ದಸರಾ ಮತ್ತು ವಿಜಯದಶಮಿ ಎರಡೂ ಒಂದೆಯೇ.? ಅಥವಾ ಬೇರೆ ಬೇರೆಯೇ.?, ನೀವು ತಿಳಿಯಲೇಬೇಕು!

ಅಕ್ಟೋಬರ್ 9, 2024 - 07:09
 0  11
ದಸರಾ ಮತ್ತು ವಿಜಯದಶಮಿ ಎರಡೂ ಒಂದೆಯೇ.? ಅಥವಾ ಬೇರೆ ಬೇರೆಯೇ.?, ನೀವು ತಿಳಿಯಲೇಬೇಕು!

ಈಗಾಗಲೇ ಹಬ್ಬ  ಆರಂಭವಾಗಿದೆ. ವಿವಿಧ ಪ್ರದೇಶಗಳಲ್ಲಿ ಇದನ್ನ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಪಿತೃ ಪಕ್ಷ ಮುಗಿದ ನಂತರ ನವರಾತ್ರಿ ಪ್ರಾರಂಭವಾಗಿದೆ. ಇದು ದುರ್ಗಾ ದೇವಿಯನ್ನ  ಆರಾಧಿಸಲು ಮೀಸಲಿಡಲಾಗಿರುವ ದಿನಗಳಾಗಿದೆ. ಈ ಹಬ್ಬವನ್ನ ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಮಹಾ ದಶಮಿ,  ವಿಜಯ ದಶಮಿ  ಅಥವಾ ದಸರಾದೊಂದಿಗೆ  ಕೊನೆಗೊಳ್ಳುತ್ತದೆ. 

ದಸರಾ ಮತ್ತು ವಿಜಯದಶಮಿಯು ನವರಾತ್ರಿ ಹಬ್ಬದ ಮುಕ್ತಾಯವನ್ನು ಸೂಚಿಸುವ ದಿನವಾಗಿದೆ. ಶ್ರೀರಾಮನಿಂದ ರಾವಣ ಸಂಹಾರಕ್ಕೂ ಮುನ್ನವೇ ವಿಜಯದಶಮಿ ಹಬ್ಬವನ್ನು ಆಚರಿಸಲಾಗುತ್ತದೆ. ವಿಜಯದಶಮಿಯ ದಿನ ಮಾತ್ರ ರಾವಣ ದಹನ ನಡೆಯುತ್ತದೆ. ಶಾರದೀಯ ನವರಾತ್ರಿ ಮುಗಿದ ನಂತರ, ದುರ್ಗಾ ಮೂರ್ತಿಯ ನಿಮಜ್ಜನವೂ ಈ ದಿನದಂದು ನಡೆಯುತ್ತದೆ ಮತ್ತು ವಿಜಯೋತ್ಸವವನ್ನು ಆಚರಿಸಲಾಗುವುದು. 

ರಾಮ - ರಾವಣನ ನಡುವೆ ಯುದ್ಧ​

ರಂಭಾಸುರನ ಮಗ ಮಹಿಷಾಸುರನೊಂದಿಗೆ 9 ದಿನಗಳ ಕಾಲ ಹೋರಾಡಿ 10 ನೇ ದಿನದಂದು ತಾಯಿಯು ಅವನನ್ನು ಕೊಂದಳು ಎಂದು ಹೇಳಲಾಗುತ್ತದೆ. ಆದ್ದರಿಂದ ವಿಜಯದಶಮಿ ಹಬ್ಬವನ್ನು ಆಚರಿಸಲಾಗುತ್ತದೆ. ಮಹಿಷಾಸುರ ಒಬ್ಬ ಅಸುರ ಅಂದರೆ ರಾಕ್ಷಸ, ಅವನು ಸಾಮಾನ್ಯ ಜನರಿಗೆ, ದೇವರುಗಳಿಗೆ ಸಮಸ್ಯೆಗಳನ್ನು ಸೃಷ್ಟಿಸಿದ್ದರಿಂದ ಆತನನ್ನು ತಾಯಿ ಸಂಹಾರ ಮಾಡುತ್ತಾಳೆ. ಭಗವಾನ್ ಶ್ರೀರಾಮ ಮತ್ತು ರಾವಣನ ನಡುವಿನ ಯುದ್ಧವು ಹಲವು ದಿನಗಳವರೆಗೆ ಮುಂದುವರಿದರೆ, ಕೊನೆಯಲ್ಲಿ ಶ್ರೀರಾಮನು ದಶಮಿಯ ದಿನದಂದು ರಾವಣನನ್ನು ಕೊಂದನು.

ಅಶ್ವಿನಿ ಮಾಸದ ಶುಕ್ಲ ಪಕ್ಷದ ದಶಮಿಯಂದು, ಮಾತೆ ದುರ್ಗೆಯ ರೂಪದಲ್ಲಿ ಕಾತ್ಯಾಯಿನಿಯು ಮಹಿಷಾಸುರನನ್ನು ಕೊಂದಿದ್ದಳು. ಇದರ ನೆನಪಿಗಾಗಿ, ವಿಜಯದಶಮಿ ಅಂದರೆ ವಿಜಯದಶಮಿ ಹಬ್ಬವನ್ನು ಆಚರಿಸಲಾಗುತ್ತದೆ ಆದರೆ ಭಗವಾನ್ ಶ್ರೀರಾಮನು ದಶಾನನ ರಾವಣನನ್ನು ಕೂಡ ಕೊಲ್ಲುತ್ತಾನೆ. ಹಾಗಾಗಿ, ಈ ದಿನವನ್ನು ದಸರಾ ಎಂದು ಕರೆಯಲಾಯಿತು. ವಿಜಯ ದಶಮಿ ಎಂದರೆ, ಕೆಡುಕಿನ ಮೇಲೆ ಒಳಿತಿನ ವಿಜಯ ಎಂಬುದಾಗಿದೆ.

ಅಪರಾಜಿತ ದೇವಿ ಪೂಜೆ​

ವಿಜಯದಶಮಿ ದಿನದಂದು ಅಪರಾಜಿತಾ ದೇವಿಯ ಆರಾಧನೆ ವಿಶೇಷ ಮಹತ್ವವಿದೆ ಎಂದು ಉಲ್ಲೇಖಿಸಲಾಗಿದೆ. ಈ ಪೂಜೆಯನ್ನು ಹಗಲಿನಲ್ಲಿ ವಿಜಯ ಮುಹೂರ್ತದಲ್ಲಿ ಮಾಡಲಾಗುತ್ತದೆ. ಆದರೆ ದಸರಾ ದಿನದಂದು ರಾತ್ರಿಯಲ್ಲಿ ರಾವಣ ದಹನ ಮತ್ತು ಶಮಿ ಪೂಜೆಯನ್ನು ಮಾಡಲಾಗುತ್ತದೆ. ಶ್ರೀರಾಮನು ರಾವಣನನ್ನು ಕೊಲ್ಲುವ ಮೊದಲು ದೇವಿಯನ್ನು ಪೂಜಿಸಿದನು. ವಾಲ್ಮೀಕಿ ರಾಮಾಯಣದ ಪ್ರಕಾರ, ಭಗವಾನ್ ರಾಮನು ಅಶ್ವಿನಿ ಮಾಸದ ಪ್ರತಿಪಾದ ತಿಥಿಯಿಂದ ನವಮಿಯವರೆಗೆ ಋಷ್ಯಮುಖ ಪರ್ವತದ ಮೇಲೆ ಯುದ್ಧದಲ್ಲಿ ವಿಜಯಿಯಾಗಲು ಆದಿಶಕ್ತಿ ದುರ್ಗಾ ದೇವಿಯನ್ನು ಪೂಜಿಸುತ್ತಾನೆ. ಇದರೊಂದಿಗೆ ಅಪರಾಜಿತಾ ದೇವಿಯನ್ನೂ ಪೂಜಿಸುತ್ತಾನೆ. ಪೂಜೆಯ ಬಳಿ ರಾಮನು ರಾವಣನ ಸಂಹಾರಕ್ಕಾಗಿ ಲಂಕೆಗೆ ತೆರಳುತ್ತಾನೆ.

ಮಹಿಷಾಸುರ ಮತ್ತು ದುರ್ಗಾ ದೇವಿಯ ನಡುವಿನ ಯುದ್ಧ​

ವಿಜಯದಶಮಿಯ ಕಥೆಯು ದುರ್ಗಾ ಮತ್ತು ಮಹಿಷಾಸುರನ ನಡುವಿನ ಯುದ್ಧ ಮತ್ತು ರಾಕ್ಷಸನ ಹತ್ಯೆಗೆ ಸಂಬಂಧಿಸಿದೆ. ಆದರೆ ದಸರಾ ಕಥೆಯು ರಾಮ ರಾವಣನೊಂದಿಗಿನ ಯುದ್ಧ ಮತ್ತು ರಾಕ್ಷಸ ರಾಜ ರಾವಣನ ಹತ್ಯೆಗೆ ಸಂಬಂಧಿಸಿದೆ. ಈ ದಿನ ಇಬ್ಬರ ಕಥೆಗಳೂ ಕೇಳಿಬರುತ್ತವೆ. ಈ ಎರಡೂ ಹಬ್ಬಗಳು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಆಚರಿಸುತ್ತವ ಹಬ್ಬವಾಗಿದೆ.

ಮಹಾಭಾರತಕ್ಕೂ ವಿಜಯದಶಮಿಗೂ ಸಂಬಂಧ

ವಿಜಯದಶಮಿ ಕೇವಲ ರಾಮ ಮತ್ತು ದುರ್ಗಾ ದೇವಿಯೊಂದಿಗೆ ಮಾತ್ರ ಸಂಬಂಧವನ್ನು ಹೊಂದಿರದೆ ಮಹಾಭಾರತದೊಂದಿಗೂ ಸಂಬಂಧವನ್ನು ಹೊಂದಿದೆ. ಈ ದಿನದಂದು ಪಾಂಡವ ಸಹೋದರ ಅರ್ಜುನನು ಕೌರವ ಸೈನ್ಯದ ಲಕ್ಷಗಟ್ಟಲೆ ಸೈನಿಕರನ್ನು ಕೊಂದು ಕೌರವರನ್ನು ಸೋಲಿಸಿದನು ಎಂದು ಹೇಳಲಾಗುತ್ತದೆ. ಇದು ಅಧರ್ಮದ ಮೇಲೆ ಧರ್ಮದ ವಿಜಯವಾಗಿತ್ತು

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow