ಬಿಗ್ ಮನೆಗೆ ಬಂದ ಹಳೇ ಸ್ಪರ್ಧಿಗಳು: ಯಾರಿಗೆ ಸಿಕ್ತು ಯಾವ ಹಾರ್ಟ್!?

ಜನವರಿ 17, 2025 - 20:07
 0  15
ಬಿಗ್ ಮನೆಗೆ ಬಂದ ಹಳೇ ಸ್ಪರ್ಧಿಗಳು: ಯಾರಿಗೆ ಸಿಕ್ತು ಯಾವ ಹಾರ್ಟ್!?

ಬಿಗ್​ಬಾಸ್​ ಸೀಸನ್​​ 11ರಲ್ಲಿ ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿ ಈಗ ಮತ್ತೆ ಹಳೆಯ ವಾತಾವರಣ ಮೂಡಿದ್ದು ಎಲ್ಲರ ಮುಖದಲ್ಲೂ ನಗು ತುಂಬಿದೆ. 

ಬಿಗ್ ಬಾಸ್​ನಲ್ಲಿ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಮತ್ತೆ ಮನೆಗೆ ಅತಿಥಿಗಳಾಗಿ ಆಗಮಿಸಿದ್ದಾರೆ. ಶಿಶಿರ್, ರಂಜಿತ್, ಗೋಲ್ಡ್​ ಸುರೇಶ್, ಅನುಷಾ ರೈ, ಹಂಸ, ಯಮುನಾ, ಮಾನಸ ಅವರು ವಾಪಸ್ ಆಗಿದ್ದಾರೆ. ಗೋಲ್ಡ್​ ಸುರೇಶ್​ಗೆ ಕುಚುಕು ಗೆಳೆಯರು ಕಿಸ್ ಮೇಲೆ ಕಿಸ್ ಕೊಟ್ಟಿದ್ದಾರೆ. ಯಮುನಾ, ಹಂಸ, ಮಾನಸ ಮತ್ತದೆ ನಗುವಿನಲ್ಲಿ ಎಂಜಾಯ್ ಮಾಡಿದ್ದಾರೆ. ತ್ರಿವಿಕ್ರಮ್ ಅಂತೂ ಮಾನಸ ಅವರನ್ನು ಎತ್ತಿಕೊಂಡು ಸಂಭ್ರಮಿಸಿದರು.

ಪ್ರಸ್ತುತ ಬಿಗ್‌ಬಾಸ್‌ ಮನೆಯಲ್ಲಿ 8 ಜನ ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಕಳೆದ ದಿನ ಎಪಿಸೋಡ್‌ನಲ್ಲಿ ಗೌತಮಿ ಜಾದವ್ ಮಿಡ್‌ ವೀಕ್ ಎಲಿಮಿನೇಷನ್ ಆಗಿದ್ದಾರೆ ಎನ್ನಲಾಗಿತ್ತು. ಆದರೆ ಅದಾಗಿಲ್ಲ. ಇನ್ನೂ ಈ ವಾರಾಂತ್ಯಕ್ಕೆ ಧನ್‌ರಾಜ್, ಮೋಕ್ಷಿತಾ ಹಾಗೂ ಉಗ್ರಂ ಮಂಜು ಈ ಮೂವರಲ್ಲಿ ಇಬ್ಬರು ಮನೆಯಿಂದ ಹೊರ ಬರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾರು ಹೊರಬರುತ್ತಾರೆ ಅನ್ನೋದು ಪಕ್ಕಾ ಆಗಿಲ್ಲ. ಒಟ್ಟಿನಲ್ಲಿ ಬಿಗ್‌ಬಾಸ್‌ ಮನೆಯಿಂದ ಈ ವಾರ ಮೂರು ಜನ ಸ್ಪರ್ಧಿಗಳು ಹೊರ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದಲ್ಲಿ ಸೋಮವಾರದಿಂದ ಗ್ರ್ಯಾಂಡ್ ಫಿನಾಲೆ ಟಾಸ್ಕ್‌ಗಳು ಮನೆಯಲ್ಲಿ ಉಳಿದುಕೊಳ್ಳುವ 5 ಜನ ಸ್ಪರ್ಧಿಗಳ ನಡುವೆ ನಡೆಯಲಿವೆ.

ವೈರಲ್ ಆದ ಪ್ರೋಮೋದಲ್ಲಿ ಬೆಳ್ಳಂಬೆಳಗ್ಗೆ ಬಿಗ್‌ಬಾಸ್‌ ಮನೆಗೆ ಹಳೆಯ ಸ್ಪರ್ಧಿಗಳು ಎಂಟ್ರಿಕೊಟ್ಟು ಮನೆಯಲ್ಲಿ ಮಲಗಿರುವ ಸ್ಪರ್ಧಿಗಳನ್ನು ಎಬ್ಬಿಸಿದ್ದಾರೆ. ಗೋಲ್ಡ್ ಸುರೇಶ್, ರಂಜಿತ್, ಹಂಸ, ಯಮುನಾ ಶ್ರೀನಿಧಿ, ಅನುಷಾ ರೈ, ಶಿಶಿರ್, ಮಾನಸ ತುಕಾಲಿ ಎಲ್ಲರೂ ಕೂಡ ಮನೆಗೆ ಆಗಮಿಸಿದ್ದು ಮನೆಯ ಸದಸ್ಯರು ದಿಲ್ ಖುಷ್ ಆಗಿದ್ದಾರೆ.

ಇನ್ನೂ ಮಾನಸ ತುಕಾಲಿ ಅವರು ಬಿಗ್‌ಬಾಸ್‌ ಮನೆಗೆ ಬಂದ ಖುಷಿಯಾಲ್ಲಿ ತ್ರಿವಿಕ್ರಮ್ ಅವರನ್ನು ಎತ್ತಿಕೊಂಡಿದ್ದು ಕಂಡು ಬಂದಿದೆ. ಪರಸ್ಪರ ಸಂಕ್ರಾಂತಿ ಶುಭ ಕೋರುವ ಮೂಲಕ ಎಲ್ಲರಿಗೂ ಗೆಲ್ಲಲು ಶುಭ ಹಾರೈಸಿದ್ದಾರೆ.

ಈ ವೇಳೆ ಬಿಗ್‌ಬಾಸ್‌ ಹಳೆಯ ಸ್ಪರ್ಧಿಗಳಿಗೆ ಟಾಸ್ಕ್‌ವೊಂದನ್ನು ನೀಡಲಾಗುತ್ತದೆ. ಈ ಮನೆಯಲ್ಲಿ ಸಿಹಿಕಹಿ ನೆನಪುಗಳು, ಕೂಡಿಟ್ಟುಕೊಂಡ ನೆನಪುಗಳು ಬಹಳಷ್ಟು ಇವೆ. ಈ ಕೆಟ್ಟ ನೆನಪುಗಳನ್ನು ನೆನಪಿಸಿಕೊಂಡು ಹಳೆಯ ಸ್ಪರ್ಧಿಗಳು ಮನೆಯಲ್ಲಿ ಇರುವ ಏಳು ಜನ ಸ್ಪರ್ಧಿಗಳಿಗೆ ಹೃದಯ ಸಿಂಬಲ್ ಇರುವ ಮುಳ್ಳು ಇರುವ ಬೋರ್ಡ್ ನೀಡಬೇಕು. ಯಾರಿಂದಾಗಿ ತಮ್ಮ ಮನಸ್ಸಿಗೆ ನೋವಾಗಿದೆ ಅನ್ನೋದನ್ನು ನೆನಪಿಸಿಕೊಂಡು ಆ ಸ್ಪರ್ಧಿಗೆ ಮುಳ್ಳು ಇರುವ ಹಾರ್ಟ್ ಬೋರ್ಡ್‌ ಅನ್ನು ನೀಡಬೇಕು.

ಈ ವೇಳೆ ಹಳೆಯ ಸ್ಪರ್ಧಿಗಳು ತಮಗೆ ಯಾರಿಂದ ಬೇಸರವಾಗಿದೆ ಎನ್ನುವುದನ್ನು ನೆನಪಿಸಿಕೊಂಡು ಮುಳ್ಳು ಇರುವ ಬೋರ್ಡ್ ನೀಡುತ್ತಾರೆ. ಗೋಲ್ಡ್‌ ಸುರೇಶ್-ಗೌತಮಿಗೆ, ಹಂಸ- 'ಮಂಜು ಅವರು ನನಗೆ ಸಿಕ್ಕಾಪಟ್ಟೆ ಹರ್ಟ್ ಮಾಡಿದ್ದಾರೆ' ಎಂದು ಕಾರಣ ನೀಡುತ್ತಾರೆ, ಮಾನಸ ತುಕಾಲಿ- 'ಮಂಜು ಅವರೊಂದಿಗೆ ಯಾಕೆ ನನಗೆ ಜಗಳ ಆಗಿತ್ತೋ ಗೊತ್ತಿಲ್ಲ' ಎಂದು ಕಾರಣ ಕೊಡುತ್ತಾರೆ ಹಾಗೂ ಶಿಶಿರ್ ಕೂಡ ಮಂಜು ಅವರಿಗೆ 'ಮಹಾರಾಜಾ ಟಾಸ್ಕ್‌ನಲ್ಲಿ ನೀವು ಎಳೆದು ಬೀಸಾಕಿದ್ದಕ್ಕೆ ಇವತ್ತಿಗೂ ಕೂಡ ನೋವಿದೆ' ಎಂದು ಕಾರಣ ಕೊಡುತ್ತಾರೆ, ಯಮುನಾ ಕೂಡ ಮಂಜು ಅವರಿಗೇ ಈ ಬೋರ್ಡ್‌ ಅನ್ನು ನೀಡುತ್ತಾರೆ. ಒಟ್ಟಿನಲ್ಲಿ ಮನೆಗೆ ಆಗಮಿಸಿದ ಹಳೆಯ ಸ್ಪರ್ಧಿಗಳು ಮಂಜು ಅವರಿಗೇ ಟಾರ್ಗೇಟ್ ಮಾಡಿದಂತೆ ಇತ್ತು.

ಇನ್ನೂ ಸಿಹಿ ಘಟನೆಗಳನ್ನು ನೆನಪಿಸಿಕೊಂಡು ಅನುಷಾ ರೈ- ಗೌತಮಿಗೆ, ರಂಜಿತ್- ತ್ರಿವಿಕ್ರಮ್‌ಗೆ, ಹಂಸ-ಧನ್‌ರಾಜ್‌ಗೆ, ಶಿಶಿರ್-ಮೋಕ್ಷಿತಾಗೆ, ಗೋಲ್ಡ್‌ ಸುರೇಶ್-ಹನುಮಂತುಗೆ, ಯಮುನಾ-ಭವ್ಯಾಗೆ ಮುಳ್ಳು ಇರದ ಹಾರ್ಟ್‌ ಸಿಂಬಲ್‌ ಅನ್ನು ನೀಡುತ್ತಾರೆ. 

ಇದಕ್ಕೆ ಮಂಜು ಅವರು ರಜತ್, ತ್ರಿವಿಕ್ರಮ್, ಭವ್ಯಾಗೆ ಕೌಂಟರ್ ಕೊಟ್ಟಿದ್ದಾರೆ. ನಾಲ್ಕು-ಐದು ವಾರ ಮಂಜು ಹೇಗಿದ್ದ ಈಗ ಕಾಣ್ತಿಲ್ಲ ಅನ್ನೋರಿಗೆಲ್ಲಾ ಉತ್ತರ ಸಿಕ್ಕಿದೆ ಅಂದುಕೊಳ್ಳುತ್ತೇನೆ ಎಂದು ಸರಿಯಾಗೇ ತಿರುಗೇಟು ಕೊಟ್ಟಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow