ಬೆಂಗಳೂರಿನ ಜನರಲ್ಲಿ ತತ್ವಜ್ಞಾನ ಹಾಗೂ ತಂತ್ರಜ್ಞಾನ ಎರಡೂ ಇವೆ: ಪ್ರಧಾನಿ ಮೋದಿ
ಬೆಂಗಳೂರು: ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಯೆಲ್ಲೋ ಲೈನ್ ಮೆಟ್ರೋ, ಮತ್ತು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಬೆಂಗಳೂರಿನ ಜನರಲ್ಲಿ ತತ್ವಜ್ಞಾನ ಮತ್ತು ತಂತ್ರಜ್ಞಾನ ಎರಡನ್ನೂ ಹೊಂದಿರುವ ವಿಶೇಷತೆ ಇದೆ ಎಂದು ಹೊಗಳಿದರು.
ಮೋದಿ 21ನೇ ಶತಮಾನದಲ್ಲಿ ನಗರ ಯೋಜನೆ ಮತ್ತು ಮೂಲಭೂತ ಸೌಕರ್ಯಗಳ ಒದಗಿಸುವಿಕೆ ಪ್ರಮುಖವಾಗುವುದನ್ನು ಪ್ರಸ್ತಾಪಿಸಿ, ಬೆಂಗಳೂರನ್ನು ಭವಿಷ್ಯಕ್ಕೆ ಅನುಕೂಲವಾಗುವಂತೆ ತಯಾರಿಸಲು ಅಗತ್ಯವಿರುವುದನ್ನು ತಿಳಿಸಿದ್ದಾರೆ.
ಕರ್ನಾಟಕವನ್ನು ಭೇಟಿಯಾದಾಗ ತನ್ನದ್ದು ಎಂಬ ಭಾವನೆ ಹುಟ್ಟುವುದಾಗಿ, ಈ ರಾಜ್ಯದ ಸಂಸ್ಕೃತಿ, ಪ್ರೀತಿ ಮತ್ತು ಕನ್ನಡ ಭಾಷೆಯ ಸಿಹಿ ಹೃದಯ ಸ್ಪರ್ಶಿಸುವುದಾಗಿ ಹೇಳಿದ್ದಾರೆ.
ಭಾಷಣವನ್ನು ಪ್ರಾರಂಭಿಸುವಾಗ, ಬೆಂಗಳೂರಿನ ಜನರಿಗೆ ಆತ್ಮೀಯ ನಮಸ್ಕಾರಗಳನ್ನು ಅರ್ಪಿಸಿ, ಆಪರೇಷನ್ ಸಿಂಧೂರ್ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದು, ಭಾರತೀಯ ಸೇನೆಯ ಸಫಲತೆ ಹಾಗೂ ಗಡಿಯನ್ನು ದಾಟಿ ಉಗ್ರರ ನೆಲೆಗಳನ್ನು ನಾಶಪಡಿಸಿದ ಕಾರ್ಯ ಇಡೀ ದೇಶಕ್ಕೆ ಹೊಸ ಮುಖವನ್ನು ತೋರಿಸಿದೆ ಎಂದು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?