ಮದರ್ ಇಂಡಿಯಾಗೆ ಟಾಂಗ್ ಕೊಟ್ರಾ ದರ್ಶನ್!? ಗ್ರ್ಯಾಂಡ್ ಆಗಿ ಸಚ್ಚಿ ಬರ್ತಡೇ ಸೆಲಬ್ರೇಷನ್!

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ A2 ಆರೋಪಿ ಆಗಿರುವ ನಟ ದರ್ಶನ್ ಅವರು ಇತ್ತೀಚೆಗೆ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದರೆ ಪ್ರಕರಣ ನಡೆದ ಬೆನ್ನಲ್ಲೇ ದರ್ಶನ್ ಆಪ್ತ ಬಳಗದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ಸುಮಲತಾ ಕೊಂಚ ದೂರಾನೆ ಸರಿದರು. ಅಲ್ಲದೇ ಜೈಲಿಂದ ಬಿಡುಗಡೆ ಆದ ಬಳಿಕ ದರ್ಶನ್ ಅವರು ಸುಮಲತಾ, ಅಭಿಷೇಕ್ ಎಲ್ಲರನ್ನು ಇನ್ಸ್ಟಾದಲ್ಲಿ ಅನ್ ಫಾಲೋ ಕೂಡ ಮಾಡಿದ್ದರು.
ನಟ ದರ್ಶನ್ ಮಾಜಿ ಸಂಸದೆ ಸುಮಲತಾ ಅಂಬರೀಶ್ ಆತ್ಮ ಇಂಡುವಾಳು ಎಸ್.ಸಚ್ಚಿದಾನಂದರ ಹುಟ್ಟುಹಬ್ಬ ಆಚರಿಸಿದ್ದಾರೆ. ಇತ್ತೀಚೆಗೆ ನಡೆದ ಹುಟ್ಟುಹಬ್ಬ ಆಚರಣೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಒಂದು ಕಾಲದಲ್ಲಿ ಸುಮಲತಾರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಚ್ಚಿದಾನಂದ್ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗುವುದರ ಮೂಲಕ ದರ್ಶನ್ ಟಾಂಟ್ ನೀಡಿದರಾ ಎಂಬ ಪ್ರಶ್ನೆ ಶುರುವಾಗಿದೆ. ಈ ಹಿಂದೆ ಸುಮಲತಾ, ದರ್ಶನ್ಗೆ ಮಗನ ಸ್ಥಾನ ನೀಡಿದ್ದರು. ದರ್ಶನ್ ಕೂಡ ಮದರ್ ಇಂಡಿಯಾ ಎಂದು ಸಾರ್ವಜನಿಕವಾಗಿ ಹೇಳುತ್ತಿದ್ದರು. ಆದರೆ ದರ್ಶನ್ ಜೈಲು ಸೇರಿದಾಗ ಸುಮಲತಾ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಇದೆ. ಅಷ್ಟೇ ಅಲ್ಲದೇ ಇತ್ತೀಚೆಗೆ ನಡೆದ ಮೊಮ್ಮಗನ ನಾಮಕರಣಕ್ಕೂ ದರ್ಶನ್ಗೆ ಆಹ್ವಾನಿಸಿಲ್ಲ ಎನ್ನಲಾಗಿದೆ
ಕಷ್ಟಕ್ಕೆ ಸ್ಪಂದಿಸದ ಸುಮಲತಾ, ಅಭಿಷೇಕ್ರನ್ನ ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿದ್ದರು. ಆದ್ರೆ ಮಂಡ್ಯ ಬಿಜೆಪಿ ಮುಖಂಡ ಇಂಡುವಾಳು ಎಸ್. ಸಚ್ಚಿದಾನಂದ ಅವರು ದರ್ಶನ್ ಜೈಲಿನಲ್ಲಿದ್ದಾಗ ನೋಡಲು ಹಲವು ಬಾರಿ ತೆರಳಿದ್ದರು.
ಇದೀಗ ಸುಮಲತಾರ ಆಪ್ತನ ಬರ್ತ್ ಡೇಯನ್ನ ಶೂಟಿಂಗ್ ಸೆಟ್ನಲ್ಲೇ ನಟ ದರ್ಶನ್ ಸೆಲೆಬ್ರೇಟ್ ಮಾಡಿ ಕೌಂಟರ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಈ ಬರ್ತ್ ಡೇ ಪಾರ್ಟಿಯಲ್ಲಿ ನಿರ್ದೇಶಕ ದಿನಕರ್ ತೂಗುದೀಪ, ಕಿರುತೆರೆ ನಟಿ ನೇಹಾ ಗೌಡ ಪತಿ ಚಂದನ್ ಗೌಡ ಕೂಡ ಭಾಗಿಯಾಗಿದ್ದರು
ನಿಮ್ಮ ಪ್ರತಿಕ್ರಿಯೆ ಏನು?






