ದಸರಾ ವಿವಾದ: ಬಾನು ಮುಷ್ತಾಕ್ ನಿಮಗೆ ಆತ್ಮಸಾಕ್ಷಿ ಇಲ್ವ ನೀವು ಹೇಗೆ ಒಪ್ಪಿಕೊಂಡ್ರಿ - ಪ್ರತಾಪ್ ಸಿಂಹ
ಹುಬ್ಬಳ್ಳಿ: ಬಾನು ಮುಷ್ತಾಕ್ ನಿಮಗೆ ಆತ್ಮಸಾಕ್ಷಿ ಇಲ್ವ ನೀವು ಹೇಗೆ ಒಪ್ಪಿಕೊಂಡ್ರಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ರನ್ನು ಆಹ್ವಾನ ನೀಡಲಾಗಿದೆ. ಅವರ ಮೇಲೆ ಗೌರವ ಇದೆ . ಆದರೆ ಹಿಂದೂ ಧಾರ್ಮಿಕ ಶ್ರೇಷ್ಠ ಭಾವನೆ ಮುಖಟವಾಗಿರುವ ದಸರಾ ಉದ್ಘಾಟನೆ ಅವರ ಕೈಯಲ್ಲಿ ಅವಶ್ಯಕತೆ ಇತ್ತಾ? ಎಂದು ಪ್ರಶ್ನಿಸಿದರು. ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಬಾನು ಮುಷ್ತಾಕ್ ನಿಮಗೆ ಆತ್ಮಸಾಕ್ಷಿ ಇಲ್ವ ನೀವು ಹೇಗೆ ಒಪ್ಪಿಕೊಂಡ್ರಿ.
ಬಾನು ಮೇಡಂ ನಮ್ಮ ಧರ್ಮ ಹಬ್ಬದ ಉದ್ಘಾಟನೆಗೆ ನಿಮ್ಮ ಮನಸ್ಸಾದ್ರೂ ಹೇಗೆ ಒಪ್ಪುತ್ತೆ. ವಿವಿಧತೆಯಲ್ಲಿ ಏಕತೆ ಬರೀ ಹಿಂದೂಗಳಲ್ಲಿ ಮಾತ್ರ. ಆದರೆ ಮುಸ್ಲಿಂ, ಕ್ರಿಶ್ಚಿಯನ್ ರನಲ್ಲಿ ಇದು ಇಲ್ಲಾ. ನಾನು ದೇವರನ್ನು ದೇವಿಯಲ್ಲಿ ಕಾಣುತ್ತೆವೆ. ನಿಮ್ಮ ಧರ್ಮದಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ ಬಳಸಿಕೊಳ್ಳತ್ತಿರಿ. ನನ್ನ ಕರ್ವಟ್ ಮಾಡದೆ, ಸುನ್ನತ್ ಮಾಡಿಕೊಳ್ಳದೆ ಬರೀ ಪ್ರವಾಸಿಗನಾಗಿ ಮೆಕ್ಕಾಕ್ಕೆ ಕಳುಹಿಸಿ ಕೊಡತ್ತಿರಾ?.ಮತ್ತೆ ನೀವು ಹೇಗೆ ನಮ್ಮ ಸಂಸ್ಕೃತ ಪಾಲಿಸದೆ ಉದ್ಘಾಟನೆಗೆ ಬರ್ತಿರಾ ಎಂದು ಪ್ರಶ್ನಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?