Crime News: ಕೇವಲ ವಿಮೆ ಹಣಕ್ಕಾಗಿ ತಂಗಿಯನ್ನೇ ಉಸಿರುಗಟ್ಟಿಸಿ ಕೊಂದ ಪಾಪಿ ಅಣ್ಣ.!

ಆಂಧ್ರಪ್ರದೇಶ: ಹಲವು ಸಲ ಸಹೋದರರು ಸೇರಿ ಸಹೋದರಿಯನ್ನು ಸಾಯಿಸುವಂತಹ ಅಪರಾಧ ಸುದ್ದಿಗಳಲ್ಲಿ ಕೊಲೆಯ ಕಾರಣ ಅಂತಾರ್ಜಾತಿ ವಿವಾಹ ಆಗಿರುತ್ತದೆ. ಇಂತಹ ಪ್ರಕರಣಗಳು ಬೇಧಿಸಲ್ಪಟ್ಟಾಗ ಅಲ್ಲಿ ಮರ್ಯಾದಾ ಹತ್ಯೆಯೇ ಕಾರಣವಾಗಿರುತ್ತವೆ.
ಆದರೆ ಆಂಧ್ರಪ್ರದೇಶದಲ್ಲಿ ನಡೆದಿರೋ ಒಂದು ಕೊಲೆ ಪ್ರಕರಣ ಬೆಚ್ಚಿಬೀಳಿಸುತ್ತೆ. ಹೌದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು 1 ಕೋಟಿ ರೂ. ವಿಮಾ ಪಾವತಿಯನ್ನು ವಂಚಿಸಲು ತನ್ನ ವಿಚ್ಛೇದಿತ ಮತ್ತು ಮಕ್ಕಳಿಲ್ಲದ ತಂಗಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.
2024ರ ಫೆಬ್ರವರಿ 2ರಂದು ಪೊಡಿಲಿಯ ಪೆಟ್ರೋಲ್ ಬಂಕ್ ಬಳಿ ನಡೆದ ಈ ಅಪರಾಧಕ್ಕಾಗಿ ಆರೋಪಿಯಾಗಿರುವ 30 ವರ್ಷದ ಮಾಲಪತಿ ಅಶೋಕ್ ಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಭಾರೀ ಸಾಲಗಳಿಂದ ಬಳಲುತ್ತಿದ್ದ ಅಶೋಕ್, ತನ್ನ ತಂಗಿಯ ಜೀವಕ್ಕೆ ವಿಮೆ ಮಾಡಿಸಿ, ಕೊಲೆ ಮಾಡಿ, ಅದನ್ನು ಅಪಘಾತ ಎಂದು ಬಿಂಬಿಸಿ ಹಣ ಪಡೆಯಲು ಪ್ಲಾನ್ ಮಾಡಿದ್ದ ಎನ್ನಲಾಗಿದೆ.
ಘಟನೆ ನಡೆದ ದಿನ, ಅಶೋಕ್ ತನ್ನ ತಂಗಿಯನ್ನು ಓಂಗೋಲ್ಗೆ ಆಸ್ಪತ್ರೆಗೆ ಭೇಟಿ ನೀಡುವ ನೆಪದಲ್ಲಿ ತನ್ನ ಕಾರಿನೊಳಗೆ ಕೂರಿಸಿಕೊಂಡಿದ್ದ. ಅಲ್ಲಿಂದ ವಾಪಾಸ್ ಬರುವಾಗ ಆಕೆಗೆ ನಿದ್ರೆ ಮಾತ್ರೆಗಳನ್ನು ನೀಡಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಆ ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






