ಕೌಶಲ್ಯ, ತಂತ್ರಜ್ಞಾನ, ನಾವೀನ್ಯತೆ ಮತ್ತು ಮಾನವಶಕ್ತಿ ಕುವೈತ್ʼಗೆ ಅಗತ್ಯವಿದೆ: ಪ್ರಧಾನಿ ಮೋದಿ

ಕುವೈತ್: ಕೌಶಲ್ಯ, ತಂತ್ರಜ್ಞಾನ, ನಾವೀನ್ಯತೆ ಮತ್ತು ಮಾನವಶಕ್ತಿ ಕುವೈತ್ʼಗೆ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕುವೈತ್ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಅವರು, ಕೌಶಲ್ಯ, ತಂತ್ರಜ್ಞಾನ, ನಾವೀನ್ಯತೆ ಮತ್ತು ಮಾನವಶಕ್ತಿ ಕುವೈತ್ಗೆ ಅಗತ್ಯವಿದೆ. ಆ ಮೂಲಕ ವ್ಯಾಪಾರದಲ್ಲಿ ನಾವೀನ್ಯತೆ ಹೊಂದುವ ಮೂಲಕ ಆರ್ಥಿಕವಾಗಿ ಸದೃಢವಾಗಲು ಬಯಸುತ್ತಿದೆ.
ಇದೇ ರೀತಿ ಭಾರತವು ನಾವೀನ್ಯತೆ ಮತ್ತು ತನ್ನ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಗಮನ ಹರಿಸಿದೆ. ನೂತನ ಕುವೈತ್ಗೆ ಅಗತ್ಯವಿರುವ ಕೌಶಲ್ಯ, ತಂತ್ರಜ್ಞಾನ, ನಾವೀನ್ಯತೆ ಮತ್ತು ಮಾನವಶಕ್ತಿಯನ್ನು ಭಾರತ ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತದ ಎಲ್ಲ ಪ್ರದೇಶದ ಜನರು ನನ್ನ ಮುಂದೆ ಕಾಣುತ್ತಿದ್ದಾರೆ. ಎಲ್ಲರ ಹೃದಯದಲ್ಲಿ ಒಂದೇ ಪ್ರತಿಧ್ವನಿ ‘ಭಾರತ್ ಮಾತಾ ಕೀ ಜೈ’. 4 ದಶಕಗಳ ನಂತರ ಭಾರತದ ಪ್ರಧಾನಿಯೊಬ್ಬರು ಕುವೈತ್ಗೆ ಬಂದಿದ್ದಾರೆ. ನೀವು ಭಾರತದಿಂದ ಇಲ್ಲಿಗೆ ಬರಲು ಬಯಸಿದರೆ 4 ಗಂಟೆ ಸಾಕು. ಆದರೆ, ಭಾರತದ ಪ್ರಧಾನಿ ಇಲ್ಲಿಗೆ ಬರಲು 4 ದಶಕ ಬೇಕಾಯಿತು ಎಂದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






