ಗ್ರ್ಯಾಂಡ್ ಫಿನಾಲೆಗೆ ಈ ನಾಲ್ವರು ಹೋಗೋದು ಗ್ಯಾರಂಟಿ: ಕ್ಯಾಪ್ಟನ್ ರಜತ್ ಹೇಳಿದ ಕಂಟಸ್ಟಂಟ್ ಇವರೇ!

ಬಿಗ್ ಬಾಸ್ ಕನ್ನಡ 11ನೇ ಸೀಸನ್ ಮುಗಿಯಲು ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಈ ಭಾನುವಾರದ ವಾರದ ಕಥೆ ಕಿಚ್ಚನ ಜೊತೆ ಪ್ರೋಮೋ ಬಿಡುಗಡೆಯಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಈ ಬಾರಿಯ ಸೀಸನ್ 11 97ನೇ ದಿನಕ್ಕೆ ಬಂದು ತಲುಪಿದೆ. ಅದರಲ್ಲೂ ಎಲ್ಲಾ ಸೀಸನ್ಗಿಂತಲೂ ಈ ಬಾರಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರದ್ದೇ ದರ್ಬಾರ್ ಆಗಿಬಿಟ್ಟಿದೆ. ಇವರ ಬಿಗ್ ಬಾಸ್ ಮನೆಯಲ್ಲಿನ ಆಟಕ್ಕೆ ವೀಕ್ಷಕರು ಸೈ ಎನ್ನುತ್ತಿದ್ದಾರೆ.
ಬಿಗ್ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಇನ್ನೇನು ಸಮೀಪಿಸುತ್ತಿದೆ. ಮನೆಯ ಸ್ಪರ್ಧಿಗಳು ಫುಲ್ ಅಲರ್ಟ್ ಆಗಿ ಆಡುತ್ತಿದ್ದಾರೆ. ಕ್ಯಾಪ್ಟನ್ ಪಟ್ಟ ಕೂಡ ಬದಲಾವಣೆ ಆಗಿದ್ದು ಭವ್ಯಗೌಡ ಬಳಿಕ ರಜತ್ ಕ್ಯಾಪ್ಟನ್ ಆಗಿದ್ದಾರೆ.
ಈ ವಾರ ಬಿಗ್ಬಾಸ್ ಕೊಟ್ಟಿರುವ ಟಾಸ್ಕ್ನಲ್ಲಿ ರಜತ್ ಅವರು ಖಳನಾಯಕ ಆಗಿ ಆಡುತ್ತಿದ್ದಾರೆ. ಆದರೆ ಮನೆಯಲ್ಲಿ ರಜತ್, ಹನುಮಂತು ಹಾಗೂ ಚೈತ್ರಾ ಮಧ್ಯೆ ಮುನಿಸು ಮುಂದುವರೆದಂತೆ ಕಾಣುತ್ತಿದೆ. ಏಕೆಂದರೆ ರಜತ್ ಅವರು ಮನೆಗೆ ಬಂದ ಮೇಲೆ ಯಾವತ್ತೂ ಹನುಮಂತು, ಚೈತ್ರಾ ಪರವಾಗಿ ಮಾತನಾಡಿಲ್ಲ ಎಂದು ಹೇಳಬಹುದು. ಅದರಂತೆ ರಜತ್ ಪರವಾಗಿಯೂ ಈ ಇಬ್ಬರು ಒಳ್ಳೆಯ ಮನಸ್ಥಿತಿ ಹೊಂದಿಲ್ಲ. ಆರಂಭದಿಂದಲೂ ಇವರಲ್ಲಿ ಮುನಿಸು ಸ್ಫೋಟವಾಗುತ್ತಲೇ ಇದೆ.
ಫಿನಾಲೆಗೆ ತಲುಪಲು ಅರ್ಹತೆ ಇಲ್ಲದ ಐವರು ಸ್ಪರ್ಧಿಗಳಿಗೆ ಟಿಕೆಟ್ ಟು ಹೋಮ್ ಫಲಕ ಕೊರಳಿಗೆ ಹಾಕಬೇಕು ಎಂದು ಬಿಗ್ಬಾಸ್ ಹೇಳಿದ್ದಾರೆ. ಇದಕ್ಕೆ ಹನುಮಂತು, ಚೈತ್ರಾ, ಗೌತಮಿ, ಭವ್ಯಗೌಡ ಹಾಗೂ ಮೋಕ್ಷಿತಾ ಅವರ ಕೊರಳಿಗೆ ರಜತ್ ಬೋರ್ಡ್ ಹಾಕಿದ್ದಾರೆ. ಅಂದರೆ ಈ ಐವರಲ್ಲಿ ಈ ವಾರ ಒಬ್ಬರು ಹೊರ ಬರುವುದು ಪಕ್ಕಾ ಆಗಿದೆ.
ಇದರ ಜೊತೆಗೆ 5 ಸ್ಪರ್ಧಿಗಳು ಫಿನಾಲೆಗೂ ಹೋಗುವುದಿಲ್ಲ ಎನ್ನುವುದು ಖಚಿತ ಎಂದು ಹೇಳಿದಂತೆ ಆಗಿದೆ. ಅಂದರೆ ಈ 5 ಸ್ಪರ್ಧಿಗಳಿಗೆ ಫಿನಾಲೆಗೆ ಹೋಗುವ ಅರ್ಹತೆ ಇಲ್ಲವೆಂದು ಮೊದಲೇ ಸೂಚನೆ ಕೊಟ್ಟಂತೆ ಆಗಿದೆ. ಅಲ್ಲದೇ ಮಂಜು, ತ್ರಿವಿಕ್ರಮ್, ರಜತ್ ಹಾಗೂ ಧನರಾಜ್ ಈ 4 ಸ್ಪರ್ಧಿಗಳು ಫೈನಲ್ಗೆ ಟಿಕೆಟ್ ಪಡೆಯುತ್ತಾರೆ ಎಂದು ಈ ಟಾಸ್ಕ್ ಮೂಲಕ ಗೊತ್ತಾಗುತ್ತದೆ.
ಇನ್ನು ಈ ವೇಳೆ ರಜತ್ ಹಾಗೂ ಚೈತ್ರಾ ಮಧ್ಯೆ ಮಾತಿನ ಸಮರ ನಡೆದಿದ್ದು ಎಲ್ಲರ ಗಮನ ಸೆಳೆದಿದೆ. ರಜತ್ ಹಾಗೂ ಚೈತ್ರಾ ಇಬ್ಬರು ಪರಸ್ಪರ ಬೈದಾಡಿಕೊಳ್ಳುವಾಗ ಉಳಿದ ಸ್ಪರ್ಧಿಗಳು ಕುಳಿತು ನಕ್ಕು ಎಂಜಾಯ್ ಮಾಡಿದ್ದಾರೆ. ಇವರ ಇಬ್ಬರ ಮಧ್ಯೆ ಯಾರು ಬಂದಿಲ್ಲ. ಒಂದಂತೂ ನಿಜ ಟಾಸ್ಕ್ನಲ್ಲಿ ಮನೆಯ ಖಳನಾಯಕ ರಜತ್ ಅವರು ಫಲಕ ಹಾಕಿದವರಲ್ಲಿ ಒಂದು ವಿಕೆಟ್ ಉರುಳುವುದು ಪಕ್ಕಾ ಆಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






