ದತ್ತನ ಆ ದಿನಗಳು: ಪ್ರೇಕ್ಷಕರ ಗಮನ ಸೆಳೆಯುತ್ತಿದೆ ದೃಷ್ಟಿ ಬೊಟ್ಟು ಕಥೆ!

ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ಶುರುವಾಗಿರುವ ದೃಷ್ಟಿ ಬೊಟ್ಟು ಸೀರಿಯಲ್ ದಿನಕ್ಕೊಂದು ಟ್ವಿಸ್ಟ್ ಕೊಡುತ್ತಿದ್ದು, ಪ್ರೇಕ್ಷಕರು ಬಹಳ ಇಷ್ಟದಿಂದ ಸೀರಿಯಲ್ ನೋಡುತ್ತಿದ್ದಾರೆ.
ಇದೀಗ ನಾಯಕ ದತ್ತನಿಗೆ ತಾಯಿ ಅಬ್ಬಕ್ಕ ಇಂಪನಾ ಅನ್ನೋ ಹುಡುಗಿ ಜೊತೆ ಮದುವೆ ಫಿಕ್ಸ್ ಮಾಡ್ತಾಳೆ. ಆದ್ರೇ ಇಂಪನಾಗೆ ಈ ಮದುವೆ ಇಷ್ಟ ಇರಲ್ಲ. ಮನೆಯವರ ಒತ್ತಾಯಕ್ಕೆ ದತ್ತನನ್ನ ಮದುವೆ ಆಗಲು ಒಪ್ಪಿಕೊಂಡಿರುತ್ತಾಳೆ. ಕೊನೆಗೂ ಈ ವಿಷ್ಯ ದತ್ತನಿಗೆ ಗೊತ್ತಾಗುತ್ತೆ. ಮೊದಲೇ ಚಂದದ ಹುಡುಗಿರು ಅಂದ್ರೆ ದ್ವೇಷ ಕಾರೋ ದತ್ತನಿಗೆ ಇಂಪನಾ ನಡುವಳಿಕೆ ಆಘಾತ ತಂದಿದೆ.
ಇದೇ ನೋವಲ್ಲಿ ಹಳೆ ನೆಪುಗಳಿಗೆ ಜಾರುವ ದತ್ತ, ದೃಷ್ಟಿ ಮುಂದೆ ತನ್ನ ನೋವನ್ನ ತೋಡಿಕೊಳ್ತಾನೆ. ಆಗ ಶುರುವಾಗೋದೆ ದತ್ತನ ಆ ದಿನಗಳು. ಮುಗ್ಧ ಮನಸ್ಸಿನ ದತ್ತ ಪಾಟೀಲ್ ಬಳ್ಳಾರಿಯ ಡಾನ್ ದತ್ತ ಭಾಯ್ ಆಗಿದ್ದು ಹೇಗೆ? ಚಂದದ ಹುಡುಗಿರನ್ನ ಕಂಡ್ರೇ ದತ್ತನಿಗೆ ಯಾಕೆ ಅಷ್ಟೊಂದು ದ್ವೇಷ? ಎಂಬ ಪ್ರಶ್ನೆಗಳಿಗೆ ಈ ವಾರದ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






