ದಯವಿಟ್ಟು ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಬೇಡಿ: ಉಗ್ರರ ದಾಳಿ ಬಗ್ಗೆ ರಾಖಿ ಸಾವಂತ್ ಬೇಸರ!

ಇತ್ತೀಚೆಗೆ ಜಮ್ಮುಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ದಾಳಿ ಬಗ್ಗೆ ಬಾಲಿವುಡ್ ನಟಿ ರಾಖಿ ಸಾವಂತ್ ಅವರು ಬೇಸರದ ಮಾತುಗಳನ್ನಾಡಿದ್ದಾರೆ.
ರಾಖಿ ಬುರ್ಖಾ ಧರಿಸಿ ಉಗ್ರರ ದಾಳಿ ಕುರಿತು ಮಾತನಾಡಿ, ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಾಲಿವುಡ್ ಚಿತ್ರರಂಗದ ಅನೇಕ ನಟ ನಟಿಯರು ಖಂಡಿಸಿದ್ದಾರೆ. ಇದೀಗ ರಾಖಿ ಸಾವಂತ್ ಅವರು ಹಿಂದೂ ಮತ್ತು ಮುಸ್ಲಿಂ ವಿಭಜನೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಮುಂದಿನ ರಜೆಯಲ್ಲಿ ಕಾಶ್ಮೀರಕ್ಕೆ ಭೇಟಿ ನೀಡೋದಾಗಿ ನಟಿ ಹೇಳಿದ್ದಾರೆ.
ನಾವೆಲ್ಲರೂ ಒಂದೇ. ನಮ್ಮ ಹಿಂದೂಸ್ಥಾನದಿಂದ ಮುಸ್ಲಿಮರನ್ನು ಯಾರೂ ಓಡಿಸಲು ಸಾಧ್ಯವಿಲ್ಲ. ಭಾರತವು ಹಿಂದೂಗಳಿಗೆ ಸೇರಿದಷ್ಟೇ ಮುಸ್ಲಿಮರಿಗೂ ಸೇರಿದೆ. ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಬೇಡಿ. ಸಣ್ಣ ಮಕ್ಕಳಂತೆ ವರ್ತಿಸಬೇಡಿ, ಪ್ರಬುದ್ಧರಾಗಿರಿ. ದೇವರ ಮೇಲೆ ಕರುಣೆ ತೋರಿ. ದೇವರು ಎಷ್ಟು ನೋವನ್ನು ಅನುಭವಿಸುತ್ತಿರಬಹುದು ಎಂದು ಊಹಿಸಿ. ಅವನು ನಮ್ಮೆಲ್ಲರನ್ನೂ ಸೃಷ್ಟಿಸಿದನು, ನಾವೆಲ್ಲರೂ ಅವನ ಮಕ್ಕಳು. ಆದರೆ ನಾವು ಪರಸ್ಪರ ಜಗಳವಾಡುತ್ತಿದ್ದೇವೆ. ಒಬ್ಬರನ್ನೊಬ್ಬರು ಕೊಲ್ಲುತ್ತಿದ್ದೇವೆ ಇದರಿಂದ ದೇವರಿಗೂ ಬೇಜಾರ್ ಆಗಿದೆ ಎಂದಿದ್ದಾರೆ.
ನಾನು ನನ್ನ ಮುಂದಿನ ರಜೆಯನ್ನು ಕಾಶ್ಮೀರದಲ್ಲಿ ಕಳೆಯುತ್ತೇನೆ. ಕಾಶ್ಮೀರಕ್ಕೆ ಹೋಗುವುದು ನಮ್ಮ ಹಕ್ಕು. ಕಾಶ್ಮೀರ ನಮ್ಮದು ಮತ್ತು ಕಾಶ್ಮೀರದ ಜನರು ನಮ್ಮ ಸಹೋದರ ಸಹೋದರಿಯರು. ನಾವು ಭಾರತದ ಹೊರಗೆ ಹೋಗುವುದಿಲ್ಲ. ನಾನು ಕಾಶ್ಮೀರಕ್ಕೆ ಹೋಗುತ್ತೇನೆ, ನೀವು ನನ್ನನ್ನು ಬೆಂಬಲಿಸುತ್ತೀರಾ? ಅಲ್ವಾ ಎಂದು ಅಭಿಮಾನಿಗಳಿಗೆ ನಟಿ ಪ್ರಶ್ನಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






