ಬಿಗ್ ಬಾಸ್ ಮನೆಯಲ್ಲಿ ಊಟಕ್ಕೂ ಕಿರಿಕ್: ಇನ್ಮುಂದೆ ಟೀ ಕುಡಿಯಲ್ಲ ಎಂದ ಚೈತ್ರಾ!

ಅಕ್ಟೋಬರ್ 25, 2024 - 20:14
 0  17
ಬಿಗ್ ಬಾಸ್ ಮನೆಯಲ್ಲಿ ಊಟಕ್ಕೂ ಕಿರಿಕ್: ಇನ್ಮುಂದೆ ಟೀ ಕುಡಿಯಲ್ಲ ಎಂದ ಚೈತ್ರಾ!

ಬಿಗ್ ಬಾಸ್ ಸೀಸನ್ 11 ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದೆ. ಮೊದಲೆಲ್ಲಾ ಜಗದೀಶ್ ರಿಂದ ಹೆಚ್ಚು ಗಲಾಟೆ, ಕಿರಿಕ್ ಆಗುತ್ತಿತ್ತು. ಇದೀಗ ಚೈತ್ರಾ ಕುಂದಾಪುರ್ ಶುರು ಮಾಡಿದ್ದಾರೆ. 

ಚೈತ್ರಾ ಕುಂದಾಪುರ ಅವರು ಊಟದ ವಿಚಾರಕ್ಕೆ ಜಗಳ ಶುರು ಮಾಡಿದ್ದಾರೆ. ಇತರೆ ಸ್ಪರ್ಧಿಗಳು ಸಮಾಧಾನ ಮಾಡಿದರೂ ಚೈತ್ರಾ ಕುಂದಾಪುರ ಮಾತ್ರ ಶಾಂತರಾಗಲಿಲ್ಲ.

ಅಕ್ಟೋಬರ್ 25ರ ಸಂಚಿಕೆಯ ಹೊಸ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿದೆ. ಅದರಲ್ಲಿ ಮನೆಯ ಎಲ್ಲಾ ಸದಸ್ಯರು ಡೈನಿಂಗ್ ಹಾಲ್‌ನಲ್ಲಿ ಕುಳಿತು ಊಟ ಮಾಡುತ್ತಿರುತ್ತಾರೆ. ಆಗ ಗೌತಮಿ ಜಾಧವ್ ಅವರು 'ಎಷ್ಟು ಬೇಕೋ ಅಷ್ಟು ಹಾಕಿಕೊಳ್ಳಿ' ಎಂದು ಹೇಳಿದ್ದಾರೆ. ಅದಕ್ಕೆ ಚೈತ್ರಾ ಕುಂದಾಪುರ ಅವರು, "ನಾನು ನಮ್ಮವರಿಗೆ ಸಕ್ಕರೆ ಹಾಕ್ಕೋಬೇಡಿ ಎಂದು ಹೇಳಿದೆ" ಎಂದಿದ್ದಾರೆ. "ಯಾರಾದರೂ ತಿನ್ನೋ ಟೈಮಲ್ಲಿ ಹಾಗೆಲ್ಲಾ ಮಾತನಾಡಬಾರದು" ಎಂದು ಚೈತ್ರಾಗೆ 'ಉಗ್ರಂ' ಮಂಜು ಸಲಹೆ ನೀಡಿದ್ದಾರೆ.

ನಾನು ಬೇರೆ ಯಾರಿಗೋ ಹೇಳಿದ್ದಲ್ಲ, ನಮ್ಮ ಟೀಮ್‌ನವರಿಗೆ ಹೇಳಿದ್ದು" ಎಂದು ಚೈತ್ರಾ ಕುಂದಾಪುರ ಪದೇಪದೇ ಹೇಳಿದ್ದಾರೆ. ಆಗ ಧ್ವನಿ ಎತ್ತಿದ ಗೌತಮಿ, "ನಮ್ಮವರು ನಿಮ್ಮವರು ಅಂತಲ್ಲ, ಯಾರಿಗೂ ಹಾಗೇ ಹೇಳಬೇಡಿ. ನಾನು ನಿಮ್ಮವರ ಪರವಾಗಿ ಮಾತನಾಡುತ್ತಿದ್ದೇನೆ. ತಿನ್ನಬೇಕಾದರೂ ಯಾರು ಮಾತನಾಡಬೇಡಿ" ಎಂದಿದ್ದಾರೆ. ಆದರೆ ಚೈತ್ರಾ ಕುಂದಾಪುರ ಮಾತ್ರ ಜೋರು ಜಗಳ ಮಾಡಿದ್ದಾರೆ

ಚೈತ್ರಾ ಕುಂದಾಪುರ ಮಾತನಾಡುವ ಶೈಲಿಗೆ ಗಾಬರಿಯಾದ ಮಾನಸ, "ಸುಮ್ನಿರಿ ಅಕ್ಕ, ದಯವಿಟ್ಟು ಊಟ ಮಾಡುವಾಗ ಇವೆಲ್ಲಾ ಮಾತಾಡಬೇಡಿ" ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೂ ಚೈತ್ರಾ ಸಮಾಧಾನ ಆಗಿಲ್ಲ. ಟೀ ಕುಡಿಯುತ್ತಿದ್ದ ಚೈತ್ರಾ ಕುಂದಾಪುರ, "ಇದೇ ಲಾಸ್ಟ್, ಇನ್ಮೇಲೆ ನಾನು ಟೀ ಕುಡಿಯಲ್ಲ" ಎಂದು ಶಪಥ ಮಾಡಿದ್ದಾರೆ. ಅದಕ್ಕೆ 'ಉಗ್ರಂ' ಮಂಜು "ಒಳ್ಳೇದು" ಎಂದಿದ್ದಾರೆ. 

ಚೈತ್ರಾ ಕುಂದಾಪುರ ಅವರು ಊಟದ ವಿಚಾರಕ್ಕೆ ಜಗಳ ಶುರು ಮಾಡಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow