ದೇವರ ಪೂಜೆ ಮಾಡುವ ಸರಿಯಾದ ವಿಧಾನ ತಿಳಿದಿದ್ದೀರಾ!? ಮೊದಲು ಹೀಗೆ ಮಾಡಿ!

ಹಿಂದೂ ಧರ್ಮದಲ್ಲಿ ಪೂಜೆಗೆ ವಿಶೇಷ ಮಹತ್ವವಿದೆ. ವಾರದ ಪ್ರತಿ ದಿನವೂ ಯಾವುದಾದರೊಂದು ದೇವರನ್ನು ವಿಶೇಷ ವಿಧಿ ವಿಧಾನಗಳ ಮೂಲಕ ಪೂಜಿಸಲಾಗುತ್ತದೆ. ಆದ್ದರಿಂದ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪ್ರತೀ ಮನೆಯಲ್ಲೂ ಪೂಜೆ ಮಾಡುವ ಪದ್ಧತಿಯಿದೆ. ಯಾವುದೇ ದೇವತೆಯನ್ನು ಅಥವಾ ದೇವರನ್ನು ಪೂಜಿಸುವುದರಿಂದ, ಕುಟುಂಬದಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ ಹಾಗೂ ಜೀವನದಲ್ಲಿ ಐಶ್ವರ್ಯವೂ ಬರುತ್ತದೆ. ದೇವರ ಆಶೀರ್ವಾದ ಪಡೆಯಲು ಎಲ್ಲಾ ಭಕ್ತರು ವಿಧಿವಿಧಾನದಂತೆ ಪೂಜೆ ಸಲ್ಲಿಸುತ್ತಾರೆ.
ನಿತ್ಯ ಪೂಜೆ ಮಾಡುವುದರಿಂದ ಮಾನಸಿಕ ಶಾಂತಿ ಪ್ರಾಪ್ತವಾಗುವುದು. ದೇವರ ಆಶೀರ್ವಾದ ಎಲ್ಲಿರುತ್ತದೆಯೋ ಅಲ್ಲಿ ದುಃಖ, ನೋವು ಮತ್ತು ಸಂಕಟಗಳು ದೂರ ಉಳಿಯುತ್ತದೆ. ಇದು ಮನೆಯಲ್ಲಿ ಸಕಾರಾತ್ಮಕತೆ ನೆಲೆಯಾಗುತ್ತದೆ. ಇದರಿಂದಾಗಿ ಜನರು ಸಂತೋಷದ ಜೀವನವನ್ನು ನಡೆಸುತ್ತಾರೆ. ಇದರಿಂದಾಗಿ ಅವರು ಯಶಸ್ಸನ್ನೂ ಸಾಧಿಸುತ್ತಾರೆ. ಪೂಜೆಗೆ ಸಂಬಂಧಿಸಿದಂತೆ ವಿಶೇಷ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಆ ನಿಯಮಗಳು ಯಾವುವು ಎಂಬುದು ನಿಮಗೆ ತಿಳಿದಿದೆಯೇ.?
ದೇವರಿಗೆ ಪೂಜೆಯನ್ನು ಮಾಡುವ ಸಮಯದಲ್ಲಿ, ದೇವರಿಗೆ ಧೂಪ ಮತ್ತು ದೀಪಗಳನ್ನು ಅರ್ಪಿಸುವುದರ ಜೊತೆಗೆ, ಖಂಡಿತವಾಗಿಯೂ ಹೂವುಗಳನ್ನು ಅರ್ಪಿಸಬೇಕು. ಈ ರೀತಿ ನೀವು ದೇವರನ್ನು ಪೂಜಿಸುವುದರಿಂದ ದೇವರು ಮತ್ತು ದೇವತೆ ಸಂತುಷ್ಟರಾಗುತ್ತಾರೆ. ಆದರೆ ಪೂಜೆಯ ಸಮಯದಲ್ಲಿ ಹಾಳಾದ ಅಥವಾ ಒಣಗಿದ ಅಥವಾ ಒಮ್ಮೆ ಪೂಜೆಯಲ್ಲಿ ಬಳಸಿದ ಹೂವನ್ನು ಮತ್ತೆ ಪುನಃ ಪೂಜೆಯಲ್ಲಿ ದೇವರಿಗೆ ಅರ್ಪಿಸಬಾರದು.
ದೇವರ ಪೂಜೆಯನ್ನು ಮಾಡುವ ಸಮಯದಲ್ಲಿ, ಕಲಶ ಅಥವಾ ನೀರಿನ ಮಡಕೆಯನ್ನು ಈಶಾನ್ಯ ಮೂಲೆಯಲ್ಲಿ ಮಾತ್ರ ಇಡಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಇದರೊಂದಿಗೆ ದೇವರ ಪೂಜೆಯನ್ನು ಮಾಡುವಾಗ ದೀಪ ಮತ್ತು ಕಲಶವನ್ನು ಒಟ್ಟಿಗೆ ಇಡಬಾರದು. ಇವೆರೆಡನ್ನು ಪರಸ್ಪರ ಒಟ್ಟಿಗೆ ಇಡುವುದರಿಂದ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳು ಸೃಷ್ಟಿಯಾಗುವುದು.
ಪೂಜೆಯನ್ನು ಮಾಡುವುದು ಶುದ್ಧತೆಯ ಕ್ರಿಯೆಯಾಗಿದೆ. ಅಶುದ್ಧ ಸ್ಥಿತಿಯಲ್ಲಿದ್ದಾಗ ತಪ್ಪಿಯೂ ದೇವರ ಪೂಜೆ ಮಾಡಬಾರದು. ಇದರಿಂದ ದೇವರು ನಿಮ್ಮ ಮೇಲೆ ಕೋಪಗೊಳ್ಳುತ್ತಾನೆ ಮತ್ತು ಪೂಜೆಯು ನಿಮಗೆ ಯಾವುದೇ ಫಲಿತಾಂಶವನ್ನು ನೀಡದಂತೆ ಮಾಡುತ್ತಾನೆ. ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿದ ನಂತರವೇ ಪೂಜೆ ಮಾಡಬೇಕು ಎಂಬುದಕ್ಕೆ ಇದೂ ಒಂದು ಕಾರಣವಾಗಿದೆ.
ಮುಂಜಾನೆ ಮತ್ತು ಸಂಜೆಯ ಸಮಯವನ್ನು ದೇವರ ಪೂಜೆ ಮಾಡವುದಕ್ಕೆ ಅತ್ಯಂತ ಪ್ರಶಸ್ಥವಾದ ಸಮಯವೆಂದು ಪರಿಗಣಿಸಲಾಗಿದೆ. ಆದರೆ, ನೀವು ದೇವರ ಪೂಜೆಯನ್ನು ಮಧ್ಯಾಹ್ನದ ಸಮಯದಲ್ಲಿ ಮಾಡಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ನೀವು ದೇವರ ಪೂಜೆಯನ್ನು ಮಾಡುವುದಾದರೆ ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ಮಾತ್ರ ಮಾಡಬೇಕು.
ನೀವು ದೇವರ ಪೂಜೆಯನ್ನು ಮಾಡಲು ಕುಳಿತುಕೊಂಡಿದ್ದರೆ, ನಿಮ್ಮ ಸಂಪೂರ್ಣ ಗಮನವನ್ನು ದೇವರ ಮೇಲೆ ಕೇಂದ್ರೀಕರಿಸಬೇಕು. ಪೂಜೆಯ ವೇಳೆ ನೀವು ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯಾದ ಕೆಟ್ಟ ಆಲೋಚನೆಗಳನ್ನು ಇಟ್ಟುಕೊಳ್ಳದಿರಿ ಮತ್ತು ದೇವರ ಪೂಜೆಯನ್ನು ಮಾಡುವಾಗ ಮಂತ್ರಗಳನ್ನು ತಪ್ಪದೇ ಪಠಿಸಬೇಕು ಎಂಬುದನ್ನು ಮರೆಯದಿರಿ.
ನೀವು ಪೂಜೆಗೆ ಕುಳಿತಿದ್ದರೆ ಆಸನವಿಲ್ಲದೆ ಕುಳಿತುಕೊಳ್ಳಬಾರದು ಎಂಬುದನ್ನು ನೆನಪಿನಲ್ಲಿಡಿ. ನೇರವಾಗಿ ನೆಲದ ಮೇಲೆ ಕುಳಿತುಕೊಳ್ಳುವುದರಿಂದ ಪೂಜೆಯ ಫಲ ಸಿಗುವುದಿಲ್ಲ. ದೇವರ ಪೂಜೆಯನ್ನು ಮಾಡುವಾಗ ಆಸನವನ್ನಿಟ್ಟು ಅದರ ಮೇಲೆ ಕುಳಿತು ದೇವರ ಪೂಜೆಯನ್ನು ಮಾಡಿ.
ನಿಮ್ಮ ಪ್ರತಿಕ್ರಿಯೆ ಏನು?






