ಪಕ್ಷ ನನ್ನ ಸ್ವತ್ತೂ ಅಲ್ಲ, ಅವರ ಸ್ವತ್ತೂ ಅಲ್ಲ: ಸುಧಾಕರ್ ಗೆ ವಿಜಯೇಂದ್ರ ತಿರುಗೇಟು!

ಬೆಂಗಳೂರು:- ಬಿವೈ ವಿಜಯೇಂದ್ರ ನನ್ನ ಮುಗಿಸಲು ಹೊರಟಿದ್ದಾರೆ ಎಂಬ ಸುಧಾಕರ್ ಹೇಳಿಕೆಗೆ BY ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ. ನನ್ನ ಮೇಲೆ ತಪ್ಪು ಹೊರಿಸೋದು ಬೇಡ. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ, ಶೂನ್ಯ. ನನ್ನ ಜಿಲ್ಲೆಗೆ ನಾನು ಅಭಿಪ್ರಾಯ ಕೊಡಬಹುದೇ ಹೊರತು, ಬೇರೆ ಜಿಲ್ಲೆಗೆ ಅಭಿಪ್ರಾಯ ಕೊಡುವ ಅಧಿಕಾರ ನನಗೆ ಇಲ್ಲ. ಸುಧಾಕರ್ ಅವರಿಗೆ ಇದನ್ನು ಹೇಳಲು ಇಷ್ಟಪಡ್ತೇನೆ. ವಿಜಯೇಂದ್ರ ನನ್ನನ್ನು ರಾಜಕೀಯ ಸಮಾಧಿ ಮಾಡಲು ಹೊರಟಿದ್ದಾರೆ ಅಂತ ಸುಧಾಕರ್ ಹೇಳಿದ್ದಾರೆ. ಸುಧಾಕರ್ ಅವರು ಹಿರಿಯರು, ಹೀಗೆಲ್ಲ ಮಾತಾಡಬಾರದು ಎಂದು ಮನವಿ ಮಾಡಿದರು.
ಸುಧಾಕರ್ ಆಕ್ರೋಶದ ಮಾತಾಡಿದ್ದಾರೆ. ಅವರು ಹಾಗೆಲ್ಲ ಮಾತಾಡೋದು ಅವರಿಗೂ ಗೌರವ ಕೊಡಲ್ಲ, ಪಕ್ಷಕ್ಕೂ ಗೌರವ ಸಿಗಲ್ಲ. ಸುಧಾಕರ್ ಆ ರೀತಿ ಮಾತಾಡಬಾರದು. ಪಕ್ಷ ನನ್ನ ಸ್ವತ್ತೂ ಅಲ್ಲ, ಅವರ ಸ್ವತ್ತೂ ಅಲ್ಲ. ಮುಂದಿನ ಸಿಎಂ ಆಗಲು ನಾನು ಪಕ್ಷ ಸಂಘಟನೆ ಮಾಡ್ತಿಲ್ಲ. ಸುಧಾಕರ್ ಹಾಗೆಲ್ಲ ಮಾತಾಡಬಾರದು. ಸುಧಾಕರ್ ಜಿಲ್ಲೆಯಲ್ಲಿ ಗೆದ್ದಿರೋರೂ ಒಬ್ಬ ಕಾರ್ಯಕರ್ತರೇ, ಅವರು ಸುಧಾಕರ್ ಸಂಬAಧಿಯೂ ಹೌದು. ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಆಯ್ಕೆಯಲ್ಲಿ ನನ್ನ ಪಾತ್ರ ಇಲ್ಲ. ಯಾವ ಜಿಲ್ಲೆಯಲ್ಲೂ ನನ್ನ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






