ಭೀಕರ ಅಪಘಾತ: ನಡುರಸ್ತೆಯಲ್ಲೇ ಎರಡು ಲಾರಿ ಬೆಂಕಿಗಾಹುತಿ! ತಪ್ಪಿದ ದುರಂತ!

ಡಿಸೆಂಬರ್ 28, 2024 - 15:00
 0  12
ಭೀಕರ ಅಪಘಾತ: ನಡುರಸ್ತೆಯಲ್ಲೇ ಎರಡು ಲಾರಿ ಬೆಂಕಿಗಾಹುತಿ! ತಪ್ಪಿದ ದುರಂತ!

ಚಿಕ್ಕಬಳ್ಳಾಪುರ:- ಭೀಕರ ಅಪಘಾತದಲ್ಲಿ ನಡುರಸ್ತೆಯಲ್ಲೇ ಎರಡು ಲಾರಿ ಬೆಂಕಿಗಾಹುತಿ ಆಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹುನೇಗಲ್ ಗ್ರಾಮದಲ್ಲಿ  ಜರುಗಿದೆ. 

ಸಿಎನ್​​ಜಿ ಗ್ಯಾಸ್ ಸಿಲಿಂಡರ್​​ಗಳನ್ನು ತುಂಬಿದ್ದ ಕ್ಯಾಂಟರ್​​ವೊಂದಕ್ಕೆ ಗ್ರಾನೈಟ್ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದ ಕಾರಣ ಈ ಅವಘಡ ಸಂಭವಿಸಿದೆ. ಸಿಎನ್​​ಜಿ ಗ್ಯಾಸ್ ಸಿಲಿಂಡರ್​​ಗಳು ಸ್ಪೋಟಗೊಂಡು ನೂರು ಅಡಿ ಎತ್ತರ ಬೆಂಕಿಯ ಕೆನ್ನಾಲಿಗೆ ಚಿಮ್ಮಿದೆ. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದ್ದು, ಎರಡೂ ಲಾರಿಗಳಲ್ಲಿದ್ದ ಚಾಲಕರು ಹಾಗೂ ಕ್ಲೀನರ್​ಗಳಿಗೆ ಗಾಯಗಳಾಗಿವೆ.

ಸಿಎನ್​​ಜಿ ಗ್ಯಾಸ್ ಸಿಲೆಂಡರ್​ಗಳನ್ನು ತುಂಬಿದ್ದ ಕ್ಯಾಂಟರ್ ಹುನೇಗಲ್ ಬಳಿ ಯೂ ಟರ್ನ್ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಗ್ರಾನೈಟ್ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ರಭಸವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಸಿಎನ್​​ಜಿ ಗ್ಯಾಸ್ ಸಿಲೆಂಡರ್​ಗಳು ಸ್ಪೋಟಗೊಂಡು ಬೆಂಕಿ ಆವರಿಸಿದೆ. ಬೆಂಕಿಯ ಕೆನ್ನಾಲಿಗೆ ನೂರು ಅಡಿ ಎತ್ತರ ಚಿಮ್ಮಿದ್ದು, ಸುತ್ತಮುತ್ತ ಇದ್ದ ಸ್ಥಳೀಯರು ಹಾಗೂ ವಾಹನ ಸವಾರರನ್ನು ಆತಂಕಕ್ಕೀಡು ಮಾಡಿತ್ತು.

ಘಟನೆಯಲ್ಲಿ ಎರಡೂ ಲಾರಿಗಳ ಇಬ್ಬರು ಚಾಲಕರು ಹಾಗೂ ಓರ್ವ ಕ್ಲೀನರ್​​ಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಬೆಂಗಳೂರಿನ ವಿಕ್ಟೋರಿಯಾಗೆ ದಾಖಲಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow