ಭಾರತದ ವಿರುದ್ಧ ತೆರೆಮರೆಯಲ್ಲಿರುವ ಮಾಸ್ಟರ್ ಮೈಂಡ್’ಗಳನ್ನೂ ಸಹ ಬಿಡಲ್ಲ: ರಾಜನಾಥ್ ಸಿಂಗ್ ಎಚ್ಚರಿಕೆ

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಕರ್ನಾಟಕದ ಜನರೂ ಇದ್ದಾರೆ. ಇನ್ನೂ ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿದ್ದಾರೆ.
'ಉಗ್ರವಾದಿಗಳ ಅತ್ಯಂತ ಹೇಯ ಕೃತ್ಯದಲ್ಲಿ ನಮ್ಮ ದೇಶ ಅಮಾಯನಕ ನಾಗರೀಕರನ್ನು ಕಳೆದುಕೊಂಡಿದೆ. ಈ ಘೋರ ಹಾಗೂ ಅಮಾನವೀಯ ಕೃತ್ಯದಿಂದ ನಾವೆಲ್ಲರೂ ಬಹಳ ಶೋಕ ಹಾಗೂ ನೋವಿನಲ್ಲಿದ್ದೇವೆ. ಮೊದಲಿಗೆ ಈ ಘಟನೆಯಲ್ಲಿ ಸಾವು ಕಂಡ ಎಲ್ಲರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಅವರಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ. ಈ ನೋವಿನ ಸಮಯದಲ್ಲಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳುತ್ತೇನೆ' ಎಂದಿದ್ದಾರೆ.
ಇಲ್ಲಿ ನಾನು ಭಾರತದ ಸಂಕಲ್ಪವನ್ನು ತಿಳಿಸಲು ಬಯಸುತ್ತೇನೆ. ಭಯೋತ್ಪಾದನೆ ವಿರುದ್ಧ ನಮ್ಮದು ಶೂನ್ಯ ಸಹಿಷ್ಣುತೆ ನೀತಿ. ಭಾರತದ ಪ್ರತಿ ನಾಗರೀಕರಿಗೆ ತಿಳಿಸೋದು ಏನೆಂದರೆ, ಈ ಘಟನೆಯಲ್ಲಿ ಭಾಗಿಯಾದವರ ಪ್ರತಿಯೊಬ್ಬರನ್ನು ಹುಡುಕುತ್ತೇವೆ.
ಸರ್ಕಾರವು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡಲು ಬಯಸುತ್ತೇನೆ. ಈ ಕೃತ್ಯದ ಅಪರಾಧಿಗಳನ್ನು ಮಾತ್ರವಲ್ಲದೆ ತೆರೆಮರೆಯಲ್ಲಿರುವ ಮಾಸ್ಟರ್ಮೈಂಡ್ಗಳನ್ನೂ ಸಹ ನಾವು ತಲುಪುತ್ತೇವೆ. ಕೃತ್ಯದ ಆರೋಪಿಗಳಿಗೆ ಶೀಘ್ರದಲ್ಲೇ ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆ ಸಿಗಲಿದೆ ಎಂದು ನಾನು ದೇಶಕ್ಕೆ ಭರವಸೆ ನೀಡಲು ಬಯಸುತ್ತೇನೆ' ಎಂದು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






