ನಾನು ಕುರಿ ಕಾಯೋದು ಬಿಡಲ್ಲ: ಯಶಸ್ಸು ಬಳಿಕವೂ ಹನುಮಂತನ ಮಾತಿಗೆ ಫ್ಯಾನ್ಸ್ ಫಿದಾ!

ಜನವರಿ 31, 2025 - 20:04
 0  15
ನಾನು ಕುರಿ ಕಾಯೋದು ಬಿಡಲ್ಲ: ಯಶಸ್ಸು ಬಳಿಕವೂ ಹನುಮಂತನ ಮಾತಿಗೆ ಫ್ಯಾನ್ಸ್ ಫಿದಾ!

ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ದೊಡ್ಡ ಯಶಸ್ಸು ಗಳಿಸಿದ್ದು, ಬಿಗ್‌ಬಾಸ್ ಕನ್ನಡ ಕರ್ನಾಟಕ ಮಾತ್ರವಲ್ಲ ಇಡೀ ಭಾರತದ ಗಮನ ಸೆಳೆಯುತ್ತಿದೆ. ಯಾಕಂದ್ರೆ ಬಿಗ್‌ಬಾಸ್ ಕನ್ನಡಕ್ಕೆ ಕರ್ನಾಟಕ ಮಾತ್ರವಲ್ಲ ಇಡೀ ಭಾರತದಲ್ಲೇ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ ಅನ್ನೋದು ಸುದೀಪ್ ಅವರ ಅಭಿಮಾನಿಗಳು ಹೇಳುವ ಮಾತು. ಇಂತಹ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮಕ್ಕೆ ಬಂದ ಹನುಮಂತ ದೊಡ್ಡ ಸದ್ದು ಮಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. 

ಇನ್ನೂ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಲಮಾಣಿ ಅವರು, 100 ದಿನಗಳ ಬಳಿಕ ಅವರು ಹುಟ್ಟೂರು ತಲುಪಿದ್ದಾರೆ. ಬಿಗ್ ಬಾಸ್​ಗೆ ಹೋಗುವಾಗ ಆ ಶೋನಲ್ಲಿ ಹೇಗೆ ಇರಬೇಕೇನೋ ಎನ್ನುವ ಭಯ ಅವರಿಗೆ ಕಾಡುತ್ತಿತ್ತು. ಈಗ ಕಪ್ ಗೆದ್ದು ಖುಷಿಯಿಂದ ಹಾವೇರಿಯ ಚಿಲ್ಲೂರಬಡ್ನಿಗೆ ತಲುಪಿದ್ದಾರೆ. ಅವರು ಅಲ್ಲಿ ದೊಡ್ಡ ರೋಡ್​ಶೋ ಮಾಡಿದ್ದಾರೆ. ಈಗ ಅವರು ತಮ್ಮ ಕಾಯಕ ಮುಂದುವರಿಸುವ ಘೋಷಣೆ ಮಾಡಿದ್ದಾರೆ.

ಹನುಮಂತ ಅವರು ಕುರಿ ಕಾಯುವ ಕಾಯಕ ಮಾಡಿಕೊಂಡು ಬಂದವರು. ಚಿಕ್ಕ ವಯಸ್ಸಿನಿಂದ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ಕುರಿ ಕಾಯುತ್ತಾ ಹಾಡು ಹೇಳುತ್ತಿದ್ದರು. ಆ ಬಳಿಕ ಜೀ ಕನ್ನಡ ಈ ಪ್ರತಿಭೆಯನ್ನು ಗುರುತಿಸಿ ‘ಸರಿಗಮಪ’ ಶೋನಲ್ಲಿ ಅವಕಾಶ ಕೊಟ್ಟಿತು. ಅಲ್ಲಿಂದ ಅವರ ಬದುಕು ಬದಲಾಯಿತು. ಈ ಶೋಗಳನ್ನು ಮಾಡಿ ಬಂದ ಹೊರತಾಗಿಯೂ ಊರಲ್ಲೇ ಇದ್ದ ಅವರು ಕುರಿ ಕಾಯುತ್ತಿದ್ದರು.

ಈಗ ಹನುಮಂತ ಅವರು ಬಿಗ್ ಬಾಸ್ ಗೆದ್ದು ಬಂದಿದ್ದಾರೆ. ಹುಟ್ಟೂರಿಗೆ ಅವರು ಮರಳಿದ್ದು ಕುರಿ ಕಾಯುವ ಕೆಲಸ ಮುಂದುವರಿಸೋದಾಗಿ ಹೇಳಿದ್ದಾರೆ. ಸದ್ಯ ಹನುಮಂತ ಅವರು ‘ಬಾಯ್ಸ್ vs ಗರ್ಲ್ಸ್’ ಶೋನಲ್ಲಿ ಇದ್ದಾರೆ. ಇದಕ್ಕಾಗಿ ಅವರು ಆಗಾಗ ಬೆಂಗಳೂರಿಗೆ ಬರಬೇಕಾಗುತ್ತದೆ. ಇದರ ಜೊತೆಗೆ ಹಲವು ಕಾರ್ಯಕ್ರಮಗಳಿಗೆ ಅವರಿಗೆ ಆಹ್ವಾನ ಬರುತ್ತದೆ. ಇವುಗಳ ಮಧ್ಯೆ ಅವರು ಕುರಿ ಕಾಯಬೇಕು ಎಂದರೆ ಸ್ವಲ್ಪ ಕಷ್ಟವೇ.

ನಾನು ಕುರಿ ಕಾಯೋದನ್ನು ಮುಂದುವರಿಸುತ್ತೇನೆ. ಸದ್ಯ ನಮ್ಮ ಅಣ್ಣ ಇದ್ದಾರೆ. ನನಗೆ ಅದು ಇದು ಕಾರ್ಯಕ್ರಮವೇ ಆಗಿ ಬಿಡುತ್ತದೆ. ಸಮಯ ಸಿಕ್ಕಾಗ ನಾನು ಕುರಿ ಕಾಯುತ್ತೇನೆ’ ಎಂದು ಹನುಮಂತ ಅವರು ಹೇಳಿಕೊಂಡಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇಷ್ಟು ದೊಡ್ಡ ಹಂತಕ್ಕೆ ಬೆಳೆದ ಬಳಿಕವೂ ಅವರು ತಮ್ಮ ಕಾಯಕ ಮರೆತಿಲ್ಲ ಎಂದು ಅನೇಕರು ಖುಷಿ ಹೊರ ಹಾಕಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow