ಭಾರತದ ವಿರುದ್ಧ ತೆರೆಮರೆಯಲ್ಲಿರುವ ಮಾಸ್ಟರ್‌ ಮೈಂಡ್‌’ಗಳನ್ನೂ ಸಹ ಬಿಡಲ್ಲ: ರಾಜನಾಥ್‌ ಸಿಂಗ್‌ ಎಚ್ಚರಿಕೆ

ಎಪ್ರಿಲ್ 23, 2025 - 18:04
 0  12
ಭಾರತದ ವಿರುದ್ಧ ತೆರೆಮರೆಯಲ್ಲಿರುವ ಮಾಸ್ಟರ್‌ ಮೈಂಡ್‌’ಗಳನ್ನೂ ಸಹ ಬಿಡಲ್ಲ:  ರಾಜನಾಥ್‌ ಸಿಂಗ್‌ ಎಚ್ಚರಿಕೆ

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಕರ್ನಾಟಕದ ಜನರೂ ಇದ್ದಾರೆಇನ್ನೂ ಬಗ್ಗೆ ರಕ್ಷಣಾ ಸಚಿವ ರಾಜನಾಥ್ಸಿಂಗ್‌  ಮಾತನಾಡಿದ್ದಾರೆ

'ಉಗ್ರವಾದಿಗಳ ಅತ್ಯಂತ ಹೇಯ ಕೃತ್ಯದಲ್ಲಿ ನಮ್ಮ ದೇಶ ಅಮಾಯನಕ ನಾಗರೀಕರನ್ನು ಕಳೆದುಕೊಂಡಿದೆ. ಘೋರ ಹಾಗೂ ಅಮಾನವೀಯ ಕೃತ್ಯದಿಂದ ನಾವೆಲ್ಲರೂ ಬಹಳ ಶೋಕ ಹಾಗೂ ನೋವಿನಲ್ಲಿದ್ದೇವೆ. ಮೊದಲಿಗೆ ಘಟನೆಯಲ್ಲಿ ಸಾವು ಕಂಡ ಎಲ್ಲರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಅವರಿಗೆ ದುಃಖ ಭರಿಸುವ ಶಕ್ತಿ ನೀಡಲಿ. ನೋವಿನ ಸಮಯದಲ್ಲಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳುತ್ತೇನೆ' ಎಂದಿದ್ದಾರೆ.

ಇಲ್ಲಿ ನಾನು ಭಾರತದ ಸಂಕಲ್ಪವನ್ನು ತಿಳಿಸಲು ಬಯಸುತ್ತೇನೆ. ಭಯೋತ್ಪಾದನೆ ವಿರುದ್ಧ ನಮ್ಮದು ಶೂನ್ಯ ಸಹಿಷ್ಣುತೆ ನೀತಿ. ಭಾರತದ ಪ್ರತಿ ನಾಗರೀಕರಿಗೆ ತಿಳಿಸೋದು ಏನೆಂದರೆ, ಘಟನೆಯಲ್ಲಿ ಭಾಗಿಯಾದವರ ಪ್ರತಿಯೊಬ್ಬರನ್ನು ಹುಡುಕುತ್ತೇವೆ.

ಸರ್ಕಾರವು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡಲು ಬಯಸುತ್ತೇನೆ. ಕೃತ್ಯದ ಅಪರಾಧಿಗಳನ್ನು ಮಾತ್ರವಲ್ಲದೆ ತೆರೆಮರೆಯಲ್ಲಿರುವ ಮಾಸ್ಟರ್ಮೈಂಡ್ಗಳನ್ನೂ ಸಹ ನಾವು ತಲುಪುತ್ತೇವೆ. ಕೃತ್ಯದ ಆರೋಪಿಗಳಿಗೆ ಶೀಘ್ರದಲ್ಲೇ ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆ ಸಿಗಲಿದೆ ಎಂದು ನಾನು ದೇಶಕ್ಕೆ ಭರವಸೆ ನೀಡಲು ಬಯಸುತ್ತೇನೆ' ಎಂದು ತಿಳಿಸಿದ್ದಾರೆ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow