ಮತ್ತೆ ಮುನ್ನೆಲೆಗೆ ಬಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ: ಬೆಳ್ಳಂಬೆಳಗ್ಗೆ ಶಾಸಕರು, ಸಂಸದರಿಗೆ ಶಾಕ್ ಕೊಟ್ಟ ED

ಜೂನ್ 11, 2025 - 10:22
 0  11
ಮತ್ತೆ ಮುನ್ನೆಲೆಗೆ ಬಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ: ಬೆಳ್ಳಂಬೆಳಗ್ಗೆ ಶಾಸಕರು, ಸಂಸದರಿಗೆ ಶಾಕ್ ಕೊಟ್ಟ ED

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣದ ಪ್ರಕರಣ ಹಿನ್ನೆಲೆಯಲ್ಲಿಬೆಳ್ಳಂಬೆಳಗ್ಗೆ .ಡಿ ಅಧಿಕಾರಿಗಳು ಬಳ್ಳಾರಿ ಜಿಲ್ಲೆಯ ಶಾಸಕರು ಮತ್ತು ಸಂಸದರಿಗೆ ಶಾಕ್ಕೊಟ್ಟಿದ್ದಾರೆ. ಏಕಕಾಲಕ್ಕೆ .ಡಿ ಅಧಿಕಾರಿಗಳ ತಂಡ ಎಲ್ಲರ ನಿವಾಸದ ಮೇಲೆ ದಾಳಿ ನಡೆಸಿದೆ.

ಬಳ್ಳಾರಿಯ ಕಾಂಗ್ರೆಸ್​​ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಕಂಪ್ಲಿ ಶಾಸಕ ಗಣೇಶ್, ಕೊಡ್ಲಿಗಿ ಶಾಸಕ ಶ್ರೀನಿವಾಸ್​ ​​ ಮನೆ ಮೇಲೂ .ಡಿ ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲಿಸುತ್ತಿದೆ.

ಇತ್ತ ಬೆಂಗಳೂರಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಗೂ ಜಾರಿ ನಿರ್ದೇಶನಾಲಯ ಶಾಕ್ನೀಡಿದೆ. ಶಾಸಕರ ಭವನದ ನಾಗೇಂದ್ರ ಕಚೇರಿ ಮೇಲೆ .ಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹಿಂದೆ ವಾಲ್ಮಿಕಿ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅರೆಸ್ಟ್ ಆಗಿದ್ದರು.

ಬಳ್ಳಾರಿಯ ನಗರ ಶಾಸಕ ನಾರಾ ಭರತ್ ರೆಡ್ಡಿ ನಿವಾಸದ ಮೇಲೆ ದಾಳಿ ಮಾಡಿರುವ ಇಡಿ ಅಧಿಕಾರಿಗಳು, ಮನೆಯ ಬಾಗಿಲು ಕ್ಲೋಸ್ ಮಾಡಿ ವಿಚಾರಣೆ ಮಾಡ್ತಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow