕಿಹೊಳಿ ಅವರಿಗೆ ನೀಡಬೇಕೆಂದು ಮನವಿ ಮಾಡಿದ್ದಾರೆ, ಎಂದು ಹೇಳಲಾಗುತ್ತಿದೆ.

ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವುದರಿಂದ ಅಹಿಂದ ಮತಗಳ ಏಕೀಕರಣಕ್ಕೆ ನೆರವಾಗುತ್ತದೆ. ವಿಶೇಷವಾಗಿ, ಸಚಿವ ಸತೀಶ್ ಜಾರಕಿಹೊಳಿ ಅವರಂತಹ ನಾಯಕರು ಇತರ ಸಮುದಾಯಗಳನ್ನೂ ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ,ಈ ಎಲ್ಲ ಕಾರಣಗಳಿಂದ, ಹೈಕಮಾಂಡ್ ಈ ಬಾರಿಯಾದರೂ ವಾಲ್ಮೀಕಿ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಒತ್ತಾಯ ಪ್ರಬಲವಾಗಿದೆ. ಸತೀಶ್ ಜಾರಕಿಹೊಳಿ ಸಚಿವ ಸ್ಥಾನದ ಜೊತೆ ಕೋಡೋದಾದ್ರೆ ಓಕೆ ಇಲ್ಲವೆಂದ್ರೆ ಬೇಡವೇ ಬೇಡ ಎಂಬ ಬೇಡಿಕೆ ಇಟ್ಟಿದ್ದಾರಂತೆ.ಹಾಗಾಗಿ ಇದ್ರ ಬಗ್ಗೆ ಸಿಎಂ,ಡಿಸಿಎಂ ಜೊತೆ ಚರ್ಚೆಯಾಗಲಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow