ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಮೂವರು ದುರ್ಮರಣ!

ಜನವರಿ 7, 2025 - 14:00
 0  16
ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಮೂವರು ದುರ್ಮರಣ!

ತುಮಕೂರು:- ರಸ್ತೆ ಅಪಘಾತದಲ್ಲಿ  ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ತುಮಕೂರು ತಾಲೂಕಿನ ಓಬಳಾಪುರ ಗ್ರಾಮದ ಬಳಿ  ಜರುಗಿದೆ. 

ಮಧುಗಿರಿ ತಾಲೂಕಿನ ಗುಡ್ಡೆನಹಳ್ಳಿ ಗ್ರಾಮದ ನಿವಾಸಿಗಳಾದ 12 ವರ್ಷದ ಮಹಮ್ಮದ್​​ ಆಸೀಫ್, 38 ವರ್ಷದ ಮಮ್ತಾಜ್ , 18 ವರ್ಷದ ಶಾಖಿರ್​​ ಹುಸೇನ್ ​ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.  

ಘಟನಾ ಸ್ಥಳಕ್ಕೆ ಎಸ್​ಪಿ ಅಶೋಕ್ ವೆಂಕಟ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಮಕೂರು ಕಡೆಯಿಂದ ಮಧುಗಿರಿಗೆ ಹೋಗುವಾಗ ಅಪಘಾತ ಸಂಭವಿಸಿದೆ. ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೈಕ್​ ಡಿಕ್ಕಿ ಹೊಡೆದಿದೆ.

ಮಹಮ್ಮದ್ ಆಸೀಪ್, ಶಾಖಿರ್​​ ಹುಸೇನ್ ಮತ್ತು ತಾಯಿ ಮಮ್ತಾಜ್​ ಮೂವರು ಸೋಮವಾರ ಸಂಜೆ ಶಿರಾ ಗೇಟ್​ನಲ್ಲಿನ ಸಂಬಂಧಿ ಮನೆಗೆ ತೆರಳಿದ್ದರು. ಮಂಗಳವಾರ ಶಾಲೆ-ಕಾಲೇಜಿಗೆ ಹೋಗಬೇಕೆಂದು ಬೆಳಗಿನ ಜಾವ 6 ಗಂಟೆ ಸುಮಾರಿಗೆ ವಾಪಸ್ ಊರಿಗೆ ಹೋಗುತ್ತಿದ್ದರು. ಓಬಳಾಪುರ ಗ್ರಾಮದ ಬಳಿ ಬೈಕ್​ ಚಾಲಕನ ನಿಯಂತ್ರಣ ತಪ್ಪಿ ​ನಿಂತಿದ್ದ ಟ್ರ್ಯಾಕ್ಟರ್​​​ ಟ್ರೇಲರ್​ಗೆ ಡಿಕ್ಕಿ ಹೊಡೆದಿದೆ. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow