ಬಾಣಂತಿಯರ ಸಾವಿನ ಹೊಣೆ ಸಿಎಂ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು: ಆರ್‌. ಅಶೋಕ್‌

ಡಿಸೆಂಬರ್ 6, 2024 - 16:12
 0  7
ಬಾಣಂತಿಯರ ಸಾವಿನ ಹೊಣೆ ಸಿಎಂ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು: ಆರ್‌. ಅಶೋಕ್‌

ಬೆಂಗಳೂರು: ಬಾಣಂತಿಯರ ಸಾವಿನ ಹೊಣೆ ಸಿಎಂ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಾಣಂತಿಯರ ಸಾವಿನ ಹೊಣೆ ಸಿಎಂ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು. ಪುಡಿಗಳ ರಾಜೀನಾಮೆ ಬೇಡ. ಅಲ್ಲದೇ ಬಾಣಂತಿಯರ ಸಾವಿನ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು. ನಮ್ಮ ಪಕ್ಷದಿಂದ, ಲೋಕಾಯುಕ್ತಕ್ಕೆ ದೂರು ನೀಡಲಿದ್ದೇವೆ ಎಂದು ಹೇಳಿದರು.

ಇನ್ನೂ ಸೆಂಟ್ರಲ್ ಲ್ಯಾಬ್‌ನಲ್ಲಿ ದ್ರಾವಣ ಬಳಕೆಗೆ ಯೋಗ್ಯ ಅಂತ ವರದಿ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ಇವ್ರು ಯಾವ ಸ್ಯಾಂಪಲ್ ಕಳಿಸಿದರು ಅಂತ ಬೇಕಲ್ಲ. ಕೇಂದ್ರದ ಯಾವುದೇ ಅಧಿಕಾರಿ ತಪ್ಪು ಮಾಡಿದರೂ ಕ್ರಮ ಆಗಲಿ, ಡ್ರಗ್ ಮಾಫಿಯಾ ಕೇಂದ್ರದ ಸಂಸ್ಥೆಗಳನ್ನು ಬಿಟ್ಟಿಲ್ಲ. ರಾಜ್ಯದಲ್ಲಿ ಕಳಪೆ ದ್ರಾವಣ ಖರೀದಿ ಹಿಂದೆ ಮೆಡಿಕಲ್ ಮಾಫಿಯಾ ಕೈವಾಡ ಇದೆ, ಈ ಸರ್ಕಾರದವರ ಕೈವಾಡ ಇದೆ ಎಂದು ಆರೋಪಿಸಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow