ಮಹಿಳೆ ಕಾಲ್ತುಳಿತ ಕೇಸ್: ಒಂದು ರಾತ್ರಿ ಜೈಲಲ್ಲೇ ಕಳೆದ ಐಕಾನ್ ಸ್ಟಾರ್! ಮುಂಜಾನೆಯೇ ರಿಲೀಸ್!

ಡಿಸೆಂಬರ್ 14, 2024 - 11:32
 0  15
ಮಹಿಳೆ ಕಾಲ್ತುಳಿತ ಕೇಸ್: ಒಂದು ರಾತ್ರಿ ಜೈಲಲ್ಲೇ ಕಳೆದ ಐಕಾನ್ ಸ್ಟಾರ್! ಮುಂಜಾನೆಯೇ ರಿಲೀಸ್!

ಮಹಿಳೆ ಕಾಲ್ತುಳಿತ ಕೇಸ್ ಗೆ ಸಂಬಂಧಿಸಿದಂತೆ ನಿನ್ನೆ ಅರೆಸ್ಟ್ ಆಗಿದ್ದ ಅಲ್ಲು ಅರ್ಜುನ್ ಅವರು ಒಂದು ರಾತ್ರಿ ಜೈಲಲ್ಲೇ ಕಳೆದು ಇಂದು ಮುಂಜಾನೆಯೇ ರಿಲೀಸ್ ಆಗಿದ್ದಾರೆ.

ತೆಲುಗು ನಟ ಅಲ್ಲು ಅರ್ಜುನ್ ಅವರನ್ನು ನಿನ್ನೆ ಬಂಧಿಸಲಾಗಿತ್ತು. ಡಿಸೆಂಬರ್ 4ರಂದು ಪುಷ್ಪಾ-2 ಸಿನಿಮಾ ನೋಡಲು ಬಂದಿದ್ದ ರೇವತಿ ಎನ್ನುವ ಮಹಿಳೆ ಕಾಲುತುಳಿತದಿಂದ ಸಾವನ್ನಪ್ಪಿದ್ದರು. ಹೈದ್ರಾಬಾದ್ ಸಂಧ್ಯಾ ಥಿಯೇಟರ್‌ಗೆ ಯಾವುದೇ ಸುರಕ್ಷತೆ ಕ್ರಮ ಇಲ್ಲದೇ ನಟ ಅಲ್ಲು ಅರ್ಜುನ್ ಬಂದಿದ್ದರಿಂದ ಕಾಲ್ತುಳಿತ ಉಂಟಾಗಿತ್ತು. ಇದಕ್ಕೆ ನೇರವಾಗಿ ಅಲ್ಲು ಅರ್ಜುನ್ ಕಾರಣ ಎಂದು ಮೃತ ರೇವತಿ ಪತಿ ದೂರು ನೀಡಿದ ಬೆನ್ನಲ್ಲೆ ಅಲ್ಲು ಅರ್ಜುನ್ ಅವರನ್ನು ಪೊಲೀಸರು ನಿನ್ನೆ ಬಂಧಿಸಿದ್ದರು. 

ಇದೆ ಪ್ರಕರಣದಲ್ಲಿ ನಿನ್ನೆಯೇ ಜಾಮೀನು ಸಿಕ್ಕಿದೆಯಾದರೂ   ಅಲ್ಲುಗೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಇದೀಗ ಜಾಮೀನು ಪ್ರಕ್ರಿಯೆ ಮುಗಿಸಿದ್ದು, ಬೆಳ್ಳಂ ಬೆಳಗ್ಗೆ ರಿಲೀಸ್ ಆಗಿದ್ದಾರೆ. 

ಸಂಧ್ಯಾ ಥಿಯೇಟರ್ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಆರೋಪಿ ಸ್ಥಾನದಲ್ಲಿ ಇರಿಸಿದ್ದಾರೆ. ‘ಪುಷ್ಪ 2’ ಚಿತ್ರದ ಪ್ರೀಮೀಯರ್ ಪ್ರದರ್ಶನದ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಥಿಯೇಟರ್‌ಗೆ ಹೋಗಿದ್ದರು. ಅಲ್ಲು ಅರ್ಜುನ್ ಆಗಮನದಿಂದ ಅಭಿಮಾನಿಗಳು ಒಮ್ಮೆಲೇ ಮುಗಿಬಿದ್ದರು. ಈ ಕಾರಣಕ್ಕೆ ಕಾಲ್ತುಳಿತ ಉಂಟಾಯಿತು. ಈ ಕಾಲ್ತುಳಿತದಲ್ಲಿ ರೇವತಿ ಹೆಸರಿನ ಮಹಿಳೆ ಸಾವನ್ನಪ್ಪಿದ್ದರು. ಅವರ ಮಗನಿಗೆ ಗಾಯಗಳಾಗಿವೆ. ಈ ಘಟನೆಗೆ ಸಂಬಂಧಿಸಿ ರೇವತಿ ಪತಿ ದೂರು ಮಾಡಿದ್ದರು. ಈ ಬೆನ್ನಲ್ಲೇ ಎಫ್​ಐಆರ್ ದಾಖಲಿಸಿರುವ ಪೊಲೀಸರು, ಅಲ್ಲು ಅರ್ಜುನ್ ಅವರನ್ನು ಎ11 ಆರೋಪಿ ಆಗಿ ಮಾಡಿದ್ದಾರೆ. ಜೊತೆಗೆ ಅವರನ್ನು ಬಂಧಿಸಲಾಗಿದೆ.

ಅಲ್ಲು ಅರ್ಜುನ್ ಟಾಲಿವುಡ್​ನ ಬೇಡಿಕೆಯ ನಟ. ಅವರು ಪ್ರತಿಷ್ಠೆ ಕಾಯ್ದುಕೊಂಡು ಬಂದವರು. ಈವರೆಗೆ ಅವರು ಜೈಲಿಗೆ ಹೋದವರಲ್ಲ. ಆದರೆ, ಅವರು ಈಗ ಈ ಪ್ರಕರಣದಲ್ಲಿ ಜೈಲು ಹಾಗೂ ಕೋರ್ಟ್​ಗೆ ಅಲೆದಾಡುವ ಪರಿಸ್ಥಿತಿ ಬಂದೊದಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow