ನೀವು ಕೂಡ ಕಾಲಿಗೆ ಕಪ್ಪುದಾರ ಕಡ್ತೀರಾ!? ಹಾಗಿದ್ರೆ ಈ ರೂಲ್ಸ್ ಬ್ರೇಕ್ ಮಾಡ್ಬೇಡಿ!

ಮಾರ್ಚ್ 18, 2025 - 07:04
 0  15
ನೀವು ಕೂಡ ಕಾಲಿಗೆ ಕಪ್ಪುದಾರ ಕಡ್ತೀರಾ!? ಹಾಗಿದ್ರೆ ಈ ರೂಲ್ಸ್ ಬ್ರೇಕ್ ಮಾಡ್ಬೇಡಿ!

ಜನರು ಕೈ ಮತ್ತು ಕಾಲುಗಳಿಗೆ ಕಪ್ಪು ದಾರ ಕಟ್ಟುವುದನ್ನು ನೀವು ಆಗಾಗ್ಗೆ ನೋಡಿರಬಹುದು. ನಂಬಿಕೆಗಳ ಪ್ರಕಾರ, ಕಪ್ಪು ದಾರ ಧರಿಸುವುದು ದುಷ್ಟ ಕಣ್ಣು ಮತ್ತು ದುಷ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತದೆ, ಆದರೆ ಕಪ್ಪು ದಾರ ಧರಿಸುವುದು ಪ್ರತಿಯೊಬ್ಬ ವ್ಯಕ್ತಿಗೆ ಶುಭವಲ್ಲ ಎಂದು ಜ್ಯೋತಿಷ್ಯ ಹೇಳುತ್ತದೆ. ಅನೇಕ ಬಾರಿ ತಿಳಿಯದೆ ಕಪ್ಪು ದಾರ ಧರಿಸುವುದು ಕೆಟ್ಟ ಪರಿಣಾಮಗಳಿಗೆ ಕಾರಣವಾಗಬಹುದು. ಆದ್ದರಿಂದ, ಕಪ್ಪು ದಾರವನ್ನು ಧರಿಸುವ ಮೊದಲು ಅದರ ಬಗ್ಗೆ ಮೊದಲು ಚೆನ್ನಾಗಿ ತಿಳಿದುಕೊಳ್ಳುವುದು ಒಳಿತು. 

ಅನೇಕ ಜನರು ತಮ್ಮ ಕೈ ಅಥವಾ ಕಾಲುಗಳ ಮೇಲೆ ಕಪ್ಪು ದಾರವನ್ನು ಕಟ್ಟುವ ಅಭ್ಯಾಸವನ್ನ ಹೊಂದಿದ್ದಾರೆ. ಕೆಲವರು ಇದು ಅಂದವನ್ನ ಹೆಚ್ಚಿಸುತ್ತದೆ ಎನ್ನುವ ಕಾರಣಕ್ಕೆ ಹವ್ಯಾಸವಾಗಿ ಧರಿಸುತ್ತಾರೆ ಆದರೆ ಕೆಲವರು ಕೆಟ್ಟ ಕಣ್ಣಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇದನ್ನು ಧರಿಸುತ್ತಾರೆ. ಆದರೆ ಜ್ಯೋತಿಷಿಗಳ ಪ್ರಕಾರ, ಕಪ್ಪು ದಾರವನ್ನು ಧರಿಸುವುದರಿಂದ ಎಲ್ಲಾ ಜನರು ಒಂದೇ ರೀತಿಯ ಫಲಿತಾಂಶಗಳನ್ನು ಪಡೆಯುವುದಿಲ್ಲ.

ಇಂದಿನ ಯುವ ಪೀಳಿಗೆಯ ಹೆಚ್ಚಿನವರು ಕಪ್ಪು ದಾರವನ್ನು ಧರಿಸುವುದಿಲ್ಲವಾದರೂ, 90 ರ ದಶಕದಲ್ಲಿ ತೋಳು, ಕಾಲು ಅಥವಾ ಸೊಂಟದ ಮೇಲೆ ಕಪ್ಪು ದಾರವನ್ನು ಧರಿಸುವುದು ವಾಡಿಕೆಯಾಗಿತ್ತು. ಆದರೆ ಈ ಕಪ್ಪು ದಾರವನ್ನು ಧರಿಸಲು ಕೆಲವು ನಿಯಮಗಳಿವೆ. ಮಂಗಳವಾರ ಮತ್ತು ಶನಿವಾರ ಕಪ್ಪು ದಾರ ಕಟ್ಟಲು ಶುಭ ದಿನ ಎನ್ನಲಾಗುತ್ತದೆ. ಏಕೆಂದರೆ ಈ ಎರಡು ದಿನಗಳನ್ನು ಹನುಮಂತನಿಗೆ ಅರ್ಪಿಸಿದ ದಿನಗಳು ಎಂದು ಪರಿಗಣಿಸುತ್ತೇವೆ

ಕಾಲಿಗೆ ಕಪ್ಪು ದಾರವನ್ನು ಕಟ್ಟುವುದು ಹೆಚ್ಚು ಪ್ರಯೋಜನಕಾರಿ ಎನ್ನಲಾಗುತ್ತದೆ. ಅದರಲ್ಲೂ ಬೆರಳುಗಳಿಗೆ ಕಟ್ಟುವುದು ಸಹ ಶುಭಫಲಗಳನ್ನ ನೀಡುತ್ತದೆ. ಇನ್ನು ಹೆಬ್ಬೆರಳಿನಲ್ಲಿ ಕಪ್ಪು ದಾರವನ್ನು ಧರಿಸುವುದರಿಂದ ನಕಾರಾತ್ಮಕ ಶಕ್ತಿಯನ್ನು ನಿಮ್ಮಿಂದ ದೂರವಿರುತ್ತದೆ ಎನ್ನುವ ನಂಬಿಕೆ ಇದೆ. ಕಪ್ಪು ದಾರವನ್ನು ಧರಿಸುವುದರ ಮೂಲಕ ನೀವು ಕೆಟ್ಟ ಕಣ್ಣಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಕಾಲ್ಬೆರಳಿಗೆ ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಕಪ್ಪು ದಾರವನ್ನ ಕಟ್ಟುವುದರಿಂದ ಸಕಾರಾತ್ಮಕ ಫಲಿತಾಂಶಗಳನ್ನು ಸಹ ಪಡೆಯುತ್ತೀರಿ ಎನ್ನುವ ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ಮತ್ತು ವೃಶ್ಚಿಕ ರಾಶಿಯ ಜನರು ಕಪ್ಪು ದಾರವನ್ನು ಕಟ್ಟಬಾರದು. ಈ ಎರಡೂ ರಾಶಿಗಳ ಅಧಿಪತಿ ಮಂಗಳ. ಮಂಗಳನ ಬಣ್ಣ ಕೆಂಪು. ಹಾಗೆಯೇ, ಕಪ್ಪು ಶನಿಯ ಬಣ್ಣ. ಶನಿ ಹಾಗೂ ಮಂಗಳನ ನಡುವೆ ಯಾವುದೇ ಉತ್ತಮ ಸಂಬಂಧ ಇಲ್ಲ. ಹಾಗಾಗಿ ಈ ರಾಶಿಯವರು ಕಪ್ಪು ದಾರವನ್ನ ಧರಿಸಿದರೆ ಕೆಟ್ಟ ಫಲಗಳನ್ನ ಅನುಭವಿಸಬೇಕಾಗುತ್ತದೆ.

ಕೇವಲ ಮೇಷ ರಾಶಿ ಹಾಗೂ ವೃಶ್ಚಿಕ ರಾಶಿಯವರು ಕೆಂಪು ಬಣ್ಣದ ದಾರಗಳನ್ನ ಧರಿಸಬೇಕು. ಇಲ್ಲದಿದ್ದರೆ ಮಂಗಳನ ದುಷ್ಪರಿಣಾಮಗಳನ್ನು ಈ ಎರಡೂ ರಾಶಿಗಳ ಜನರು ಎದುರಿಸಬೇಕಾಗುತ್ತದೆ. ಕೆಂಪು ಬಣ್ಣದ ದಾರವನ್ನು ಧರಿಸಿದರೆ ಮಂಗಳನ ಆಶೀರ್ವಾದ ಅವರ ಮೇಲೆ ಇರುತ್ತದೆ ಎನ್ನಲಾಗುತ್ತದೆ

ಇನ್ನು ಮಂಗಳವಾರ ಮತ್ತು ಶನಿವಾರ ಕಪ್ಪು ದಾರ ಕಟ್ಟಿಕೊಳ್ಳಲು ಸಹ ಕೆಲ ನಿಯಮಗಳಿದೆ. ಮುಖ್ಯವಾಗಿ ಈ ಎರಡು ದಿನಗಳಲ್ಲಿ ಯಾವುದಾದರೂ ಒಂದು ಕಪ್ಪು ದಾರವನ್ನು ತೆಗೆದುಕೊಂಡು ಅದರಲ್ಲಿ ಏಳು ಗಂಟುಗಳನ್ನು ಕಟ್ಟಿಕೊಳ್ಳಿ. ಇದನ್ನು ಗಂಗಾಜಲದಲ್ಲಿ ಅದ್ದಿ. ನಂತರ ಆ ಎಳೆಯನ್ನು ಹನುಮಂತಯ್ಯನವರ ಮುಂದೆ ಇಡಿ. ನಂತರ ದೀಪವನ್ನು ಹಚ್ಚಿ ಹನುಮಾನ್ ಚಾಲೀಸವನ್ನು ಪಠಿಸಿ. ಹನುಮಾನ್ ಚಾಲೀಸಾವನ್ನು ಪಠಿಸಿದ ನಂತರ, ಕೈಗೆ ಕಪ್ಪು ದಾರವನ್ನು ಎರಡು, ನಾಲ್ಕು ಅಥವಾ ಆರು ವೃತ್ತದಲ್ಲಿ ಕಟ್ಟುವುದು ಶುಭ ಎನ್ನಲಾಗುತ್ತದೆ. ನಿಮ್ಮ ಕೈಯಲ್ಲಿ ಕಪ್ಪು ದಾರವನ್ನು ಧರಿಸಿದರೆ ಅದನ್ನು ನಿಮ್ಮ ಕಾಲಿಗೆ ಕಟ್ಟುವ ಅಗತ್ಯವಿಲ್ಲ. ನೀವು ಕಪ್ಪು ದಾರವನ್ನು ಕಟ್ಟಿರುವ ಕೈಗೆ ಬೇರೆ ಯಾವುದೇ ಬಣ್ಣದ ದಾರವನ್ನು ಕಟ್ಟಬಾರದು ನೀವು ಈಗಾಗಲೇ ಬೇರೆ ಬಣ್ಣದ ದಾರ ಕಟ್ಟಿದ್ದರೆ, ನಿಮ್ಮ ಕೈಯಲ್ಲಿ ಕಪ್ಪು ದಾರವನ್ನು ಧರಿಸಬಾರದು ಎನ್ನುವ ನಿಯಮಿದೆ.

ಇನ್ನು ಕಪ್ಪು ದಾರವನ್ನ ಈ ನಿಯಮಗಳ ಪ್ರಕಾರ ಕಟ್ಟಿಕೊಂಡರೆ ಯಾವುದೇ ರೀತಿಯ ದುಷ್ಟ ಕಣ್ಣುಗಳು ಹಾನಿ ಮಾಡುವುದಿಲ್ಲ ಎನ್ನಲಾಗುತ್ತದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow